<p>ಸಚಿನ್ ರಮೇಶ್ ತೆಂಡೂಲ್ಕರ್. ಬಹುಶಃ ಈ ಹೆಸರನ್ನು ಉಚ್ಚರಿಸದ ಕ್ರಿಕೆಟ್ ಅಭಿಮಾನಿಗಳು ಇರಲಿಕ್ಕಿಲ್ಲ. ಕ್ರಿಕೆಟಿಗರಿಗಷ್ಟೇ ಅಲ್ಲದೆ ಕ್ರಿಕೆಟ್ ಅಭಿಮಾನಿಗಳಿಗೂ ಇವರು 'ಆರಾಧ್ಯ ದೈವ'. ಕ್ರಿಕೆಟ್ ದೇವರಿಗೆ ಇಂದು (ಏ.24) ಹುಟ್ಟುಹಬ್ಬದ ಸಂಭ್ರಮ. </p><p>90ರ ದಶಕ ಹಾಗೂ 2000ನೇ ದಶಕದ ಆರಂಭದಲ್ಲಿ ಬೆಳೆದು ಬಂದವರಿಗೆ ಸಚಿನ್ ಅಚ್ಚುಮೆಚ್ಚಿನ ಕ್ರಿಕೆಟಿಗ ಆಗಿದ್ದಾರೆ. ಆದರೆ 2003ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲು ಅತ್ಯಂತ ಕರಾಳ ನೆನಪುಗಳಲ್ಲಿ ಒಂದಾಗಿದೆ. ರಿಕಿ ಪಾಂಟಿಂಗ್ ನಾಯಕತ್ವದ ಮೆಕ್ಗ್ರಾತ್, ಬ್ರೆಟ್ ಲೀ, ಸೈಮಂಡ್ಸ್, ಹೇಡನ್, ಗಿಲ್ಕ್ರಿಸ್ಟ್ ಅವರನ್ನು ಒಳಗೊಂಡ ಆಸ್ಟ್ರೇಲಿಯಾ ವಿರುದ್ಧ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಸಚಿನ್ ಕ್ರೀಸಿಗಿಳಿದಾಗ ನಿರೀಕ್ಷೆಗಳು ಬಾನೆತ್ತರದಷ್ಟಿತ್ತು. ಆದರೆ ಮೊದಲ ಓವರ್ನಲ್ಲೇ ಔಟ್ ಆಗಿ ಹೊರನಡೆದಾಗ ಟ್ರೋಫಿ ಗೆಲ್ಲುವ ಭಾರತದ ಕನಸು ಅಸ್ತಮಿಸಿತ್ತು. </p>. <p>ಒಂದು ಕ್ಷಣ ಇಡೀ ದೇಶವೇ ಸ್ಥಬ್ತವಾಗಿತ್ತು. ಮನೆ, ಅಂಗಡಿ, ಬೀದಿ, ಮಾರುಕಟ್ಟೆ ಸೇರಿ ಎಲ್ಲ ಕಡೆ ಮೌನ ಆವರಿಸಿತ್ತು. ಕ್ರೀಡಾಭಿಮಾನಿಗಳಲ್ಲಿ ಅಂತಹದೊಂದು ನಂಬಿಕೆ ಹುಟ್ಟಿ ಹಾಕಿದವರು ಬೇರೆ ಯಾರೂ ಆಗಿರಲಿಲ್ಲ. ಅವರೇ ಸಚಿನ್...</p>.ಮುಂಬೈ ತಂಡದಲ್ಲಿ ಹೆಚ್ಚು ಅವಕಾಶ ಸಿಗಲಿಲ್ಲ? ಮೌನಮುರಿದ ಸಚಿನ್ ಪುತ್ರ ಅರ್ಜುನ್.25 ವರ್ಷಗಳ ಹಿಂದೆ ಈ ದಿನ: ಸಚಿನ್ ತೆಂಡೂಲ್ಕರ್ ಹತ್ತು ಸಾವಿರ ರನ್ಗಳ ಸರದಾರ. <p>1983ರಲ್ಲಿ ವೆಸ್ಟ್ಇಂಡೀಸ್ನಂತಹ ದೈತ್ಯ ತಂಡವನ್ನು ಸೋಲಿಸಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಗೆದ್ದಿರುವುದು, ದೇಶದಲ್ಲಿ ಕ್ರಿಕೆಟ್ ಕಿಚ್ಚು ಹುಟ್ಟು ಹಾಕಲು ಕಾರಣವಾಗಿತ್ತು. ಅದುವೇ ಕ್ರಿಕೆಟ್ಗೆ ಕಾಲಿಡಲು ಸಚಿನ್ಗೂ ಪ್ರೇರಣೆಯಾಗಿತ್ತು. ಬಳಿಕ 1989ರಲ್ಲಿ ಸಚಿನ್ ಪದಾರ್ಪಣೆ ಮಾಡಿರುವುದು ವಿಶ್ವ ಕ್ರಿಕೆಟ್ನಲ್ಲಿ ಭಾರತೀಯ ಕ್ರಿಕೆಟ್ನ ಮಹತ್ವದ ಮೈಲಿಗಲ್ಲಿನಲ್ಲಿ ಒಂದೆನಿಸಿದೆ.