ನವದೆಹಲಿ (ಪಿಟಿಐ): ಬೆಂಗಳೂರಿನರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯ ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿಗಳನ್ನು ಆಹ್ವಾನಿಸಿದ್ದು,ರಾಹುಲ್ ದ್ರಾವಿಡ್ಅರ್ಜಿ ಹಾಕುವರೇ ಎಂಬ ಪ್ರಶ್ನೆ ಕ್ರಿಕೆಟ್ ಆಸಕ್ತರ ಮುಂದಿದೆ.
ಶನಿವಾರ ಆಯ್ಕೆ ಪ್ರಕ್ರಿಯೆಗೆ ಬಿಸಿಸಿಐ ಆದೇಶ ಹೊರಡಿಸಿದ್ದು, ಇದಕ್ಕೆ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.ಭಾರತ ‘ಎ’ ಮತ್ತು 19 ವರ್ಷದೊಳಗಿನ ಕ್ರಿಕೆಟ್ ತಂಡಗಳ ಯಶಸ್ವಿ ಕೋಚ್ ಆಗಿರುವ ದ್ರಾವಿಡ್ ನಿರ್ಧಾರದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಬಿಸಿಸಿಐನ ಹುದ್ದೆಗಳಿಗೂ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ. ದ್ರಾವಿಡ್ ಅವರು ಯಶಸ್ವಿಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸುವುದರಿಂದ ಒಂದು ವೇಳೆ ಅರ್ಜಿ ಹಾಕಿದರೆ ಪ್ರಬಲ ಸ್ಪರ್ಧೆಯನ್ನು ಒಡ್ಡಲಿದ್ದಾರೆ.
ವಿಶ್ವಕಪ್ ನಂತರ ಭಾರತ ಕ್ರಿಕೆಟ್ ತಂಡದ ಕೋಚ್ ರವಿಶಾಸ್ತ್ರಿ ಸೇವಾವಧಿ ಮುಗಿಯಲಿದ್ದು, ಅವರೂ ಹುದ್ದೆಯ ಆಕಾಂಕ್ಷಿ ಆಗಲಿದ್ದಾರೆ ಎಂದುಬಿಸಿಸಿಐ ಆಡಳಿತಾಧಿಕಾರಿಯೊಬ್ಬರು ಹೇಳಿದ್ದಾರೆ.