ಹೊಸಕೋಟೆ: ಪಟ್ಟಣ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ.
ಸೂಲಿಬೆಲೆ ರಸ್ತೆಯ ಆಲಪ್ಪನಹಳ್ಳಿ ಬಳಿ ಬೈಕ್ಗೆ ಟೆಂಪೊ ಗುದ್ದಿದ್ದರಿಂದ ಸವಾರ ಚನ್ನಕೇಶವ (30) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇಲ್ಲಿನ ಲಕ್ಕೊಂಡಹಳ್ಳಿ ನಿವಾಸಿಯಾದ ಅವರು ಕೋಳಿ ಅಂಗಡಿ ಇಟ್ಟುಕೊಂಡಿದ್ದರು. ಉಪ್ಪಾರಹಳ್ಳಿ ಬಳಿಯ ದೇವಸ್ಥಾನಕ್ಕೆ ಹೋಗಿ ಹಿಂದಿರುಗುವಾಗ ಅಪಘಾತ ಸಂಭವಿಸಿದೆ ಎಂದು ಹೊಸಕೋಟೆ ಪೊಲೀಸರು ತಿಳಿಸಿದರು.
ಕೋಲಾರ ರಸ್ತೆಯ ದಂಡುಪಾಳ್ಯ ಗೇಟ್ ಬಳಿ ಲಾರಿಗೆ ಬೈಕ್ ಗುದ್ದಿದ್ದರಿಂದ ಸವಾರ ವಹಾಬ್ ಹುಸೇನ್ (25) ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಜಿಯಾ ವುಲ್ಲಾಖಾನ್ ತಲೆಗೆ ತೀವ್ರ ಪೆಟ್ಟು ಬಿದ್ದು, ನಗರದ ನಿಮ್ಹಾಣ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶ್ರೀನಿವಾಸಪುರದ ನಿವಾಸಿಗಳಾದ ಅವರು ಕೆಲಸದ ನಿಮಿತ್ತ ಬೆಂಗಳೂರಿಗೆ ಬೈಕ್ನಲ್ಲಿ ಬರುತ್ತಿದ್ದರು. ಲಾರಿ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಮಾಹಿತಿ ನೀಡಿದರು.