</p>. <p>ಅಚ್ರೇಕರ್ ಗರಡಿಯಲ್ಲಿ ಪಳಗಿದ 16ರ ಹರೆಯದ ಸಚಿನ್, ಪದಾರ್ಪಣೆಗೂ ಮೊದಲೇ ಹೋದಲೆಲ್ಲ ಸುದ್ದಿ ಮಾಡಿದ್ದರು. 1989ರಲ್ಲಿ ಶ್ರೀಕಾಂತ್ ನೇತೃತ್ವದ ಭಾರತ ತಂಡವು ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲು ಪಾಕಿಸ್ತಾನದ ಪ್ರಯಾಣ ಬೆಳೆಸಿತ್ತು. ಅಂದು ವಿಶ್ವದರ್ಜೆಯ ಪಾಕಿಸ್ತಾನದ ಬೌಲರ್ಗಳನ್ನು 16ರ ಪೋರ ನಿರ್ಭಿತಿಯಿಂದ ಎದುರಿಸುತ್ತಿರುವುದು ಯಾವ ಪವಾಡಕ್ಕೂ ಕಡಿಮೆಯಾಗಿರಲಿಲ್ಲ. </p><p>ಸುನಿಲ್ ಗವಾಸ್ಕರ್ ಹಾಗೂ ಕಪಿಲ್ ದೇವ್ ಅವರಂತಹ ಶ್ರೇಷ್ಠ ಆಟಗಾರರನ್ನು ಭಾರತವು ಕಂಡಿತ್ತು. ಆದರೆ 'ಸಿಡಿಲಮರಿ' ಸಚಿನ್ ಭಾರತೀಯ ಕ್ರಿಕೆಟ್ನ ಚಿತ್ರಣವನ್ನೇ ಬದಲಿಸಿದರು. ಯುವ ಬ್ಯಾಟರ್ ಬಗ್ಗೆ ಆರಂಭದಲ್ಲಿ ಅನುಕಂಪ ತೋರಿದ ಪಾಕ್ ವೇಗಿಗಳಾದ ವಕಾರ್ ಯೂನಿಸ್ ಹಾಗೂ ವಾಸೀಮ್ ಅಕ್ರಂ ಬಳಿಕ ಯುವ ಪ್ರತಿಭೆಯನ್ನು ಮೆಚ್ಚಲೇಬೇಕಾಯಿತು. </p>. <p>ಸಚಿನ್ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟಾಗ, ಭಾರತದಲ್ಲಿ ಅಪಾರ ಸಾಮರ್ಥ್ಯ ಇದ್ದರೂ ಆತ್ಮವಿಶ್ವಾಸದ ಕೊರತೆ ಕಾಡುತ್ತಿತ್ತು. ಆಗಲೂ ಬಲಿಷ್ಠ ರಾಷ್ಟ್ರವೆನಿಸಿರಲಿಲ್ಲ. 1989ರಲ್ಲಿ ಬಿಎಸ್ಇ ಷೇರು ಸೂಚ್ಯಂಕ 1,000ಕ್ಕಿಂತ ಕಡಿಮೆಯಾಗಿತ್ತು. ಭಾರತದ ಜಿಡಿಪಿ $270 ಬಿಲಿಯನ್ ಆಗಿತ್ತು. ಆರ್ಥಿಕ ಉದಾರೀಕರಣದ ಪ್ರಾರಂಭವೂ ಆಗಿರಲಿಲ್ಲ. </p><p>70, 80ರ ದಶತಕದಲ್ಲಿ ಗವಾಸ್ಕರ್ ಹಾಗೂ ಕಪಿಲ್ ದಿಗ್ಗಜರಾಗಿ ಹೊರಹೊಮ್ಮಿದ್ದರು. ಆದರೆ ಸಚಿನ್ ಅವರಿಗಿಂತ ವಿಶಿಷ್ಟವಾಗಿ ಗುರುತಿಸಿಕೊಂಡರು. ಗವಾಸ್ಕರ್, ಕಪಿಲ್ ಅಂದಿನ ಸೂಪರ್ ಸ್ಟಾರ್ಗಳಾಗಿದ್ದರು. ಆದರೂ ವಿಶ್ವ ಕ್ರಿಕೆಟ್ನಲ್ಲಿ ಭಾರತದ ಪ್ರಭಾವ ಹೆಚ್ಚು ಇರಲಿಲ್ಲ. ಆದರೆ ಸ್ಫೋಟಕ ಆಟದ ಶೈಲಿಯ ಸಚಿನ್ ಭಾರತದ ಪಾಲಿಗೆ ಸೇಡು ತೀರಿಸುವ ಅಸ್ತ್ರವಾದರು. ಯುವ ಪೀಳಿಗೆಯ ಆಟಗಾರರು ತಮ್ಮದೇ ಶೈಲಿಯ ನಿರ್ಭಿತಿಯ ಆಟದ ಮೂಲಕ ಬಲಿಷ್ಠ ತಂಡಗಳನ್ನು ಹೇಗೆ ಸೋಲಿಸುವುದೆಂದು ತೋರಿಸಿಕೊಟ್ಟರು. 