<p><strong>ಬೆಂಗಳೂರು</strong>: ಹೋದ ಜೂನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿ ಐಪಿಎಲ್ ಗೆದ್ದ ಮರುದಿನವೇ ಕಾಲ್ತುಳಿತದ ದುರಂತ ನಡೆದಿತ್ತು. ಆ ಕಹಿ ಮರೆಯುವ ಸವಾಲಿನ ಜೊತೆಗೆ ಈಗ ಫ್ರಾಂಚೈಸಿಯ ಮುಂದಿನ ಮಾಲೀಕತ್ವದ ಭವಿಷ್ಯವೂ ನಿರ್ಧಾರವಾಗುವ ಹಂತದಲ್ಲಿದೆ. ಇದೆಲ್ಲದರ ನಡುವೆ ಆರ್ಸಿಬಿ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನಕ್ಕೆ ಸಜ್ಜಾಗಿದೆ.</p><p>ಇದೇ ತಿಂಗಳ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ 19ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ತಂಡವು, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.</p><p>17 ವರ್ಷಗಳ ಬಳಿಕ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಜತ್ ಪಾಟೀದಾರ್ ನೇತೃತ್ವದ ತಂಡವು ಟ್ರೋಫಿ ಗೆದ್ದಾಗ ಮಧ್ಯರಾತ್ರಿ ಸಮೀಪಿಸಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತು. ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಅಂದು ಭಾವೋದ್ವೇಗಕ್ಕೆ ಒಳಗಾಗಿದ್ದರು. ಮರುದಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಅಭಿಮಾನಿಗಳು ಸಾವಿಗೀಡಾಗಿದ್ದರು. ವಿಜಯದ ಸಂಭ್ರಮ ಒಂದೇ ದಿನಕ್ಕೆ ಕಳೆಗುಂದಿತು.</p><p>ಈ ಮಧ್ಯೆ, ಆರ್ಸಿಬಿಯ ಮಾಲೀಕತ್ವ ವಹಿಸಿರುವ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಡಿಯಾಜಿಯೊ ಅಂಗಸಂಸ್ಥೆ) ನವೆಂಬರ್ನಲ್ಲಿ ಫ್ರಾಂಚೈಸಿಯ ಮಾರಾಟಕ್ಕೆ ಆಸಕ್ತಿ ತೋರಿತು. ಈ ತಿಂಗಳ ಕೊನೆಯಲ್ಲಿ ಹೊಸ ಮಾಲೀಕತ್ವ ಅಂತಿಮಗೊಳ್ಳುವ ನಿರೀಕ್ಷೆಯಿದೆ.</p><p>ಇದರ ನಡುವೆ ಆರ್ಸಿಬಿ ಕಿರೀಟ ಉಳಿಸಿಕೊಳ್ಳುವ ಗುರಿಯಲ್ಲಿದೆ. ಪ್ರಮುಖ ಆಟಗಾರರು ತಂಡದಲ್ಲಿ ಉಳಿದುಕೊಂಡಿ ದ್ದಾರೆ. ಪ್ರಧಾನ ಆಕರ್ಷಣೆ ವಿರಾಟ್ ಕೊಹ್ಲಿ, ಉತ್ಸಾಹಿ ನಾಯಕ ರಜತ್ ಪಾಟೀದಾರ್, ಇಂಗ್ಲೆಂಡ್ನ ತಾರೆ ಫಿಲ್ ಸಾಲ್ಟ್ ಜೊತೆ ಅತ್ಯುತ್ತಮ ಲಯದಲ್ಲಿರುವ ಸ್ಥಳೀಯ ಯುವ ಬ್ಯಾಟರ್ ದೇವದತ್ತ ಪಡಿಕ್ಕಲ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.