<p><em><strong>‘ಈ ಸಲ ಕಪ್ ನಮ್ದೆ..’</strong></em></p><p><em><strong>ಎರಡು ವರ್ಷಗಳ ಮೊದಲು ಈ ಸ್ಲೋಗನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಅಪ್ಯಾಯಮಾನವಾಗಿತ್ತು. ಆದರೆ ಟೀಕಾಕಾರರಿಗೆ ವ್ಯಂಗ್ಯದ ಸರಕಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಜಾಲಾಡಿದರೆ ಈಗಲೂ ಹಳೆಯ ಮೀಮ್ಗಳು, ಕಾರ್ಟೂನ್ಗಳು ಕಾಣುತ್ತವೆ. ಆದರೆ ಅಂದು ಟೀಕಿಸಿದವರೆಲ್ಲರೂ ಈಗ ಸುಮ್ಮನೇ ನಿಂತು ಚಪ್ಪಾಳೆ ತಟ್ಟುವಂತಾಗಿದೆ. ಹೌದು; ಆರ್ಸಿಬಿ ತಂಡದ ಯಶೋಗಾಥೆಯ ಸಾರಾಂಶ ಇದು. ಇದರ ಹಿಂದೆ ತಂಡದ ಆಟಗಾರರ ಮತ್ತು ನೆರವು ಸಿಬ್ಬಂದಿಯ ಶ್ರಮ ಇದೆ. ಕಳೆದ ಎರಡು ವರ್ಷಗಳ ಈ ತಂಡದ ವರ್ಚಸ್ಸನ್ನು ಬದಲಿಸಿದ ಮತ್ತು ಸತತ ಎರಡು ಬಾರಿ ಕಪ್ ಗೆದ್ದುಕೊಂಡ ಪ್ರಮುಖ ಆಟಗಾರರ ಕಾಣಿಕೆಯ ಕುರಿತ ಇಲ್ಲಿದೆ.</strong></em> </p>.<p><strong>* ಕಲಾತ್ಮಕ ಕೊಹ್ಲಿ</strong> </p>.<p>2008ರಲ್ಲಿ ವಿರಾಟ್ ಕೊಹ್ಲಿ ಆರ್ಸಿಬಿಗೆ ಬಂದಾಗ 19 ವರ್ಷದ ಹುಡುಗ. ಯುವ ವಿಶ್ವಕಪ್ ಗೆದ್ದ ಭಾರತ ತಂಡವನ್ನು ಮುನ್ನಡೆಸಿದ ಅನುಭವದೊಂದಿಗೆ ಐಪಿಎಲ್ಗೆ ಬಂದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಆರ್ಸಿಬಿಯೊಂದಿಗೆ ತಾವೂ ತಾರೆಯಾಗಿ ಬೆಳೆದಿದ್ದಾರೆ. ‘ಚೇಸಿಂಗ್ ಮಾಸ್ಟರ್’ ಎಂಬ ಬಿರುದು ಗಳಿಸುವಷ್ಟರ ಮಟ್ಟಿಗೆ ಅವರ ಆಟ ಹದಗೊಂಡಿದೆ. ಈ ಸಲದ ಐಪಿಎಲ್ ಫೈನಲ್ನಲ್ಲಿ ಅವರ ಅಜೇಯ ಅರ್ಧಶತಕವು ತಂಡದ ಗೆಲುವಿಗೆ ಕಾರಣವಾಯಿತು. ಕಳೆದ ಎರಡು ದಶಕಗಳ ವೃತ್ತಿಜೀವನದಲ್ಲಿ ಎಲ್ಲ ಮಾದರಿಗಳಲ್ಲಿಯೂ ಚೇಸಿಂಗ್ ಮೂಲಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇಷ್ಟಾದರೂ ಟಿ20 ಕ್ರಿಕೆಟ್ ಆಡುವ ಅವರ ಶೈಲಿಯಲ್ಲಿ ಸಾಂಪ್ರದಾಯಿಕ ಕೌಶಲಗಳನ್ನು ಬಿಟ್ಟಿಲ್ಲ. ಅಸಾಂಪ್ರದಾಯಿಕ ಹೊಡೆತಗಳು ಅವರ ಆಟದಲ್ಲಿ ಕಾಣುವುದಿಲ್ಲ. ನಾಲ್ಕು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ ಅವರು ಹೊಡೆದಿದ್ದ ಎರಡು ಸಿಕ್ಸರ್ಗಳು ಇಂದಿಗೂ ಜನಜನಿತ. ಕ್ರಿಕೆಟ್ ಮೂಲಪಾಠವನ್ನು ಸರಿಯಾಗಿ ಅಭ್ಯಾಸ ಮಾಡಿದವರು ಯಾವುದೇ ಮಾದರಿಯಲ್ಲಿಯೂ ಯಶಸ್ವಿಯಾಗುತ್ತಾರೆ ಎಂಬುದಕ್ಕೆ ವಿರಾಟ್ ನಿದರ್ಶನವಾಗುತ್ತಾರೆ. 37ನೇ ವಯಸ್ಸಿನಲ್ಲಿಯೂ ಅವರು ಕಾಪಾಡಿಕೊಂಡಿರುವ ಫಿಟ್ನೆಸ್ ಕೂಡ ಅನುಕರಣೀಯ. </p>.<p><strong>* ಬರ್ತಡೇ ಬಾಯ್ ರಜತ್</strong></p>.