'ನಮ್ಮದೇ ಶ್ರೇಷ್ಠ ತಂಡ' ಎಂಬ ನಂಬಿಕೆಯನ್ನು ಹುಟ್ಟಿಸಿದರು. </p>. <p>ವೆಸ್ಟ್ಇಂಡೀಸ್, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಸೇರಿದಂತೆ ವಿಶ್ವದ ಮಾರಕ ಬೌಲರ್ಗಳ ವಿರುದ್ಧದ ಸಚಿನ್ ಬ್ಯಾಟಿಂಗ್ ಚತುರತೆ ಎಲ್ಲಡೆ ಚರ್ಚೆಯ ವಿಷಯವಾಯಿತು. ವಾಸೀಮ್, ವಕಾರ್ರಂತಹ ಸ್ವಿಂಗ್ ಮಾಸ್ಟರ್ಗಳನ್ನು ಎದುರಿಸುವುದರಿಂದ ಹಿಡಿದು ಡೊನಾಲ್ಡ್, ವಾಲ್ಷ್, ಅಂಬ್ರೋಸ್, ಮೆಕ್ಗ್ರಾತ್, ಶೇನ್ ವಾರ್ನ್, ಚಾಮಿಂಡ ವಾಸ್, ಮುತ್ತಯ್ಯ ಮುರಳೀಧರನ್, ಬ್ರೆಟ್ ಲೀ, ಸಕ್ಲೇನ್ ಮುಷ್ತಾಕ್, ಡೇಲ್ ಸ್ಟೇನ್, ಪೊಲಾಕ್, ಗೌಫ್, ಶೋಯಬ್ ಅಖ್ತರ್ ಮುಂತಾದ ಬೌಲರ್ಗಳ ವಿರುದ್ದವೂ ಮೇಲುಗೈ ಸಾಧಿಸಿದರು. </p><p>ಕೆಲವೇ ವರ್ಷಗಳಲ್ಲಿ ಸಚಿನ್ ತನ್ನ ಉತ್ತುಂಗವನ್ನು ತಲುಪಿದರು. ಎದುರಾಳಿ ತಂಡಗಳಿಂದಲೂ ಅಪಾರ ಗೌರವವನ್ನು ಗಿಟ್ಟಿಸಿಕೊಂಡರು. ಮೈದಾನದಲ್ಲಿ ಅವರನ್ನು ಕಟ್ಟಿಹಾಕಲು ವಿಶೇಷ ತಂತ್ರವನ್ನು ಹೆಣೆಯಬೇಕಾಯಿತು. ಟೀಮ್ ಮೀಟಿಂಗ್ನಲ್ಲಿ ಸಚಿನ್ ಬಗ್ಗೆಯೇ ಚರ್ಚೆಗಳು ನಡೆಯುತ್ತಿದ್ದವು. ಒಂದು ಸಲ ಪಾಕ್ ನಾಯಕ ಇಂಜಮಾಮ್, ಸಚಿನ್ಗೆ ಸ್ಟ್ರೈಕ್ ನೀಡದಿರುವ ವಿಶಿಷ್ಟ ತಂತ್ರವನ್ನು ರೂಪಿಸಿದರು. ಇದು ಸಚಿನ್ರನ್ನು ಔಟ್ ಮಾಡಲು ಸಾಧ್ಯವೇ ಇಲ್ಲ ಎಂಬುದನ್ನು ಸಾಬೀತುಮಾಡುವಂತಿತ್ತು. </p>. <p>ಸಚಿನ್ ಬ್ಯಾಟಿಂಗ್ ಶೈಲಿ ಪರಿಪೂರ್ಣತೆಯಿಂದ ಕೂಡಿತ್ತು. ಅದಕ್ಕಾಗಿಯೇ ಮಾಸ್ಟರ್ ಎಂಬ ಬಿರುದನ್ನು ಪಡೆದುಕೊಂಡರು. ಬ್ಯಾಟಿಂಗ್ ಸಮತೋಲನ, ಫೂಟ್ ವರ್ಕ್, ನಿಖರತೆ ಎಲ್ಲವೂ ಪರಿಪೂರ್ಣವಾಗಿತ್ತು. ವೇಗವಾಗಿ ಅಥವಾ ನಿಧಾನವಾಗಿ ಬೌಲಿಂಗ್ ಮಾಡಿದರೂ ಸಚಿನ್ ಬ್ಯಾಟ್ ಬಳಿ ಉತ್ತರವಿರುತ್ತಿತ್ತು. ಸ್ಪಿನ್ ಕೈಚಳಕದ ಮೂಲಕ ಸಚಿನ್ರನ್ನು ಕಟ್ಟಿಹಾಕುವುದು ಕಠಿಣವಾಗಿತ್ತು. ಶೇನ್ ವಾರ್ನ್ ವಿರುದ್ಧ ಪ್ಯಾಡಲ್ ಸ್ವೀಪ್, ಅಖ್ತರ್ ವಿರುದ್ಧ ಅಪ್ಪರ್ ಕಟ್ ಸಿಕ್ಸ್ ಹೀಗೆ ಸಚಿನ್ ಬತ್ತಳಿಕೆಯಲ್ಲಿ ಇಲ್ಲದ ಹೊಡೆತಗಳೇ ಇರಲಿಲ್ಲ. ಆಧುನಿಕ ಕ್ರಿಕೆಟ್ಗೆ ತಕ್ಕಂತೆ ತಮ್ಮ ಬ್ಯಾಟಿಂಗ್ ಶೈಲಿಯಲ್ಲೂ ಗಮನಾರ್ಹ ಸುಧಾರಣೆಯನ್ನು ಸಾಧಿಸಿದ್ದರು. </p><p>ಕ್ರಿಕೆಟ್ ವೃತ್ತಿ ಜೀವನದಲ್ಲಿ ಪ್ರತಿಯೊಬ್ಬ ಕ್ರಿಕೆಟಿಗ ಏಳು-ಬೀಳುಗಳನ್ನು ಕಾಣುತ್ತಾರೆ. ಸಚಿನ್ ಸಹ ಇದರಿಂದ ಹೊರತಾಗಿರಲಿಲ್ಲ. ನಾಯಕನಾಗಿ ಹೆಚ್ಚಿನ ಯಶಸ್ಸನ್ನು ಕಂಡಿರಲಿಲ್ಲ. ಅಲ್ಲದೆ ಒಂದೇ ರೀತಿಯ ಹೊಡೆತಕ್ಕೆ ಮುಂದಾಗಿ ಪದೇ ಪದೇ ಔಟ್ ಆಗುತ್ತಿದ್ದರು. ಕೊನೆಗೆ ದೃಢ ನಿಶ್ಚಯ ಮಾಡಿದ ಸಚಿನ್, ಆಫ್ ಸ್ಟಂಪ್ನಿಂದ ಆಚೆಗಿನ ಎಸೆತಗಳಿಗೆ ಉತ್ತರಿಸದಿರಲು ನಿರ್ಧರಿಸಿದರು. ಬಳಿಕ ಆಸ್ಟ್ರೇಲಿಯಾ ವಿರುದ್ಧ ಗಳಿಸಿದ ಆ ಒಂದು ದ್ವಿಶತಕ ಇತಿಹಾಸ ಪುಟವನ್ನು ಸೇರಿತು. </p><p>ಪ್ರತಿಯೊಂದು ದಾಖಲೆಯು ಒಂದಲ್ಲ ಒಂದು ದಿನ ಮುರಿಯಲೇಬೇಕು. ಹಾಗೆಯೇ ಸಚಿನ್ ಏಕದಿನದ ದಾಖಲೆಯನ್ನು ವಿರಾಟ್ ಕೊಹ್ಲಿ ಹಾಗೂ ಟೆಸ್ಟ್ ದಾಖಲೆಯನ್ನು ಜೋ ರೂಟ್ ಮುರಿದರೂ ಅಚ್ಚರಿಯಿಲ್ಲ. ಆದರೆ ಸಚಿನ್ಗೆ ಸರಿಸಾಟಿ ಸಚಿನ್ ಮಾತ್ರ ಆಗಿದ್ದಾರೆ. </p><p>ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ ಮಾಂತ್ರಿಕತೆಯಲ್ಲೂ ಸಚಿನ್ ಭೇಷ್ ಎನಿಸಿದ್ದರು. ಓರ್ವ ಬೌಲರ್ ಆಗಲು ಸಚಿನ್ ಎಂಆರ್ಎಫ್ ಫೇಸ್ ಫೌಂಡೇಷನ್ಗೆ ಸೇರಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಅಲ್ಲಿ ಅಕಾಡಮಿ ಮುಖ್ಯಸ್ಥರಾಗಿದ್ದ ಆಸ್ಟ್ರೇಲಿಯಾದ ದಿಗ್ಗಜ ಡೆನಿಸ್ ಲಿಲ್ಲಿ ಬ್ಯಾಟಿಂಗ್ನತ್ತ ಗಮನಹರಿಸಲು ಸಲಹೆ ಮಾಡಿದ್ದರು. ಬ್ಯಾಟಿಂಗ್ನಂತೆ ಸಚಿನ್ ಬೌಲಿಂಗ್ನಲ್ಲೂ ವೈವಿಧ್ಯತೆ ಕಾಪಾಡಿಕೊಂಡಿದ್ದರು. ಆಫ್ ಸ್ಪಿನ್, ಲೆಗ್ ಸ್ಪಿನ್, ಮಧ್ಯಮ ವೇಗ, ಗೂಗ್ಲಿ ಸೇರಿದಂತೆ ವಿವಿಧ ಅಸ್ತ್ರಗಳನ್ನು ಪ್ರಯೋಗಿಸಿ ದಿಗ್ಗಜ ಬ್ಯಾಟರ್ಗಳಿಗೂ ಕಂಟಕರಾಗಿ ಕಾಡಿದ್ದರು. </p><p>ಅವರ ವಿಶ್ವಕಪ್ ಪ್ರಯಾಣವು ಭಾವನಾತ್ಮಕತೆಯನ್ನು ಪ್ರತಿಬಿಂಬಿಸಿತು. 1996ರ ವಿಶ್ವಕಪ್ನಲ್ಲಿ ಕೋಲ್ಕತ್ತದ ಈಡನ್ ಗಾರ್ಡನ್ನಲ್ಲಿ ಎದುರಾದ ಆಘಾತ, 1999ರಲ್ಲಿ ಇಂಗ್ಲೆಂಡ್ನಲ್ಲಿ ತಂದೆಯ ನಿಧನದ ಬಳಿಕವೂ ಶತಕ ಗಳಿಸಲು ಅವರು ತೋರಿದ ಸ್ಥೈರ್ಯ, 2003ರಲ್ಲಿ ವಿಶ್ವಕಪ್ ಸನಿಹದ ಸೋಲು, 2007ರ ವಿಶ್ವಕಪ್ನಲ್ಲಿ ಎದುರಾದ ಹೀನಾಯ ಸೋಲು ಎಂದಿಗೂ ಸಚಿನ್ರನ್ನು ಕುಗ್ಗಿಸಲಿಲ್ಲ. 2011ರಲ್ಲಿ ತವರಿನ ಅಭಿಮಾನಿಗಳ ಮುಂದೆಯೇ ವಿಶ್ವಕಪ್ ಗೆದ್ದು ತಮ್ಮ ಕನಸನ್ನು ನನಸುಗೊಳಿಸಿದರು. </p>. <p>ವಾಂಖೆಡೆಯಲ್ಲಿ ಭಾರತ ಟ್ರೋಫಿ ಎತ್ತಿ ಹಿಡಿದಾಗ ಸಚಿನ್ ಆನಂದ ಭಾಷ್ಪವನ್ನು ಸುರಿಸಿದರು. ಸಹ ಆಟಗಾರರು ಸಚಿನ್ರನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಇಡೀ ಕ್ರೀಡಾಂಗಣಕ್ಕೆ ಸುತ್ತು ಬಂದರು. ಭಾರತೀಯರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಸಚಿನ್ಗೆ ಮಾತ್ರವಲ್ಲದೆ ಶತಕೋಟಿ ಕನಸುಗಳು ನನಸುಕೊಂಡ ಕ್ಷಣವಾಗಿತ್ತು. ಇಡೀ ತಂಡವು ಸಚಿನ್ಗೆ ವಿಶ್ವಕಪ್ ಅನ್ನು ಅರ್ಪಿಸಿತ್ತು. </p><p>ಸಚಿನ್ ಜನಪ್ರಿಯತೆ ಎಷ್ಟಿತ್ತೆಂದರೆ ಅವರ ಬ್ಯಾಟಿಂಗ್ ನೋಡುವುದಕ್ಕಾಗಿ ಇಡೀ ಬೀದಿಗಳು ಖಾಲಿಯಾಗುತ್ತಿದ್ದವು. ಜನರು ಮನೆ, ಅಂಗಡಿಗಳಲ್ಲಿ ಟಿವಿ ಮುಂದೆ ಸೇರುತ್ತಿದ್ದರು. ಇಡೀ ಕಚೇರಿಯೇ ಸ್ಥಬ್ತವಾಗುತ್ತಿತ್ತು. 'ಕ್ರಿಕೆಟ್ ನನ್ನ ಧರ್ಮ. ಸಚಿನ್ ನನ್ನ ದೇವರು' ಎಂಬ ಪೋಸ್ಟರ್ಗಳು ರಾರಾಜಿಸುತ್ತಿದ್ದವು. ಇನ್ನು ಸರಳವಾಗಿ ಹೇಳುವುದಾದರೆ ಸಚಿನ್ ಕ್ರೀಸಿನಲ್ಲಿದ್ದರೆ ಇಡೀ ದೇಶವೇ ಸ್ಥಬ್ತಗೊಳ್ಳುತ್ತಿತ್ತು. </p><p>ಸಚಿನ್ ದೇಶದ ಆಸ್ತಿ ಆಗಿದ್ದರು. ಸಚಿನ್ ಅವರ ವೈಫಲ್ಯವು ನಮ್ಮದೇ ವೈಯಕ್ತಿಕ ನಷ್ಟವೆಂದು ಭಾವಿಸಲಾಗಿತ್ತು. ಅವರ ಗಾಯ ರಾಷ್ಟ್ರೀಯ ಕಾಳಜಿಯ ವಿಷಯವಾಗಿತ್ತು. ಪ್ರತಿಯೊಂದು ಪುನರಾಗಮನ ಹಾಗೂ ಶತಕಗಳು ಇಡೀ ರಾಷ್ಟ್ರದ ಸಂಭ್ರಮಾಚರಣೆಯಾಗಿತ್ತು. </p><p>ಮೈದಾನದಲ್ಲಿ ಸಚಿನ್ ಸಾಧನೆ ಅಮೋಘವೇ ಸರಿ. ಆದರೆ ಮೈದಾನದ ಹೊರಗೂ ಅವರ ವಿನಯವಂತಿಕೆಯ ನಡತೆ ಕ್ರಿಕೆಟ್ನ ನಿಜವಾದ ರಾಯಭಾರಿಯನ್ನಾಗಿ ಮಾಡಿತು. ಭಾರತದಲ್ಲಿ ಅನೇಕ ಶ್ರೇಷ್ಠ ಕ್ರಿಕೆಟಿಗರು ಹುಟ್ಟಬಹುದು. ಆದರೆ ಮತ್ತೆಂದು ಇನ್ನೊಬ್ಬ ಸಚಿನ್ರನ್ನು ಹುಟ್ಟು ಹಾಕಲು ಸಾಧ್ಯವೇ ಇಲ್ಲ. ಏಕೆಂದರೆ ಸಚಿನ್ ಅವರೊಂದಿಗೆ ಅಭಿಮಾನಿಗಳಿಗೆ ಅವಿನಾಭಾವ ಸಂಬಂಧವಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಚಿನ್ ರಮೇಶ್ ತೆಂಡೂಲ್ಕರ್. ಬಹುಶಃ ಈ ಹೆಸರನ್ನು ಉಚ್ಚರಿಸದ ಕ್ರಿಕೆಟ್ ಅಭಿಮಾನಿಗಳು