ಬಳಿಕ ಕೋರ್ಟ್ ಮೆಟ್ಟಿಲೇರಿ, ಮಕ್ಕಳನ್ನು ತಮ್ಮ ಸುಪರ್ದಿಗೆ ವಹಿಸಬೇಕೆಂಬ ಆದೇಶವನ್ನು ಇಂದಿರಾ ಪಡೆದುಕೊಂಡಿದ್ದರು. ಅವರ ಮತಾಂತರವನ್ನು ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಈ ಮತಾಂತರವನ್ನು ಅಕ್ರಮ ಎಂದು ಘೋಷಿಸಿದ್ದ ಸಿವಿಲ್ ಕೋರ್ಟ್ನ ಆದೇಶವನ್ನು ಮೇಲ್ಮನವಿ ಪ್ರಾಧಿಕಾರ ತಳ್ಳಿಹಾಕಿತ್ತು. ಇಂತಹ ವಿಷಯಗಳು ಸಿವಿಲ್ ಕೋರ್ಟ್ನ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಇದೀಗ ಈ ತೀರ್ಪು, ದೇಶದಲ್ಲಿ ಸಿವಿಲ್ ಕೋರ್ಟ್ಗಳ ವ್ಯಾಪ್ತಿಯ ಬಗ್ಗೆ ಇದ್ದ ಅನುಮಾನಗಳಿಗೂ ಉತ್ತರ ನೀಡಿದೆ.