ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಕರ್ನಾಟಕ ತಂಡ, ನಾಯಕ ಮಯಂಕ್ ಅಗರವಾಲ್ ಸಿಡಿಸಿದ ದ್ವಿಶತಕದ (249 ರನ್) ಬಲದಿಂದ 407 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ನಾಯಕ ಅರ್ಪಿತ್ (202 ರನ್), ಅನುಭವಿ ಶೆಲ್ಡನ್ ಜಾಕ್ಸನ್ (160 ರನ್) ಹಾಗೂ ಚಿರಾಗ್ ಜಾನಿ (72 ರನ್) ಅವರ ಅಮೋಘ ಬ್ಯಾಟಿಂಗ್ ಬಲದಿಂದ 527 ರನ್ ಕಲೆಹಾಕಿತ್ತು.