ಇರಲಿಕ್ಕಿಲ್ಲ. ಕ್ರಿಕೆಟಿಗರಿಗಷ್ಟೇ ಅಲ್ಲದೆ ಕ್ರಿಕೆಟ್ ಅಭಿಮಾನಿಗಳಿಗೂ ಇವರು 'ಆರಾಧ್ಯ ದೈವ'. ಕ್ರಿಕೆಟ್ ದೇವರಿಗೆ ಇಂದು (ಏ.24) ಹುಟ್ಟುಹಬ್ಬದ ಸಂಭ್ರಮ. </p><p>90ರ ದಶಕ ಹಾಗೂ 2000ನೇ ದಶಕದ ಆರಂಭದಲ್ಲಿ ಬೆಳೆದು ಬಂದವರಿಗೆ ಸಚಿನ್ ಅಚ್ಚುಮೆಚ್ಚಿನ ಕ್ರಿಕೆಟಿಗ ಆಗಿದ್ದಾರೆ. ಆದರೆ 2003ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲು ಅತ್ಯಂತ ಕರಾಳ ನೆನಪುಗಳಲ್ಲಿ ಒಂದಾಗಿದೆ. ರಿಕಿ ಪಾಂಟಿಂಗ್ ನಾಯಕತ್ವದ ಮೆಕ್ಗ್ರಾತ್, ಬ್ರೆಟ್ ಲೀ, ಸೈಮಂಡ್ಸ್, ಹೇಡನ್, ಗಿಲ್ಕ್ರಿಸ್ಟ್ ಅವರನ್ನು ಒಳಗೊಂಡ ಆಸ್ಟ್ರೇಲಿಯಾ ವಿರುದ್ಧ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಭಾರತಕ್ಕೆ ಸಚಿನ್ ಕ್ರೀಸಿಗಿಳಿದಾಗ ನಿರೀಕ್ಷೆಗಳು ಬಾನೆತ್ತರದಷ್ಟಿತ್ತು. ಆದರೆ ಮೊದಲ ಓವರ್ನಲ್ಲೇ ಔಟ್ ಆಗಿ ಹೊರನಡೆದಾಗ ಟ್ರೋಫಿ ಗೆಲ್ಲುವ ಭಾರತದ ಕನಸು ಅಸ್ತಮಿಸಿತ್ತು. </p>. <p>ಒಂದು ಕ್ಷಣ ಇಡೀ ದೇಶವೇ ಸ್ಥಬ್ತವಾಗಿತ್ತು. ಮನೆ, ಅಂಗಡಿ, ಬೀದಿ, ಮಾರುಕಟ್ಟೆ ಸೇರಿ ಎಲ್ಲ ಕಡೆ ಮೌನ ಆವರಿಸಿತ್ತು. ಕ್ರೀಡಾಭಿಮಾನಿಗಳಲ್ಲಿ ಅಂತಹದೊಂದು ನಂಬಿಕೆ ಹುಟ್ಟಿ ಹಾಕಿದವರು ಬೇರೆ ಯಾರೂ ಆಗಿರಲಿಲ್ಲ. ಅವರೇ ಸಚಿನ್...</p>.ಮುಂಬೈ ತಂಡದಲ್ಲಿ ಹೆಚ್ಚು ಅವಕಾಶ ಸಿಗಲಿಲ್ಲ? ಮೌನಮುರಿದ ಸಚಿನ್ ಪುತ್ರ ಅರ್ಜುನ್.25 ವರ್ಷಗಳ ಹಿಂದೆ ಈ ದಿನ: ಸಚಿನ್ ತೆಂಡೂಲ್ಕರ್ ಹತ್ತು ಸಾವಿರ ರನ್ಗಳ ಸರದಾರ. <p>1983ರಲ್ಲಿ ವೆಸ್ಟ್ಇಂಡೀಸ್ನಂತಹ ದೈತ್ಯ ತಂಡವನ್ನು ಸೋಲಿಸಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಚೊಚ್ಚಲ ವಿಶ್ವಕಪ್ ಗೆದ್ದಿರುವುದು, ದೇಶದಲ್ಲಿ ಕ್ರಿಕೆಟ್ ಕಿಚ್ಚು ಹುಟ್ಟು ಹಾಕಲು ಕಾರಣವಾಗಿತ್ತು. ಅದುವೇ ಕ್ರಿಕೆಟ್ಗೆ ಕಾಲಿಡಲು ಸಚಿನ್ಗೂ ಪ್ರೇರಣೆಯಾಗಿತ್ತು. ಬಳಿಕ 1989ರಲ್ಲಿ ಸಚಿನ್ ಪದಾರ್ಪಣೆ ಮಾಡಿರುವುದು ವಿಶ್ವ ಕ್ರಿಕೆಟ್ನಲ್ಲಿ ಭಾರತೀಯ ಕ್ರಿಕೆಟ್ನ ಮಹತ್ವದ ಮೈಲಿಗಲ್ಲಿನಲ್ಲಿ ಒಂದೆನಿಸಿದೆ.</p>. <p>ಅಚ್ರೇಕರ್ ಗರಡಿಯಲ್ಲಿ ಪಳಗಿದ 16ರ ಹರೆಯದ ಸಚಿನ್, ಪದಾರ್ಪಣೆಗೂ ಮೊದಲೇ ಹೋದಲೆಲ್ಲ ಸುದ್ದಿ ಮಾಡಿದ್ದರು. 