<p>ರಜತ್ ಪಾಟೀದಾರ್ ಅವರು ಸೋಮವಾರ 33ಕ್ಕೆ ವಸಂತಕ್ಕೆ ಕಾಲಿಟ್ಟರು. ವಿರಾಟ್ ನಂತರ ನಾಯಕರನ್ನಾಗಿ ಯಾರನ್ನು ಸಿದ್ಧಗೊಳಿಸಬೇಕು ಎಂಬ ಪ್ರಶ್ನೆಗೆ ಸಿಕ್ಕ ಉತ್ತರ ರಜತ್. ಆದರೆ ಅವರ ಅದೃಷ್ಟವೋ, ಆರ್ಸಿಬಿಯ ಸೌಭಾಗ್ಯವೋ ಗೊತ್ತಿಲ್ಲ. ಅವರು ನಾಯಕತ್ವ ವಹಿಸಿಕೊಂಡ ವರ್ಷವೇ ತಂಡವು ಚಾಂಪಿಯನ್ ಆಯಿತು. 17 ಆವೃತ್ತಿಗಳಲ್ಲಿ ವಿರಾಟ್ ಸೇರಿದಂತೆ ಹಲವು ದಿಗ್ಗಜರು ನಾಯಕತ್ವ ವಹಿಸಿದಾಗಲೂ ಒಲಿಯದ ಪ್ರಶಸ್ತಿ ರಜತ್ ಅವರಿಗೆ ಲಭಿಸಿತು. ಅಷ್ಟೇ ಅಲ್ಲ. ಸತತ ಎರಡನೇ ಸಲ ಗೆದ್ದು ಮಹೆಂದ್ರಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಅವರ ಸಾಲಿನಲ್ಲಿ ಬಂದು ನಿಂತರು. ಆದರೆ ರಜತ್ ಅವರು ಈ ಮಟ್ಟಕ್ಕೆ ಬರಲು ಕಠಿಣ ಹಾದಿ ಸವೆಸಿದರು. ಮಧ್ಯಪ್ರದೇಶದ ಇಂದೋರ್ನ ರಜತ್ ರಣಜಿ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದರು. ಅದರಿಂದಾಗಿ 2021ರಲ್ಲಿ ಆರ್ಸಿಬಿಯು ₹ 20 ಲಕ್ಷ ನೀಡಿ ಅವರನ್ನು ಖರೀದಿಸಿತು. ಆದರೆ ಆ ವರ್ಷ ಅವರು ಗಳಿಸಿದ್ದು 71 ರನ್ ಮಾತ್ರ. ಅದರಿಂದಾಗಿ ರಿಲೀಸ್ ಆದರು. 2022ರ ಹರಾಜು ಪ್ರಕ್ರಿಯೆಯಲ್ಲಿ ಅವರನ್ನು ಯಾವುದೇ ಫ್ರ್ಯಾಂಚೈಸಿಯು ಖರೀದಿಸಲಿಲ್ಲ. ನಂತರದ ಅವಧಿಯಲ್ಲಿ ಆರ್ಸಿಬಿಯಲ್ಲಿ ಗಾಯಗೊಂಡಿದ್ದ ಆಟಗಾರನ ಬದಲಿಗೆ ಆರ್ಸಿಬಿಯಲ್ಲಿ ಸ್ಥಾನ ಪಡೆದರು. ಅದೇ ವರ್ಷ ಎಲಿಮಿನೇಟರ್ನಲ್ಲಿ ಭರ್ಜರಿ ಶತಕ ಗಳಿಸಿದರು. ಆದರೆ ಗಾಯದ ಸಮಸ್ಯೆಯಿಂದ 2023ರಲ್ಲಿ ಆಡಲು ಸಾಧ್ಯವಾಗಲಿಲ್ಲ. 2024ರಲ್ಲಿ 15 ಪಂದ್ಯಗಳನ್ನು ಆಡಿ 395 ರನ್ ಗಳಿಸಿದರು. ನಂತರ ಅಚ್ಚರಿಯ ನಿರ್ಧಾರ ತೆಗೆದುಕೊಂಡ ಆರ್ಸಿಬಿಯು ಮೃದುಭಾಷಿ ಮತ್ತು ತೀಕ್ಷ್ಣ ಯೋಚನಾಲಹರಿಯ ರಜತ್ ಅವರಿಗೆ ನಾಯಕನ ಪಟ್ಟ ಕಟ್ಟಿತು. </p>.<p><strong>* ಕನ್ನಡಿಗ ಪಡಿಕ್ಕಲ್ ಆಟ</strong></p>.<p>ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ಚಿಕ್ಕವರಿದ್ದಾಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಪ್ಪನೊಂದಿಗೆ ಬಂದು ಆರ್ಸಿಬಿ ಪಂದ್ಯ ವೀಕ್ಷಿಸುತ್ತಿದ್ದರು. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಅವಂತಹ ದಿಗ್ಗಜರ ಆಟವನ್ನು ಆನಂದಿಸುತ್ತಿದ್ದರು. ಇದೀಗ ಅದೇ ವಿರಾಟ್ ಅವರೊಂದಿಗೆ ಡ್ರೆಸಿಂಗ್ ರೂಮ್ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ನೆಚ್ಚಿನ್ ಆರ್ಸಿಬಿ ತಂಡವು ಎರಡು ಪ್ರಶಸ್ತಿ ಗೆಲ್ಲಲು ಉಪಯುಕ್ತ ಕಾಣಿಕೆ ನೀಡಿದ್ದಾರೆ. ಅದರಲ್ಲೂ ಈ ಬಾರಿ ಆರಂಭಿಕರಾಗಿ ಆಡಿದ್ದ ಫಿಲ್ ಸಾಲ್ಟ್ ಸಫಲರಾಗಿರಲಿಲ್ಲ. ಅವರು ಗಾಯಗೊಂಡಾಗ ಆಡಿದ್ದ ಜೇಕಬ್ ಬೆಥೆಲ್ ಕೂಡ ರನ್ ಗಳಿಸಲಿಲ್ಲ. ಆ ಸಂದರ್ಭದಲ್ಲಿ ದೇವದತ್ತ ಅವರು ವಿರಾಟ್ ಕೊಹ್ಲಿಯೊಂದಿಗೆ ಜೊತೆಯಾಟಗಳನ್ನು ಕಟ್ಟಿದರು. ಇನಿಂಗ್ಸ್ಗೆ ಬಲ ತುಂಬಿದರು. ಕಳೆದ ಋತುವಿನಲ್ಲಿ ಅವರು ರಣಜಿ ಟ್ರೋಫಿ, ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟೂರ್ನಿಗಳಲ್ಲಿ ರನ್ ಹೊಳೆ ಹರಿಸಿದ್ದರು. ರಣಜಿ ಟೂರ್ನಿಯ ಫೈನಲ್ನಲ್ಲಿ ಕರ್ನಾಟಕದ ನಾಯಕರಾಗಿದ್ದರು. </p>.<p><strong>* ಭುವಿ ಎಂಬ ಸ್ವಿಂಗ್ ಸುಲ್ತಾನ</strong></p>.<p>‘ಸೀಕ್ರೆಟ್ ಗೊತ್ತಿದ್ದಿದ್ದರೆ ಪ್ರತಿವರ್ಷವೂ ಇಷ್ಟೇ ವಿಕೆಟ್ಗಳನ್ನು ತೆಗೆದುಕೊಳ್ಳುತ್ತಿದ್ದೆ. ಈ ವರ್ಷ ನನ್ನ ಶ್ರಮಕ್ಕೆ ತಕ್ಕ ಫಲ ಸಿಗುತ್ತಿದೆ. ಅದೃಷ್ಟವೂ ಜೊತೆಯಾಗಿದೆ. ಎಲ್ಲಕ್ಕೂ ಸಮಯ ಕೂಡಿಬರಬೇಕು’ ಎಂದು ನಗುತ್ತ ಹೇಳಿದ್ದರು ಭುವನೇಶ್ವರ್ ಕುಮಾರ್. </p>.<p>ರಾಯಪುರದಲ್ಲಿ ಪತ್ರಕರ್ತರೊಂದಿಗೆ ಹರಟೆಗೆ ಕೂತಿದ್ದ ಭುವಿ ಅವರು, ‘ಈ ವರ್ಷ ಇಷ್ಟೊಂದು ವಿಕೆಟ್ ಗಳಿಸುತ್ತಿರುವುದರ ಹಿಂದಿನ ಗುಟ್ಟು ಏನು’ ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ. ಪವರ್ಪ್ಲೇ ಮತ್ತು ಡೆತ್ ಓವರ್ ಎರಡರಲ್ಲೂ ಭುವಿ ಈ ಬಾರಿ ಮಿಂಚಿದ್ದಾರೆ. ಉತ್ತರ ಪ್ರದೇಶದ 36ರ ಹರೆಯದ ಭುವಿ ಅವರ ಎಸೆತಗಳ ಮೊನಚು ಒಂಚೂರು ಕಡಿಮೆಯಾಗಿಲ್ಲ. ಅವರ ಸ್ವಿಂಗ್, ಕಟರ್ ಮತ್ತು ಸ್ಲೋ ಎಸೆತಗಳು ಬ್ಯಾಟರ್ಗಳ ನಿದ್ದೆಗೆಡಿಸಿವೆ. ಅಂತರರಾಷ್ಟ್ರೀಯ ಕ್ರಿಕೆಟ್ ಪಯಣ ಬಹುತೇಕ ಕೊನೆಗೊಂಡಿರುವ ಈ ಹೊತ್ತಿನಲ್ಲಿಯೂ ಅವರು ತಮ್ಮ ಆತ್ಮವಿಶ್ವಾಸ ಮತ್ತು ಸಾಧನೆಯ ಹಸಿವನ್ನು ಜೀವಂತವಾಗಿಟ್ಟುಕೊಂಡಿದ್ದಾರೆ. ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಆರ್ಸಿಬಿ ಸತತ ಎರಡನೇ ಬಾರಿ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ಜೋಶ್ ಹೇಝಲ್ವುಡ್ ಅವರೊಂದಿಗಿನ ಜೊತೆಯಾಟದಲ್ಲಿ ಮಿಂಚಿದ್ದಾರೆ. </p>.<p><strong>* ಕಾಶ್ಮೀರಿ ಹುಡುಗ ರಸಿಕ್</strong> </p>.<p>ಜಮ್ಮು–ಕಾಶ್ಮೀರ ಕಣಿವೆಯ ಪುಟ್ಟ ಗ್ರಾಮ ಅಷ್ಮೂಜಿಯ ಸರ್ಕಾರಿ ಶಾಲೆಯ ಶಿಕ್ಷಕ ಸಲಾಮ್ ದಾರ್ ಅವರ ಮಗ ರಸಿಕ್. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ನ ಮೂವರು ಬ್ಯಾಟರ್ಗಳ ವಿಕೆಟ್ ಉರುಳಿಸಿದರು. ಇಡೀ ಟೂರ್ನಿಯಲ್ಲಿ ತಂಡವು ತಮ್ಮ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಂಡರು. ಜಮ್ಮು–ಕಾಶ್ಮೀರದಿಂದ ಐಪಿಎಲ್ ಆಡಿದ ಮೂರನೇ ಆಟಗಾರ ಅವರು. 17ನೇ ವಯಸ್ಸಿನಲ್ಲಿಯೇ ಐಪಿಎಲ್ಗೆ ಕಾಲಿಟ್ಟವರು. ಮೊದಲಿಗೆ ಮುಂಬೈ ಇಂಡಿಯನ್ಸ್ನಲ್ಲಿ ಆಡಿದ್ದರು. 