ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮನೀಷ್ ಪಾಂಡೆ ನಾಯಕತ್ವದ ಬಳಗವು ಪಂಜಾಬ್ ತಂಡವನ್ನು ಎದುರಿಸಲಿದೆ. ಮನದೀಪ್ ಸಿಂಗ್ ನಾಯಕತ್ವದ ತಂಡವು ಗುಂಪಿನಲ್ಲಿರುವ ಬಲಿಷ್ಠ ತಂಡಗಳಲ್ಲಿ ಒಂದು. ಅನುಭವಿ ಯುವ ರಾಜ್ ಸಿಂಗ್, ಗುರುಕೀರತ್ ಸಿಂಗ್ ಮಾನ್, ಶುಭಮನ್ ಗಿಲ್, ಮನನ್ ವೊಹ್ರಾ ಅವರು ತಂಡದಲ್ಲಿದ್ದಾರೆ.