1989ರಲ್ಲಿ ಶ್ರೀಕಾಂತ್ ನೇತೃತ್ವದ ಭಾರತ ತಂಡವು ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲು ಪಾಕಿಸ್ತಾನದ ಪ್ರಯಾಣ ಬೆಳೆಸಿತ್ತು. ಅಂದು ವಿಶ್ವದರ್ಜೆಯ ಪಾಕಿಸ್ತಾನದ ಬೌಲರ್ಗಳನ್ನು 16ರ ಪೋರ ನಿರ್ಭಿತಿಯಿಂದ ಎದುರಿಸುತ್ತಿರುವುದು ಯಾವ ಪವಾಡಕ್ಕೂ ಕಡಿಮೆಯಾಗಿರಲಿಲ್ಲ. </p><p>ಸುನಿಲ್ ಗವಾಸ್ಕರ್ ಹಾಗೂ ಕಪಿಲ್ ದೇವ್ ಅವರಂತಹ ಶ್ರೇಷ್ಠ ಆಟಗಾರರನ್ನು ಭಾರತವು ಕಂಡಿತ್ತು. ಆದರೆ 'ಸಿಡಿಲಮರಿ' ಸಚಿನ್ ಭಾರತೀಯ ಕ್ರಿಕೆಟ್ನ ಚಿತ್ರಣವನ್ನೇ ಬದಲಿಸಿದರು. ಯುವ ಬ್ಯಾಟರ್ ಬಗ್ಗೆ ಆರಂಭದಲ್ಲಿ ಅನುಕಂಪ ತೋರಿದ ಪಾಕ್ ವೇಗಿಗಳಾದ ವಕಾರ್ ಯೂನಿಸ್ ಹಾಗೂ ವಾಸೀಮ್ ಅಕ್ರಂ ಬಳಿಕ ಯುವ ಪ್ರತಿಭೆಯನ್ನು ಮೆಚ್ಚಲೇಬೇಕಾಯಿತು. </p>. <p>ಸಚಿನ್ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟಾಗ, ಭಾರತದಲ್ಲಿ ಅಪಾರ ಸಾಮರ್ಥ್ಯ ಇದ್ದರೂ ಆತ್ಮವಿಶ್ವಾಸದ ಕೊರತೆ ಕಾಡುತ್ತಿತ್ತು. ಆಗಲೂ ಬಲಿಷ್ಠ ರಾಷ್ಟ್ರವೆನಿಸಿರಲಿಲ್ಲ. 1989ರಲ್ಲಿ ಬಿಎಸ್ಇ ಷೇರು ಸೂಚ್ಯಂಕ 1,000ಕ್ಕಿಂತ ಕಡಿಮೆಯಾಗಿತ್ತು. ಭಾರತದ ಜಿಡಿಪಿ $270 ಬಿಲಿಯನ್ ಆಗಿತ್ತು. ಆರ್ಥಿಕ ಉದಾರೀಕರಣದ ಪ್ರಾರಂಭವೂ ಆಗಿರಲಿಲ್ಲ. </p><p>70, 80ರ ದಶತಕದಲ್ಲಿ ಗವಾಸ್ಕರ್ ಹಾಗೂ ಕಪಿಲ್ ದಿಗ್ಗಜರಾಗಿ ಹೊರಹೊಮ್ಮಿದ್ದರು. ಆದರೆ ಸಚಿನ್ ಅವರಿಗಿಂತ ವಿಶಿಷ್ಟವಾಗಿ ಗುರುತಿಸಿಕೊಂಡರು. ಗವಾಸ್ಕರ್, ಕಪಿಲ್ ಅಂದಿನ ಸೂಪರ್ ಸ್ಟಾರ್ಗಳಾಗಿದ್ದರು. ಆದರೂ ವಿಶ್ವ ಕ್ರಿಕೆಟ್ನಲ್ಲಿ ಭಾರತದ ಪ್ರಭಾವ ಹೆಚ್ಚು ಇರಲಿಲ್ಲ. ಆದರೆ ಸ್ಫೋಟಕ ಆಟದ ಶೈಲಿಯ ಸಚಿನ್ ಭಾರತದ ಪಾಲಿಗೆ ಸೇಡು ತೀರಿಸುವ ಅಸ್ತ್ರವಾದರು. ಯುವ ಪೀಳಿಗೆಯ ಆಟಗಾರರು ತಮ್ಮದೇ ಶೈಲಿಯ ನಿರ್ಭಿತಿಯ ಆಟದ ಮೂಲಕ ಬಲಿಷ್ಠ ತಂಡಗಳನ್ನು ಹೇಗೆ ಸೋಲಿಸುವುದೆಂದು ತೋರಿಸಿಕೊಟ್ಟರು. 