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಹೋದ ವರ್ಷ ಆರ್ಸಿಬಿಯು ಅವರಿಗೆ ₹ 6 ಕೋಟಿ ನೀಡಿ ಖರೀದಿಸಿತ್ತು. ಈ ವರ್ಷ ಎಡಗೈ ವೇಗಿ ಯಶ್ ದಯಾಳ್ ಅವರು ಅಲಭ್ಯರಾದರು. ಅಲ್ಲದೇ ಹೇಝಲ್ವುಡ್ ಕೂಡ ಕೆಲವು ಪಂದ್ಯಗಳಲ್ಲಿ ಆಡಲಿಲ್ಲ. ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿ ತಬ್ಬಿಕೊಂಡರು. ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡುವಾಗ ರಸಿಕ್ ಅವರ ಪ್ರತಿಭೆಯನ್ನು ಗುರುತಿಸಿದವರು ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ಅವರು. ರಣಜಿ ಟ್ರೋಫಿ ಟೂರ್ನಿಗಳಲ್ಲಿಉತ್ತಮ ಸಾಧನೆ ಮಾಡಿದವರು. ಆದರೆ 2017–18ರ ಸಂದರ್ಭದಲ್ಲಿ ವಯೋಮಿತಿ ನಕಲಿ ಪ್ರಮಾಣಪತ್ರ ನೀಡಿದ್ದ ಪ್ರಕರಣದಲ್ಲಿ ಎರಡು ವರ್ಷ ಅಮಾನತುಗೊಂಡರು. ಅವರ ಶಿಕ್ಷೆಯ ಅವಧಿ ಮುಗಿಯುವ ಹೊತ್ತಿಗೆ ಕೋವಿಡ್ ಕಾಲ ಶುರುವಾಗಿತ್ತು. ಇದರಿಂದಾಗಿ ಅವರ ಕ್ರಿಕೆಟ್ ಜೀವನ ಮೊಟಕುಗೊಳ್ಳುವ ಆತಂಕ ಮೂಡಿತ್ತು. ಆದರೂ ಎದೆಗುಂದದ ಅವರು ತಮ್ಮ ಹಿಂದಿನ ಎಲ್ಲ ಲೋಪದೋಷಗಳನ್ನು ಮರೆತು ಕಣಕ್ಕಿಳಿದರು. ಕೋವಿಡ್ ದಿನಗಳಲ್ಲಿ ತಮ್ಮ ಊರಿನ ನಿರ್ಜನ ಮೈದಾನದಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದರು. ಅವರಿಗೆ ಮತ್ತೆ ಮರುಜನ್ಮ ಸಿಕ್ಕಿತು. </p>.<p><strong>* ಬೌನ್ಸರ್ ಸ್ಪಿನ್ನರ್ ಕೃಣಾಲ್</strong></p>.<p>ಎಡಗೈ ಸ್ಪಿನ್ –ಆಲ್ರೌಂಡರ್ ಕೃಣಾಲ್ ಪಾಂಡ್ಯ ಅವರು ಈಗ ಮುಟ್ಟಿದ್ದೆಲ್ಲ ಚಿನ್ನವೇ ಆಗುತ್ತಿದೆ. ಆರ್ಸಿಬಿಯಲ್ಲಿ ಎರಡು ಸೇರಿದಂತೆ ಒಟ್ಟಾರೆ ಐದು ಐಪಿಎಲ್ ಫೈನಲ್ಗಳಲ್ಲಿ ಆಡಿರುವ ಅವರದ್ದು ಎಲ್ಲದರಲ್ಲೂ ಗೆಲುವಿನ ಓಟ. ಅದರಲ್ಲೂ ಈ ಬಾರಿಯಂತೂ ಅವರದ್ದು ಹೊಸ ಅವತಾರ. ಬ್ಯಾಟರ್ಗಳು 360 ಡಿಗ್ರಿಯಲ್ಲಿ ಬ್ಯಾಟ್ ಮಾಡಬಹುದು. ಬೌಲರ್ಗಳಿಗೆ ಇಂತಹ ಅವಕಾಶವಿಲ್ಲವೇ ಎಂಬ ಪ್ರಶ್ನೆ ಅವರದ್ದು. ಅದಕ್ಕಾಗಿಯೇ ಸ್ಪಿನ್ ಬೌಲಿಂಗ್ನಲ್ಲಿಯೂ ವೇಗ ಮತ್ತು ಬೌನ್ಸರ್ಗಳನ್ನು ಪ್ರಯೋಗಿಸುವ ಮೂಲಕ ಈ ಬಾರಿ ಅವರು ಗಮನ ಸೆಳೆದರು. ಕೆಲವು ಪಂದ್ಯಗಳಲ್ಲಿ ಅವರ ಬೌನ್ಸ್ಗಳು ಬ್ಯಾಟರ್ ತಲೆದಾಟಿ ವಿಕೆಟ್ಕೀಪರ್ ಜಿತೇಶ್ ಶರ್ಮಾ ಕೈಸೇರಿದ್ದವು. ಅವರು ಬ್ಯಾಟಿಂಗ್ನಲ್ಲಿಯೂ ಮಿಂಚಿದರು. ಅದರಲ್ಲೂ ರಾಯಪುರದ ಪಂದ್ಯದಲ್ಲಿ ಸ್ನಾಯುಸೆಳೆತದ ನೋವಿನಲ್ಲಿ ಹೊಡೆದ ಅರ್ಧಶತಕವು ತಂಡದ ಗೆಲುವಿಗೆ ಕಾರಣವಾಗಿತ್ತು. ಆದರೆ ವಿಪರ್ಯಾಸ ನೋಡಿ; ಇನ್ನೊಂದೆಡೆ ಇನ್ನೊಂದೆಡೆ ಅವರ ಸಹೋದರ, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ವೈಫಲ್ಯದ ಸುಳಿಗೆ ಸಿಲುಕಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>‘ಈ ಸಲ ಕಪ್ ನಮ್ದೆ..’</strong></em></p><p><em><strong>ಎರಡು ವರ್ಷಗಳ ಮೊದಲು ಈ ಸ್ಲೋಗನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಅಪ್ಯಾಯಮಾನವಾಗಿತ್ತು. ಆದರೆ ಟೀಕಾಕಾರರಿಗೆ ವ್ಯಂಗ್ಯದ ಸರಕಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಜಾಲಾಡಿದರೆ ಈಗಲೂ ಹಳೆಯ ಮೀಮ್ಗಳು, ಕಾರ್ಟೂನ್ಗಳು ಕಾಣುತ್ತವೆ. ಆದರೆ ಅಂದು ಟೀಕಿಸಿದವರೆಲ್ಲರೂ ಈಗ ಸುಮ್ಮನೇ ನಿಂತು ಚಪ್ಪಾಳೆ ತಟ್ಟುವಂತಾಗಿದೆ. ಹೌದು; ಆರ್ಸಿಬಿ ತಂಡದ ಯಶೋಗಾಥೆಯ ಸಾರಾಂಶ ಇದು. ಇದರ ಹಿಂದೆ ತಂಡದ ಆಟಗಾರರ ಮತ್ತು ನೆರವು ಸಿಬ್ಬಂದಿಯ ಶ್ರಮ ಇದೆ. ಕಳೆದ ಎರಡು ವರ್ಷಗಳ ಈ ತಂಡದ ವರ್ಚಸ್ಸನ್ನು ಬದಲಿಸಿದ ಮತ್ತು ಸತತ ಎರಡು ಬಾರಿ ಕಪ್ ಗೆದ್ದುಕೊಂಡ ಪ್ರಮುಖ ಆಟಗಾರರ ಕಾಣಿಕೆಯ ಕುರಿತ ಇಲ್ಲಿದೆ.</strong></em> </p>.<p><strong>* ಕಲಾತ್ಮಕ ಕೊಹ್ಲಿ</strong> </p>.<p>2008ರಲ್ಲಿ ವಿರಾಟ್ ಕೊಹ್ಲಿ ಆರ್ಸಿಬಿಗೆ ಬಂದಾಗ 19 ವರ್ಷದ ಹುಡುಗ. ಯುವ ವಿಶ್ವಕಪ್ ಗೆದ್ದ ಭಾರತ ತಂಡವನ್ನು ಮುನ್ನಡೆಸಿದ ಅನುಭವದೊಂದಿಗೆ ಐಪಿಎಲ್ಗೆ ಬಂದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಆರ್ಸಿಬಿಯೊಂದಿಗೆ ತಾವೂ ತಾರೆಯಾಗಿ ಬೆಳೆದಿದ್ದಾರೆ. ‘ಚೇಸಿಂಗ್ ಮಾಸ್ಟರ್’ ಎಂಬ ಬಿರುದು ಗಳಿಸುವಷ್ಟರ ಮಟ್ಟಿಗೆ ಅವರ ಆಟ ಹದಗೊಂಡಿದೆ. ಈ ಸಲದ ಐಪಿಎಲ್ ಫೈನಲ್ನಲ್ಲಿ ಅವರ ಅಜೇಯ ಅರ್ಧಶತಕವು ತಂಡದ ಗೆಲುವಿಗೆ ಕಾರಣವಾಯಿತು. ಕಳೆದ ಎರಡು ದಶಕಗಳ ವೃತ್ತಿಜೀವನದಲ್ಲಿ ಎಲ್ಲ ಮಾದರಿಗಳಲ್ಲಿಯೂ ಚೇಸಿಂಗ್ ಮೂಲಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಇಷ್ಟಾದರೂ ಟಿ20 ಕ್ರಿಕೆಟ್ ಆಡುವ ಅವರ ಶೈಲಿಯಲ್ಲಿ ಸಾಂಪ್ರದಾಯಿಕ ಕೌಶಲಗಳನ್ನು ಬಿಟ್ಟಿಲ್ಲ. ಅಸಾಂಪ್ರದಾಯಿಕ ಹೊಡೆತಗಳು ಅವರ ಆಟದಲ್ಲಿ ಕಾಣುವುದಿಲ್ಲ. ನಾಲ್ಕು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಎದುರಿನ ಪಂದ್ಯದಲ್ಲಿ ಅವರು ಹೊಡೆದಿದ್ದ ಎರಡು ಸಿಕ್ಸರ್ಗಳು ಇಂದಿಗೂ ಜನಜನಿತ. ಕ್ರಿಕೆಟ್ ಮೂಲಪಾಠವನ್ನು ಸರಿಯಾಗಿ ಅಭ್ಯಾಸ ಮಾಡಿದವರು ಯಾವುದೇ ಮಾದರಿಯಲ್ಲಿಯೂ ಯಶಸ್ವಿಯಾಗುತ್ತಾರೆ ಎಂಬುದಕ್ಕೆ ವಿರಾಟ್ ನಿದರ್ಶನವಾಗುತ್ತಾರೆ. 37ನೇ ವಯಸ್ಸಿನಲ್ಲಿಯೂ ಅವರು ಕಾಪಾಡಿಕೊಂಡಿರುವ ಫಿಟ್ನೆಸ್ ಕೂಡ ಅನುಕರಣೀಯ. </p>.<p><strong>* ಬರ್ತಡೇ ಬಾಯ್ ರಜತ್</strong></p>.