‘ಅಜಿಂಕ್ಯ, ಹನುಮವಿಹಾರಿ ಮತ್ತು ಶ್ರೇಯಸ್ ಅಯ್ಯರ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವುದು ಸ್ವಲ್ಪ ಕ್ಲಿಷ್ಟಕರ. ಅಜಿಂಕ್ಯ ಅನುಭವಿ ಆಟಗಾರ. ಶ್ರೇಯಸ್ ತಮ್ಮ ಪದಾರ್ಪಣೆಯಲ್ಲಿಯೇ ಶತಕ ಬಾರಿಸಿದ್ದಾರೆ. ಹನುಮವಿಹಾರಿ ಕೂಡ ತಂಡದ ಗೆಲುವುಗಳಲ್ಲಿ ಹಲವು ಬಾರಿ ಕಾಣಿಕೆ ನೀಡಿದ್ದಾರೆ. ಈ ಕುರಿತು ತಂಡದ ವ್ಯವಸ್ಥಾಪಕರು ನಿರ್ಧಾರ ಕೈಗೊಳ್ಳುವರು’ ಎಂದು ರಾಹುಲ್ ಹೇಳಿದರು.