</p><p>ಫ್ರಾಂಚೈಸಿಯು ಈ ಬಾರಿ ಆಲ್ರೌಂಡರ್ ವೆಂಕಟೇಶ ಅಯ್ಯರ್ ಮತ್ತು ಇಂಗ್ಲೆಂಡ್ನ ಎಡಗೈ ಆಟಗಾರ ಜೇಕಬ್ ಬೆಥೆಲ್ ಅವರನ್ನೂ ಸೆಳೆದಿದೆ. ಕಳೆದ ಋತುವಿನಲ್ಲಿ ಕೆಕೆಆರ್ ತಂಡದಲ್ಲಿ ವಿಫಲರಾಗಿದ್ದ ಅಯ್ಯರ್ ಈ ಬಾರಿ ಅದನ್ನು ಸರಿದೂಗಿಸಲು ಕಾತರರಾಗಿ ದ್ದಾರೆ. ಬೆಥೆಲ್ ತಮ್ಮ ಸಾಮರ್ಥ್ಯ ಏನೆಂಬುದನ್ನು ಇತ್ತೀಚಿನ ವಿಶ್ವಕಪ್ನಲ್ಲೂ ತೋರಿದ್ದಾರೆ. ಅವರು ಪಂದ್ಯಕ್ಕೆ ತಿರುವು ನೀಡಬಲ್ಲವರು. ಒಟ್ಟಿನಲ್ಲಿ ತಂಡವು ಅನುಭವಿ ಮತ್ತು ಯುವಶಕ್ತಿಯ ಹದವಾದ ಮಿಶ್ರಣವಾಗಿದೆ.</p><p>ಆದರೆ ಸ್ವಲ್ಪ ಕಳವಳಕ್ಕೆ ಕಾರಣವಾಗಿರುವ ಅಂಶವೇನಾದರೂ ಇದ್ದರೆ ಅದು ಬೌಲಿಂಗ್ ವಿಭಾಗದ್ದು. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಪ್ರಮುಖ ವೇಗದ ಬೌಲರ್ ಜೋಶ್ ಹ್ಯಾಜಲ್ವುಡ್ ಆರಂಭದ ಕೆಲವು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ವರ್ಷದಿಂದ ವೈಯಕ್ತಿಕ ಜೀವನದ ತುಮುಲಗಳಲ್ಲಿ ಸಿಲುಕಿ ಕಾನೂನು ಹೋರಾಟದಲ್ಲಿರುವ ಯಶ್ ದಯಾಳ್ ಮನೋಬಲ ಯಾವ ಮಟ್ಟದಲ್ಲಿದೆ ಎಂದು ಹೇಳುವುದು ಕಷ್ಟ. ಹೀಗಾಗಿ ಭುವನೇಶ್ವರ ಕುಮಾರ್ ಮತ್ತು ಜೇಕಬ್ ಡಫಿ ಮೇಲೆ ಹೆಚ್ಚಿನ ವೇಗದ ದಾಳಿಯ ಹೊಣೆಯಿದೆ.</p><p>ಆರ್ಸಿಬಿ ತಂಡವು ಚಾಂಪಿಯನ್ ಕಿರೀಟ ಉಳಿಸಿಕೊಳ್ಳಬೇಕಾದರೆ ಬ್ಯಾಟಿಂಗ್ ಪಡೆಯ ಪಾತ್ರ ನಿರ್ಣಾಯಕ. ಬೌಲಿಂಗ್ ವಿಭಾಗವು ಹಿಂದೆಯೂ ಅದರ ಶಕ್ತಿಯಾಗಿರಲಿಲ್ಲ.</p>.<h2>ಆರ್ಸಿಬಿ ತಂಡ</h2><p>ರಜತ್ ಪಾಟೀದಾರ್ (ನಾಯಕ), ದೇವದತ್ತ ಪಡಿಕ್ಕಲ್, ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್ (ಮೂವರೂ ವಿಕೆಟ್ ಕೀಪರ್ಸ್), ಕೃಣಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಶ್ವಾಲ್, ಮಂಗೇಶ್ ಯಾದವ್, ವಿಕಿ ಒಟ್ಸ್ವಾಲ್, ವಿಹಾನ್ ಮಲ್ಹೋತ್ರ, ಕನಿಷ್ಕ್ ಚೌಹಾನ್, ಜೋಶ್ ಹ್ಯಾಜಲ್ವುಡ್, ರಸಿಕ್ ಧಾರ್, ಸುಯಾಶ್ ಶರ್ಮಾ, ಭುವನೇಶ್ವರ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜೇಕಬ್ ಡಫಿ, ಯಶ್ ದಯಾಳ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಹೋದ ಜೂನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಾರಿ ಐಪಿಎಲ್ ಗೆದ್ದ ಮರುದಿನವೇ ಕಾಲ್ತುಳಿತದ ದುರಂತ ನಡೆದಿತ್ತು. ಆ ಕಹಿ ಮರೆಯುವ ಸವಾಲಿನ ಜೊತೆಗೆ ಈಗ ಫ್ರಾಂಚೈಸಿಯ ಮುಂದಿನ ಮಾಲೀಕತ್ವದ ಭವಿಷ್ಯವೂ ನಿರ್ಧಾರವಾಗುವ ಹಂತದಲ್ಲಿದೆ. ಇದೆಲ್ಲದರ ನಡುವೆ ಆರ್ಸಿಬಿ ಪ್ರಶಸ್ತಿ ಉಳಿಸಿಕೊಳ್ಳುವ ಅಭಿಯಾನಕ್ಕೆ ಸಜ್ಜಾಗಿದೆ.</p><p>ಇದೇ ತಿಂಗಳ 28ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ 19ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ತಂಡವು, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.</p><p>17 ವರ್ಷಗಳ ಬಳಿಕ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಜತ್ ಪಾಟೀದಾರ್ ನೇತೃತ್ವದ ತಂಡವು ಟ್ರೋಫಿ ಗೆದ್ದಾಗ ಮಧ್ಯರಾತ್ರಿ ಸಮೀಪಿಸಿದ್ದು, ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತು. ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಆಟಗಾರರು ಅಂದು ಭಾವೋದ್ವೇಗಕ್ಕೆ ಒಳಗಾಗಿದ್ದರು. ಮರುದಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಅಭಿಮಾನಿಗಳು ಸಾವಿಗೀಡಾಗಿದ್ದರು. ವಿಜಯದ ಸಂಭ್ರಮ ಒಂದೇ ದಿನಕ್ಕೆ ಕಳೆಗುಂದಿತು.</p><p>ಈ ಮಧ್ಯೆ, ಆರ್ಸಿಬಿಯ ಮಾಲೀಕತ್ವ ವಹಿಸಿರುವ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಡಿಯಾಜಿಯೊ ಅಂಗಸಂಸ್ಥೆ) ನವೆಂಬರ್ನಲ್ಲಿ ಫ್ರಾಂಚೈಸಿಯ ಮಾರಾಟಕ್ಕೆ ಆಸಕ್ತಿ ತೋರಿತು. ಈ ತಿಂಗಳ ಕೊನೆಯಲ್ಲಿ ಹೊಸ ಮಾಲೀಕತ್ವ ಅಂತಿಮಗೊಳ್ಳುವ ನಿರೀಕ್ಷೆಯಿದೆ.</p><p>ಇದರ ನಡುವೆ ಆರ್ಸಿಬಿ ಕಿರೀಟ ಉಳಿಸಿಕೊಳ್ಳುವ ಗುರಿಯಲ್ಲಿದೆ. ಪ್ರಮುಖ ಆಟಗಾರರು ತಂಡದಲ್ಲಿ ಉಳಿದುಕೊಂಡಿ ದ್ದಾರೆ. ಪ್ರಧಾನ ಆಕರ್ಷಣೆ ವಿರಾಟ್ ಕೊಹ್ಲಿ, ಉತ್ಸಾಹಿ ನಾಯಕ ರಜತ್ ಪಾಟೀದಾರ್, ಇಂಗ್ಲೆಂಡ್ನ ತಾರೆ ಫಿಲ್ ಸಾಲ್ಟ್ ಜೊತೆ ಅತ್ಯುತ್ತಮ ಲಯದಲ್ಲಿರುವ ಸ್ಥಳೀಯ ಯುವ ಬ್ಯಾಟರ್ ದೇವದತ್ತ ಪಡಿಕ್ಕಲ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.