ಕಳೆದ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಆರ್. ಸಮರ್ಥ್ ಬದಲಿಗೆ ಲಿಯಾನ್ ಖಾನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಬೆಂಗಳೂರು ಯುನೈಟೆಡ್ ಕ್ರಿಕೆಟ್ ಕ್ಲಬ್ (ಬಿಯುಸಿಸಿ) ತಂಡವನ್ನು ಪ್ರತಿನಿಧಿಸುವ ಲಿಯಾನ್ ಖಾನ್ ಬಲಗೈ ಬ್ಯಾಟ್ಸ್ಮನ್ ಆಗಿದ್ದಾರೆ. ಅವರಿಗೆ ಇದು ಪದಾರ್ಪಣೆ ಪಂದ್ಯ.
ಟಾಸ್ ಗೆದ್ದ ಛತ್ತೀಸಗಡ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ತಂಡದ ಆರಂಭಿಕ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಇನಿಂಗ್ಸ್ನ ಮೂರನೇ ಓವರ್ನಲ್ಲಿ ಔಟಾದರು. ಬಳಿಕ ಕ್ರೀಸ್ಗೆ ಬಂದ ಲಿಯಾನ್ ಖಾನ್ ಬೌಂಡರಿ ಹೊಡೆದು ಖಾತೆ ತೆರೆದರು. ಆದರೆ ಒಂಬತ್ತು ರನ್ ಗಳಿಸಿ ಔಟಾದರು.