ಮೇ 4ರಂದು ಆಟಗಾರರ ಕರಡು ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಡ್ರಾ ಪ್ರಕ್ರಿಯೆಯ ಮೂಲಕ ಪೂಜಾರ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಎಸ್ಪಿಎಲ್ ಆಡಳಿತ ಮಂಡಳಿಯು ನಿರ್ಧರಿಸಿತು. ಬಿಸಿಸಿಐನ ಮಾಜಿ ಕಾರ್ಯರ್ಶಿ ನಿರಂಜನ್ ಶಾ, ಸ್ವತಃ ಚೇತೇಶ್ವರ ಪೂಜಾರ ಸೇರಿದಂತೆ ಹಲವು ಪದಾಧಿಕಾರಿಗಳ ಸಮ್ಮುಖದಲ್ಲಿ ಡ್ರಾ ನಡೆಸಲಾಯಿತು.