ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಹಾಕಿರುವ ವಿಡಿಯೊದಲ್ಲಿ ಸಕ್ಲೇನ್, ಧೋನಿಯ ನಾಯಕತ್ವ ಮತ್ತು ಆಟದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಧೋನಿಗೆ ಬೀಳ್ಕೊಡುಗೆ ಪಂದ್ಯವನ್ನು ಏರ್ಪಡಿಸುವಲ್ಲಿ ಬಿಸಿಸಿಐ ನಿರ್ಲಕ್ಷ್ಯ ತೋರಿದೆ‘ ಎಂದೂ ಟೀಕಿಸಿದ್ದರು. ಇದರಿಂದಾಗಿ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವರಿಗೆ ಛೀಮಾರಿ ಹಾಕಲಾಗಿದೆ.