ಬೆಂಗಳೂರು: ಯಲಹಂಕದ ಕೆರೆ ಅಂಗಳದಲ್ಲಿ ನಿರ್ಮಿಸಿರುವ ಮಹೇಶ್ವರಮ್ಮ ದೇವಸ್ಥಾನದ ಹಸಿಕರಗ ಮಂಟಪ ಉದ್ಘಾಟನೆ ಹಾಗೂ ಕುಂಭಾಭಿಷೇಕ ಸಮಾರಂಭ ಜರುಗಿತು.
ಬಿಬಿಎಂಪಿ ಅನುದಾನದಲ್ಲಿ ಕೆರೆಯ ಪ್ರವೇಶದ್ವಾರದಲ್ಲಿ ₹1.16 ಕೋಟಿ ವೆಚ್ಚದಲ್ಲಿ ಕಲ್ಯಾಣಿಯಲ್ಲಿ ನಿರ್ಮಿಸಿರುವ ಈ ಕರಗಮಂಟಪದ ಸುತ್ತಲೂ ಮಹಾ
ಭಾರತದ ಕಥೆ ಸಾರುವ 40 ವಿಗ್ರಹಗಳನ್ನು ಕೆತ್ತನೆ ಮಾಡಲಾಗಿದೆ. ಮಂಟಪದ ಮೇಲೆ 16 ಅಡಿ ಎತ್ತರದ ರಾಜಗೋಪುರ ನಿರ್ಮಿಸಲಾಗಿದೆ. ಇದರ ಶಿಲ್ಪಿಗಳು ಮುನಿಸ್ವಾಮಿ ಮತ್ತು ಮುರುಗೇಶ್ ತಂಡದವರು.
100x135 ಅಡಿ ವಿಸ್ತೀರ್ಣದಲ್ಲಿ ಕರಗ ಮಂಟಪ ಹಾಗೂ ಉಳಿದ ಜಾಗದಲ್ಲಿ ಉದ್ಯಾನ ಅಭಿವೃದ್ಧಿಪಡಿಸಲಾಗಿದೆ ಎಂದು ಯಲಹಂಕ ವಹ್ನಿಕುಲ ಕ್ಷತ್ರಿಯ ಮಂಡಳಿಯ ಸಂಚಾಲಕ ಮು.ಕೃಷ್ಣಮೂರ್ತಿ ತಿಳಿಸಿದರು.
‘ಯಲಹಂಕದಲ್ಲಿ ಪುರಾತನ ಕಾಲದಿಂದ ಐತಿಹಾಸಿಕ ಮಹೇಶ್ವರಮ್ಮನವರ ಕರಗ ಮಹೋತ್ಸವ ನಡೆದುಕೊಂಡುಬಂದಿದೆ. ಕರಗಮಂಟಪದ ನಿರ್ಮಾಣದಿಂದ ಕರಗಮ ಹೋತ್ಸವಕ್ಕೆ ಮತ್ತಷ್ಟು ಮೆರುಗು ಬರಲಿದೆ’ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ದ್ರೌಪದಿದೇವಿ ಆದಿಪರಾಶಕ್ತಿ ಮಹಾಸಂಸ್ಥಾನದ ಸಾಯಿಮಂಜುನಾಥ್ ಮಹಾರಾಜ್, ‘ಕರಗಮಂಟಪ ಯಲಹಂಕ ನಗರಕ್ಕೆ ಮುಕುಟಪ್ರಾಯದಂತಿದೆ. ಇದನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ಪ್ರವಾಸಿ ತಾಣವಾಗಿ ಪರಿವರ್ತನೆಯಾಗಲಿದೆ’ ಎಂದು ತಿಳಿಸಿದರು.
ಶಾಸಕರಾದ ಎಸ್.ಆರ್.ವಿಶ್ವನಾಥ್, ವಿಧಾನಪರಿಷತ್ ಸದಸ್ಯ ಪಿ.ಆರ್.ರಮೇಶ್, ಬಿಬಿಎಂಪಿ ಸದಸ್ಯರಾದ ಚಂದ್ರಮ್ಮ ಕೆಂಪೇಗೌಡ, ಪದ್ಮಾವತಿ ಅಮರನಾಥ್, ಗುಣಶೇಖರ್, ಯಲಹಂಕ ನಾಗರಿಕರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅ.ಬ. ಶಿವಕುಮಾರ್ ಇದ್ದರು.