<p>ರಜತ್ ಪಾಟೀದಾರ್ ಅವರು ಸೋಮವಾರ 33ಕ್ಕೆ ವಸಂತಕ್ಕೆ ಕಾಲಿಟ್ಟರು. ವಿರಾಟ್ ನಂತರ ನಾಯಕರನ್ನಾಗಿ ಯಾರನ್ನು ಸಿದ್ಧಗೊಳಿಸಬೇಕು ಎಂಬ ಪ್ರಶ್ನೆಗೆ ಸಿಕ್ಕ ಉತ್ತರ ರಜತ್. ಆದರೆ ಅವರ ಅದೃಷ್ಟವೋ, ಆರ್ಸಿಬಿಯ ಸೌಭಾಗ್ಯವೋ ಗೊತ್ತಿಲ್ಲ. ಅವರು ನಾಯಕತ್ವ ವಹಿಸಿಕೊಂಡ ವರ್ಷವೇ ತಂಡವು ಚಾಂಪಿಯನ್ ಆಯಿತು. 17 ಆವೃತ್ತಿಗಳಲ್ಲಿ ವಿರಾಟ್ ಸೇರಿದಂತೆ ಹಲವು ದಿಗ್ಗಜರು ನಾಯಕತ್ವ ವಹಿಸಿದಾಗಲೂ ಒಲಿಯದ ಪ್ರಶಸ್ತಿ ರಜತ್ ಅವರಿಗೆ ಲಭಿಸಿತು. ಅಷ್ಟೇ ಅಲ್ಲ. ಸತತ ಎರಡನೇ ಸಲ ಗೆದ್ದು ಮಹೆಂದ್ರಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಅವರ ಸಾಲಿನಲ್ಲಿ ಬಂದು ನಿಂತರು. ಆದರೆ ರಜತ್ ಅವರು ಈ ಮಟ್ಟಕ್ಕೆ ಬರಲು ಕಠಿಣ ಹಾದಿ ಸವೆಸಿದರು. ಮಧ್ಯಪ್ರದೇಶದ ಇಂದೋರ್ನ ರಜತ್ ರಣಜಿ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದರು. ಅದರಿಂದಾಗಿ 2021ರಲ್ಲಿ ಆರ್ಸಿಬಿಯು ₹ 20 ಲಕ್ಷ ನೀಡಿ ಅವರನ್ನು ಖರೀದಿಸಿತು. ಆದರೆ ಆ ವರ್ಷ ಅವರು ಗಳಿಸಿದ್ದು 71 ರನ್ ಮಾತ್ರ. ಅದರಿಂದಾಗಿ ರಿಲೀಸ್ ಆದರು. 2022ರ ಹರಾಜು ಪ್ರಕ್ರಿಯೆಯಲ್ಲಿ ಅವರನ್ನು ಯಾವುದೇ ಫ್ರ್ಯಾಂಚೈಸಿಯು ಖರೀದಿಸಲಿಲ್ಲ. ನಂತರದ ಅವಧಿಯಲ್ಲಿ ಆರ್ಸಿಬಿಯಲ್ಲಿ ಗಾಯಗೊಂಡಿದ್ದ ಆಟಗಾರನ ಬದಲಿಗೆ ಆರ್ಸಿಬಿಯಲ್ಲಿ ಸ್ಥಾನ ಪಡೆದರು. ಅದೇ ವರ್ಷ ಎಲಿಮಿನೇಟರ್ನಲ್ಲಿ ಭರ್ಜರಿ ಶತಕ ಗಳಿಸಿದರು. ಆದರೆ ಗಾಯದ ಸಮಸ್ಯೆಯಿಂದ 2023ರಲ್ಲಿ ಆಡಲು ಸಾಧ್ಯವಾಗಲಿಲ್ಲ. 2024ರಲ್ಲಿ 15 ಪಂದ್ಯಗಳನ್ನು ಆಡಿ 395 ರನ್ ಗಳಿಸಿದರು. ನಂತರ ಅಚ್ಚರಿಯ ನಿರ್ಧಾರ ತೆಗೆದುಕೊಂಡ ಆರ್ಸಿಬಿಯು ಮೃದುಭಾಷಿ ಮತ್ತು ತೀಕ್ಷ್ಣ ಯೋಚನಾಲಹರಿಯ ರಜತ್ ಅವರಿಗೆ ನಾಯಕನ ಪಟ್ಟ ಕಟ್ಟಿತು. </p>.<p><strong>* ಕನ್ನಡಿಗ ಪಡಿಕ್ಕಲ್ ಆಟ</strong></p>.<p>ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ಚಿಕ್ಕವರಿದ್ದಾಗ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಪ್ಪನೊಂದಿಗೆ ಬಂದು ಆರ್ಸಿಬಿ ಪಂದ್ಯ ವೀಕ್ಷಿಸುತ್ತಿದ್ದರು. ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಅವಂತಹ ದಿಗ್ಗಜರ ಆಟವನ್ನು ಆನಂದಿಸುತ್ತಿದ್ದರು. ಇದೀಗ ಅದೇ ವಿರಾಟ್ ಅವರೊಂದಿಗೆ ಡ್ರೆಸಿಂಗ್ ರೂಮ್ ಹಂಚಿಕೊಳ್ಳುತ್ತಿದ್ದಾರೆ. ತಮ್ಮ ನೆಚ್ಚಿನ್ ಆರ್ಸಿಬಿ ತಂಡವು ಎರಡು ಪ್ರಶಸ್ತಿ ಗೆಲ್ಲಲು ಉಪಯುಕ್ತ ಕಾಣಿಕೆ ನೀಡಿದ್ದಾರೆ. ಅದರಲ್ಲೂ ಈ ಬಾರಿ ಆರಂಭಿಕರಾಗಿ ಆಡಿದ್ದ ಫಿಲ್ ಸಾಲ್ಟ್ ಸಫಲರಾಗಿರಲಿಲ್ಲ. ಅವರು ಗಾಯಗೊಂಡಾಗ ಆಡಿದ್ದ ಜೇಕಬ್ ಬೆಥೆಲ್ ಕೂಡ ರನ್ ಗಳಿಸಲಿಲ್ಲ. ಆ ಸಂದರ್ಭದಲ್ಲಿ ದೇವದತ್ತ ಅವರು ವಿರಾಟ್ ಕೊಹ್ಲಿಯೊಂದಿಗೆ ಜೊತೆಯಾಟಗಳನ್ನು ಕಟ್ಟಿದರು. ಇನಿಂಗ್ಸ್ಗೆ ಬಲ ತುಂಬಿದರು. ಕಳೆದ ಋತುವಿನಲ್ಲಿ ಅವರು ರಣಜಿ ಟ್ರೋಫಿ, ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟೂರ್ನಿಗಳಲ್ಲಿ ರನ್ ಹೊಳೆ ಹರಿಸಿದ್ದರು. ರಣಜಿ ಟೂರ್ನಿಯ ಫೈನಲ್ನಲ್ಲಿ ಕರ್ನಾಟಕದ ನಾಯಕರಾಗಿದ್ದರು. </p>.