</p><p>ಫ್ರಾಂಚೈಸಿಯು ಈ ಬಾರಿ ಆಲ್ರೌಂಡರ್ ವೆಂಕಟೇಶ ಅಯ್ಯರ್ ಮತ್ತು ಇಂಗ್ಲೆಂಡ್ನ ಎಡಗೈ ಆಟಗಾರ ಜೇಕಬ್ ಬೆಥೆಲ್ ಅವರನ್ನೂ ಸೆಳೆದಿದೆ. ಕಳೆದ ಋತುವಿನಲ್ಲಿ ಕೆಕೆಆರ್ ತಂಡದಲ್ಲಿ ವಿಫಲರಾಗಿದ್ದ ಅಯ್ಯರ್ ಈ ಬಾರಿ ಅದನ್ನು ಸರಿದೂಗಿಸಲು ಕಾತರರಾಗಿ ದ್ದಾರೆ. ಬೆಥೆಲ್ ತಮ್ಮ ಸಾಮರ್ಥ್ಯ ಏನೆಂಬುದನ್ನು ಇತ್ತೀಚಿನ ವಿಶ್ವಕಪ್ನಲ್ಲೂ ತೋರಿದ್ದಾರೆ. ಅವರು ಪಂದ್ಯಕ್ಕೆ ತಿರುವು ನೀಡಬಲ್ಲವರು. ಒಟ್ಟಿನಲ್ಲಿ ತಂಡವು ಅನುಭವಿ ಮತ್ತು ಯುವಶಕ್ತಿಯ ಹದವಾದ ಮಿಶ್ರಣವಾಗಿದೆ.</p><p>ಆದರೆ ಸ್ವಲ್ಪ ಕಳವಳಕ್ಕೆ ಕಾರಣವಾಗಿರುವ ಅಂಶವೇನಾದರೂ ಇದ್ದರೆ ಅದು ಬೌಲಿಂಗ್ ವಿಭಾಗದ್ದು. ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಪ್ರಮುಖ ವೇಗದ ಬೌಲರ್ ಜೋಶ್ ಹ್ಯಾಜಲ್ವುಡ್ ಆರಂಭದ ಕೆಲವು ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ. ವರ್ಷದಿಂದ ವೈಯಕ್ತಿಕ ಜೀವನದ ತುಮುಲಗಳಲ್ಲಿ ಸಿಲುಕಿ ಕಾನೂನು ಹೋರಾಟದಲ್ಲಿರುವ ಯಶ್ ದಯಾಳ್ ಮನೋಬಲ ಯಾವ ಮಟ್ಟದಲ್ಲಿದೆ ಎಂದು ಹೇಳುವುದು ಕಷ್ಟ. ಹೀಗಾಗಿ ಭುವನೇಶ್ವರ ಕುಮಾರ್ ಮತ್ತು ಜೇಕಬ್ ಡಫಿ ಮೇಲೆ ಹೆಚ್ಚಿನ ವೇಗದ ದಾಳಿಯ ಹೊಣೆಯಿದೆ.</p><p>ಆರ್ಸಿಬಿ ತಂಡವು ಚಾಂಪಿಯನ್ ಕಿರೀಟ ಉಳಿಸಿಕೊಳ್ಳಬೇಕಾದರೆ ಬ್ಯಾಟಿಂಗ್ ಪಡೆಯ ಪಾತ್ರ ನಿರ್ಣಾಯಕ. ಬೌಲಿಂಗ್ ವಿಭಾಗವು ಹಿಂದೆಯೂ ಅದರ ಶಕ್ತಿಯಾಗಿರಲಿಲ್ಲ.</p>.<h2>ಆರ್ಸಿಬಿ ತಂಡ</h2><p>ರಜತ್ ಪಾಟೀದಾರ್ (ನಾಯಕ), ದೇವದತ್ತ ಪಡಿಕ್ಕಲ್, ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋರ್ಡಾನ್ ಕಾಕ್ಸ್ (ಮೂವರೂ ವಿಕೆಟ್ ಕೀಪರ್ಸ್), ಕೃಣಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ವೆಂಕಟೇಶ್ ಅಯ್ಯರ್, ಸಾತ್ವಿಕ್ ದೇಶ್ವಾಲ್, ಮಂಗೇಶ್ ಯಾದವ್, ವಿಕಿ ಒಟ್ಸ್ವಾಲ್, ವಿಹಾನ್ ಮಲ್ಹೋತ್ರ, ಕನಿಷ್ಕ್ ಚೌಹಾನ್, ಜೋಶ್ ಹ್ಯಾಜಲ್ವುಡ್, ರಸಿಕ್ ಧಾರ್, ಸುಯಾಶ್ ಶರ್ಮಾ, ಭುವನೇಶ್ವರ ಕುಮಾರ್, ನುವಾನ್ ತುಷಾರ, ಅಭಿನಂದನ್ ಸಿಂಗ್, ಜೇಕಬ್ ಡಫಿ, ಯಶ್ ದಯಾಳ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>