<p>2026ರ ಟಿ20 ವಿಶ್ವಕಪ್ ಅನ್ನು ಭಾರತ ತಂಡ ಗೆದ್ದು ಬೀಗಿದೆ. ಈ ಬಾರಿಯ ವಿಶ್ವಕಪ್ ಸಂದರ್ಭದಲ್ಲಿ ಬ್ಯಾಟರ್ ರಿಂಕು ಸಿಂಗ್ ಅವರ ತಂದೆ ಖಾನ್ ಚಂದ್ ಸಿಂಗ್ ಮೃತಪಟ್ಟಿದ್ದರು. ಆದರೆ, ರಿಂಕು ಸಿಂಗ್ ಅವರು ಟೀಂ ಇಂಡಿಯಾದ ಭಾಗವಾಗಿದ್ದರಿಂದ ಕೊನೇ ಕ್ಷಣದಲ್ಲಿ ತಂದೆಯ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ.</p><p>ಭಾರತ ತಂಡ ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ರಿಂಕು ಸಿಂಗ್ ಅವರು ತಂದೆಯನ್ನು ನೆನೆದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.</p>.<p>ಟಿ20 ತಂಡದಲ್ಲಿದ್ದ ಕಾರಣಕ್ಕೆ ರಿಂಕು ತಂದೆಯ ಮರಣದ ನಂತರ ಯಾವುದೇ ಪೋಸ್ಟ್ ಮಾಡಿರಲಿಲ್ಲ. ಇದೀಗ ತನ್ನ ಗೆಲುವಿನೊಂದಿಗೆ ತಂದೆಯ ಪೋಟೊವನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಭಾವುಕತೆಯ ಅಡಿಬರಹ ನೀಡಿದ್ದಾರೆ. ವಿಶ್ವಕಪ್ ಗೆಲ್ಲುವುದು ನನ್ನ ತಂದೆಯ ಕನಸಾಗಿತ್ತು ಎಂದು ರಿಂಕು ಹೇಳಿಕೊಂಡಿದ್ದಾರೆ.</p><p>ಪೋಸ್ಟ್ನಲ್ಲಿ ‘ನಿನ್ನ ಜೊತೆ ಮಾತನಾಡದೆ ನಾನು ಇಷ್ಟು ವರ್ಷ ಕಳೆದಿಲ್ಲ. ನೀನಿಲ್ಲದೆ ಜೀವನ ಹೇಗೆ ಸಾಗುತ್ತದೆಯೋ ಗೊತ್ತಿಲ್ಲ. ಆದರೆ, ನನ್ನ ಪ್ರತಿ ಹೆಜ್ಜೆಯಲ್ಲೂ ನಿನ್ನ ಅಗತ್ಯವಿದೆ. ಕರ್ತವ್ಯಕ್ಕೆ ಮೊದಲ ಆದ್ಯತೆ ಇರಲಿ ಎಂಬುದನ್ನು ನೀವು ಕಲಿಸಿದ್ದೀರಿ. ಆದ್ದರಿಂದ ನಾನು ಮೈದಾನದಲ್ಲಿ ನಿಮ್ಮ ಕನಸನ್ನು ನನಸಾಗಿಸಲು ಪ್ರಯತ್ನಿಸಿದ್ದೇನೆ. ಈಗ ನಿಮ್ಮ ಕನಸು ಈಡೇರಿದೆ. ಹಾಗಾಗಿ ನೀವು ನನ್ನೊಂದಿಗೆ ಇದ್ದೀರಾ ಎಂದು ಭಾವಿಸುತ್ತೇನೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಪಪ್ಪಾ’ ಎಂದು ಭಾವುಕವಾಗಿ ಬರೆದಿದ್ದಾರೆ. </p><p>ಫೈನಲ್ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಇಶಾನ್ ಕಿಶನ್ ಅವರ ಸೋದರ ಸಂಬಂಧಿ ಒಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೂ ಧೃತಿಗೆಡದ ಕಿಶನ್ ಫೈನಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಇಶಾನ್ ಅವರ ಕುಟುಂಬ ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>2026ರ ಟಿ20 ವಿಶ್ವಕಪ್ ಅನ್ನು ಭಾರತ ತಂಡ ಗೆದ್ದು ಬೀಗಿದೆ. ಈ ಬಾರಿಯ ವಿಶ್ವಕಪ್ ಸಂದರ್ಭದಲ್ಲಿ ಬ್ಯಾಟರ್ ರಿಂಕು ಸಿಂಗ್ ಅವರ ತಂದೆ ಖಾನ್ ಚಂದ್ ಸಿಂಗ್ ಮೃತಪಟ್ಟಿದ್ದರು. ಆದರೆ, ರಿಂಕು ಸಿಂಗ್ ಅವರು ಟೀಂ ಇಂಡಿಯಾದ ಭಾಗವಾಗಿದ್ದರಿಂದ ಕೊನೇ ಕ್ಷಣದಲ್ಲಿ ತಂದೆಯ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿರಲಿಲ್ಲ.</p><p>ಭಾರತ ತಂಡ ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ರಿಂಕು ಸಿಂಗ್ ಅವರು ತಂದೆಯನ್ನು ನೆನೆದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.</p>.<p>ಟಿ20 ತಂಡದಲ್ಲಿದ್ದ ಕಾರಣಕ್ಕೆ ರಿಂಕು ತಂದೆಯ ಮರಣದ ನಂತರ ಯಾವುದೇ ಪೋಸ್ಟ್ ಮಾಡಿರಲಿಲ್ಲ. ಇದೀಗ ತನ್ನ ಗೆಲುವಿನೊಂದಿಗೆ ತಂದೆಯ ಪೋಟೊವನ್ನು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡು ಭಾವುಕತೆಯ ಅಡಿಬರಹ ನೀಡಿದ್ದಾರೆ. ವಿಶ್ವಕಪ್ ಗೆಲ್ಲುವುದು ನನ್ನ ತಂದೆಯ ಕನಸಾಗಿತ್ತು ಎಂದು ರಿಂಕು ಹೇಳಿಕೊಂಡಿದ್ದಾರೆ.</p><p>ಪೋಸ್ಟ್ನಲ್ಲಿ ‘ನಿನ್ನ ಜೊತೆ ಮಾತನಾಡದೆ ನಾನು ಇಷ್ಟು ವರ್ಷ ಕಳೆದಿಲ್ಲ. ನೀನಿಲ್ಲದೆ ಜೀವನ ಹೇಗೆ ಸಾಗುತ್ತದೆಯೋ ಗೊತ್ತಿಲ್ಲ. ಆದರೆ, ನನ್ನ ಪ್ರತಿ ಹೆಜ್ಜೆಯಲ್ಲೂ ನಿನ್ನ ಅಗತ್ಯವಿದೆ. ಕರ್ತವ್ಯಕ್ಕೆ ಮೊದಲ ಆದ್ಯತೆ ಇರಲಿ ಎಂಬುದನ್ನು ನೀವು ಕಲಿಸಿದ್ದೀರಿ. ಆದ್ದರಿಂದ ನಾನು ಮೈದಾನದಲ್ಲಿ ನಿಮ್ಮ ಕನಸನ್ನು ನನಸಾಗಿಸಲು ಪ್ರಯತ್ನಿಸಿದ್ದೇನೆ. ಈಗ ನಿಮ್ಮ ಕನಸು ಈಡೇರಿದೆ. ಹಾಗಾಗಿ ನೀವು ನನ್ನೊಂದಿಗೆ ಇದ್ದೀರಾ ಎಂದು ಭಾವಿಸುತ್ತೇನೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಪಪ್ಪಾ’ ಎಂದು ಭಾವುಕವಾಗಿ ಬರೆದಿದ್ದಾರೆ. </p><p>ಫೈನಲ್ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಇಶಾನ್ ಕಿಶನ್ ಅವರ ಸೋದರ ಸಂಬಂಧಿ ಒಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೂ ಧೃತಿಗೆಡದ ಕಿಶನ್ ಫೈನಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದರು. ಇಶಾನ್ ಅವರ ಕುಟುಂಬ ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸಿರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>