<p><strong>* ಭುವಿ ಎಂಬ ಸ್ವಿಂಗ್ ಸುಲ್ತಾನ</strong></p>.<p>‘ಸೀಕ್ರೆಟ್ ಗೊತ್ತಿದ್ದಿದ್ದರೆ ಪ್ರತಿವರ್ಷವೂ ಇಷ್ಟೇ ವಿಕೆಟ್ಗಳನ್ನು ತೆಗೆದುಕೊಳ್ಳುತ್ತಿದ್ದೆ. ಈ ವರ್ಷ ನನ್ನ ಶ್ರಮಕ್ಕೆ ತಕ್ಕ ಫಲ ಸಿಗುತ್ತಿದೆ. ಅದೃಷ್ಟವೂ ಜೊತೆಯಾಗಿದೆ. ಎಲ್ಲಕ್ಕೂ ಸಮಯ ಕೂಡಿಬರಬೇಕು’ ಎಂದು ನಗುತ್ತ ಹೇಳಿದ್ದರು ಭುವನೇಶ್ವರ್ ಕುಮಾರ್. </p>.<p>ರಾಯಪುರದಲ್ಲಿ ಪತ್ರಕರ್ತರೊಂದಿಗೆ ಹರಟೆಗೆ ಕೂತಿದ್ದ ಭುವಿ ಅವರು, ‘ಈ ವರ್ಷ ಇಷ್ಟೊಂದು ವಿಕೆಟ್ ಗಳಿಸುತ್ತಿರುವುದರ ಹಿಂದಿನ ಗುಟ್ಟು ಏನು’ ಎಂಬ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ. ಪವರ್ಪ್ಲೇ ಮತ್ತು ಡೆತ್ ಓವರ್ ಎರಡರಲ್ಲೂ ಭುವಿ ಈ ಬಾರಿ ಮಿಂಚಿದ್ದಾರೆ. ಉತ್ತರ ಪ್ರದೇಶದ 36ರ ಹರೆಯದ ಭುವಿ ಅವರ ಎಸೆತಗಳ ಮೊನಚು ಒಂಚೂರು ಕಡಿಮೆಯಾಗಿಲ್ಲ. ಅವರ ಸ್ವಿಂಗ್, ಕಟರ್ ಮತ್ತು ಸ್ಲೋ ಎಸೆತಗಳು ಬ್ಯಾಟರ್ಗಳ ನಿದ್ದೆಗೆಡಿಸಿವೆ. ಅಂತರರಾಷ್ಟ್ರೀಯ ಕ್ರಿಕೆಟ್ ಪಯಣ ಬಹುತೇಕ ಕೊನೆಗೊಂಡಿರುವ ಈ ಹೊತ್ತಿನಲ್ಲಿಯೂ ಅವರು ತಮ್ಮ ಆತ್ಮವಿಶ್ವಾಸ ಮತ್ತು ಸಾಧನೆಯ ಹಸಿವನ್ನು ಜೀವಂತವಾಗಿಟ್ಟುಕೊಂಡಿದ್ದಾರೆ. ಫಿಟ್ನೆಸ್ ಕಾಪಾಡಿಕೊಂಡಿದ್ದಾರೆ. ಆರ್ಸಿಬಿ ಸತತ ಎರಡನೇ ಬಾರಿ ಪ್ರಶಸ್ತಿ ಜಯಿಸುವಲ್ಲಿ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ಜೋಶ್ ಹೇಝಲ್ವುಡ್ ಅವರೊಂದಿಗಿನ ಜೊತೆಯಾಟದಲ್ಲಿ ಮಿಂಚಿದ್ದಾರೆ. </p>.<p><strong>* ಕಾಶ್ಮೀರಿ ಹುಡುಗ ರಸಿಕ್</strong> </p>.<p>ಜಮ್ಮು–ಕಾಶ್ಮೀರ ಕಣಿವೆಯ ಪುಟ್ಟ ಗ್ರಾಮ ಅಷ್ಮೂಜಿಯ ಸರ್ಕಾರಿ ಶಾಲೆಯ ಶಿಕ್ಷಕ ಸಲಾಮ್ ದಾರ್ ಅವರ ಮಗ ರಸಿಕ್. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ನ ಮೂವರು ಬ್ಯಾಟರ್ಗಳ ವಿಕೆಟ್ ಉರುಳಿಸಿದರು. ಇಡೀ ಟೂರ್ನಿಯಲ್ಲಿ ತಂಡವು ತಮ್ಮ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಂಡರು. ಜಮ್ಮು–ಕಾಶ್ಮೀರದಿಂದ ಐಪಿಎಲ್ ಆಡಿದ ಮೂರನೇ ಆಟಗಾರ ಅವರು. 17ನೇ ವಯಸ್ಸಿನಲ್ಲಿಯೇ ಐಪಿಎಲ್ಗೆ ಕಾಲಿಟ್ಟವರು. ಮೊದಲಿಗೆ ಮುಂಬೈ ಇಂಡಿಯನ್ಸ್ನಲ್ಲಿ ಆಡಿದ್ದರು. 2024ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದರು. ಹೋದ ವರ್ಷ ಆರ್ಸಿಬಿಯು ಅವರಿಗೆ ₹ 6 ಕೋಟಿ ನೀಡಿ ಖರೀದಿಸಿತ್ತು. ಈ ವರ್ಷ ಎಡಗೈ ವೇಗಿ ಯಶ್ ದಯಾಳ್ ಅವರು ಅಲಭ್ಯರಾದರು. ಅಲ್ಲದೇ ಹೇಝಲ್ವುಡ್ ಕೂಡ ಕೆಲವು ಪಂದ್ಯಗಳಲ್ಲಿ ಆಡಲಿಲ್ಲ. ಸಿಕ್ಕ ಅವಕಾಶಗಳನ್ನು ಎರಡೂ ಕೈಗಳಿಂದ ಬಾಚಿ ತಬ್ಬಿಕೊಂಡರು. ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಆಡುವಾಗ ರಸಿಕ್ ಅವರ ಪ್ರತಿಭೆಯನ್ನು ಗುರುತಿಸಿದವರು ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ಅವರು. ರಣಜಿ ಟ್ರೋಫಿ ಟೂರ್ನಿಗಳಲ್ಲಿಉತ್ತಮ ಸಾಧನೆ ಮಾಡಿದವರು. ಆದರೆ 2017–18ರ ಸಂದರ್ಭದಲ್ಲಿ ವಯೋಮಿತಿ ನಕಲಿ ಪ್ರಮಾಣಪತ್ರ ನೀಡಿದ್ದ ಪ್ರಕರಣದಲ್ಲಿ ಎರಡು ವರ್ಷ ಅಮಾನತುಗೊಂಡರು. ಅವರ ಶಿಕ್ಷೆಯ ಅವಧಿ ಮುಗಿಯುವ ಹೊತ್ತಿಗೆ ಕೋವಿಡ್ ಕಾಲ ಶುರುವಾಗಿತ್ತು. ಇದರಿಂದಾಗಿ ಅವರ ಕ್ರಿಕೆಟ್ ಜೀವನ ಮೊಟಕುಗೊಳ್ಳುವ ಆತಂಕ ಮೂಡಿತ್ತು. ಆದರೂ ಎದೆಗುಂದದ ಅವರು ತಮ್ಮ ಹಿಂದಿನ ಎಲ್ಲ ಲೋಪದೋಷಗಳನ್ನು ಮರೆತು ಕಣಕ್ಕಿಳಿದರು. ಕೋವಿಡ್ ದಿನಗಳಲ್ಲಿ ತಮ್ಮ ಊರಿನ ನಿರ್ಜನ ಮೈದಾನದಲ್ಲಿ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದರು. ಅವರಿಗೆ ಮತ್ತೆ ಮರುಜನ್ಮ ಸಿಕ್ಕಿತು. </p>.<p><strong>* ಬೌನ್ಸರ್ ಸ್ಪಿನ್ನರ್ ಕೃಣಾಲ್</strong></p>.<p>ಎಡಗೈ ಸ್ಪಿನ್ –ಆಲ್ರೌಂಡರ್ ಕೃಣಾಲ್ ಪಾಂಡ್ಯ ಅವರು ಈಗ ಮುಟ್ಟಿದ್ದೆಲ್ಲ ಚಿನ್ನವೇ ಆಗುತ್ತಿದೆ. ಆರ್ಸಿಬಿಯಲ್ಲಿ ಎರಡು ಸೇರಿದಂತೆ ಒಟ್ಟಾರೆ ಐದು ಐಪಿಎಲ್ ಫೈನಲ್ಗಳಲ್ಲಿ ಆಡಿರುವ ಅವರದ್ದು ಎಲ್ಲದರಲ್ಲೂ ಗೆಲುವಿನ ಓಟ. ಅದರಲ್ಲೂ ಈ ಬಾರಿಯಂತೂ ಅವರದ್ದು ಹೊಸ ಅವತಾರ. ಬ್ಯಾಟರ್ಗಳು 360 ಡಿಗ್ರಿಯಲ್ಲಿ ಬ್ಯಾಟ್ ಮಾಡಬಹುದು. ಬೌಲರ್ಗಳಿಗೆ ಇಂತಹ ಅವಕಾಶವಿಲ್ಲವೇ ಎಂಬ ಪ್ರಶ್ನೆ ಅವರದ್ದು. ಅದಕ್ಕಾಗಿಯೇ ಸ್ಪಿನ್ ಬೌಲಿಂಗ್ನಲ್ಲಿಯೂ ವೇಗ ಮತ್ತು ಬೌನ್ಸರ್ಗಳನ್ನು ಪ್ರಯೋಗಿಸುವ ಮೂಲಕ ಈ ಬಾರಿ ಅವರು ಗಮನ ಸೆಳೆದರು. ಕೆಲವು ಪಂದ್ಯಗಳಲ್ಲಿ ಅವರ ಬೌನ್ಸ್ಗಳು ಬ್ಯಾಟರ್ ತಲೆದಾಟಿ ವಿಕೆಟ್ಕೀಪರ್ ಜಿತೇಶ್ ಶರ್ಮಾ ಕೈಸೇರಿದ್ದವು. ಅವರು ಬ್ಯಾಟಿಂಗ್ನಲ್ಲಿಯೂ ಮಿಂಚಿದರು. ಅದರಲ್ಲೂ ರಾಯಪುರದ ಪಂದ್ಯದಲ್ಲಿ ಸ್ನಾಯುಸೆಳೆತದ ನೋವಿನಲ್ಲಿ ಹೊಡೆದ ಅರ್ಧಶತಕವು ತಂಡದ ಗೆಲುವಿಗೆ ಕಾರಣವಾಗಿತ್ತು. ಆದರೆ ವಿಪರ್ಯಾಸ ನೋಡಿ; ಇನ್ನೊಂದೆಡೆ ಇನ್ನೊಂದೆಡೆ ಅವರ ಸಹೋದರ, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ವೈಫಲ್ಯದ ಸುಳಿಗೆ ಸಿಲುಕಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>