'ನಮ್ಮದೇ ಶ್ರೇಷ್ಠ ತಂಡ' ಎಂಬ ನಂಬಿಕೆಯನ್ನು ಹುಟ್ಟಿಸಿದರು. </p>. <p>ವೆಸ್ಟ್ಇಂಡೀಸ್, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ಸೇರಿದಂತೆ ವಿಶ್ವದ ಮಾರಕ ಬೌಲರ್ಗಳ ವಿರುದ್ಧದ ಸಚಿನ್ ಬ್ಯಾಟಿಂಗ್ ಚತುರತೆ ಎಲ್ಲಡೆ ಚರ್ಚೆಯ ವಿಷಯವಾಯಿತು. ವಾಸೀಮ್, ವಕಾರ್ರಂತಹ ಸ್ವಿಂಗ್ ಮಾಸ್ಟರ್ಗಳನ್ನು ಎದುರಿಸುವುದರಿಂದ ಹಿಡಿದು ಡೊನಾಲ್ಡ್, ವಾಲ್ಷ್, ಅಂಬ್ರೋಸ್, ಮೆಕ್ಗ್ರಾತ್, ಶೇನ್ ವಾರ್ನ್, ಚಾಮಿಂಡ ವಾಸ್, ಮುತ್ತಯ್ಯ ಮುರಳೀಧರನ್, ಬ್ರೆಟ್ ಲೀ, ಸಕ್ಲೇನ್ ಮುಷ್ತಾಕ್, ಡೇಲ್ ಸ್ಟೇನ್, ಪೊಲಾಕ್, ಗೌಫ್, ಶೋಯಬ್ ಅಖ್ತರ್ ಮುಂತಾದ ಬೌಲರ್ಗಳ ವಿರುದ್ದವೂ ಮೇಲುಗೈ ಸಾಧಿಸಿದರು. </p><p>ಕೆಲವೇ ವರ್ಷಗಳಲ್ಲಿ ಸಚಿನ್ ತನ್ನ ಉತ್ತುಂಗವನ್ನು ತಲುಪಿದರು. ಎದುರಾಳಿ ತಂಡಗಳಿಂದಲೂ ಅಪಾರ ಗೌರವವನ್ನು ಗಿಟ್ಟಿಸಿಕೊಂಡರು. ಮೈದಾನದಲ್ಲಿ ಅವರನ್ನು ಕಟ್ಟಿಹಾಕಲು ವಿಶೇಷ ತಂತ್ರವನ್ನು ಹೆಣೆಯಬೇಕಾಯಿತು. ಟೀಮ್ ಮೀಟಿಂಗ್ನಲ್ಲಿ ಸಚಿನ್ ಬಗ್ಗೆಯೇ ಚರ್ಚೆಗಳು ನಡೆಯುತ್ತಿದ್ದವು. ಒಂದು ಸಲ ಪಾಕ್ ನಾಯಕ ಇಂಜಮಾಮ್, ಸಚಿನ್ಗೆ ಸ್ಟ್ರೈಕ್ ನೀಡದಿರುವ ವಿಶಿಷ್ಟ ತಂತ್ರವನ್ನು ರೂಪಿಸಿದರು. ಇದು ಸಚಿನ್ರನ್ನು ಔಟ್ ಮಾಡಲು ಸಾಧ್ಯವೇ ಇಲ್ಲ ಎಂಬುದನ್ನು ಸಾಬೀತುಮಾಡುವಂತಿತ್ತು. </p>. <p>ಸಚಿನ್ ಬ್ಯಾಟಿಂಗ್ ಶೈಲಿ ಪರಿಪೂರ್ಣತೆಯಿಂದ ಕೂಡಿತ್ತು. ಅದಕ್ಕಾಗಿಯೇ ಮಾಸ್ಟರ್ ಎಂಬ ಬಿರುದನ್ನು ಪಡೆದುಕೊಂಡರು. ಬ್ಯಾಟಿಂಗ್ ಸಮತೋಲನ, ಫೂಟ್ ವರ್ಕ್, ನಿಖರತೆ ಎಲ್ಲವೂ ಪರಿಪೂರ್ಣವಾಗಿತ್ತು. ವೇಗವಾಗಿ ಅಥವಾ ನಿಧಾನವಾಗಿ ಬೌಲಿಂಗ್ ಮಾಡಿದರೂ ಸಚಿನ್ ಬ್ಯಾಟ್ ಬಳಿ ಉತ್ತರವಿರುತ್ತಿತ್ತು. ಸ್ಪಿನ್ ಕೈಚಳಕದ ಮೂಲಕ ಸಚಿನ್ರನ್ನು ಕಟ್ಟಿಹಾಕುವುದು ಕಠಿಣವಾಗಿತ್ತು. ಶೇನ್ ವಾರ್ನ್ ವಿರುದ್ಧ ಪ್ಯಾಡಲ್ ಸ್ವೀಪ್, ಅಖ್ತರ್ ವಿರುದ್ಧ ಅಪ್ಪರ್ ಕಟ್ ಸಿಕ್ಸ್ ಹೀಗೆ ಸಚಿನ್ ಬತ್ತಳಿಕೆಯಲ್ಲಿ ಇಲ್ಲದ ಹೊಡೆತಗಳೇ ಇರಲಿಲ್ಲ. ಆಧುನಿಕ ಕ್ರಿಕೆಟ್ಗೆ ತಕ್ಕಂತೆ ತಮ್ಮ ಬ್ಯಾಟಿಂಗ್ ಶೈಲಿಯಲ್ಲೂ ಗಮನಾರ್ಹ ಸುಧಾರಣೆಯನ್ನು ಸಾಧಿಸಿದ್ದರು. </p><p>ಕ್ರಿಕೆಟ್ ವೃತ್ತಿ ಜೀವನದಲ್ಲಿ ಪ್ರತಿಯೊಬ್ಬ ಕ್ರಿಕೆಟಿಗ ಏಳು-ಬೀಳುಗಳನ್ನು ಕಾಣುತ್ತಾರೆ. ಸಚಿನ್ ಸಹ ಇದರಿಂದ ಹೊರತಾಗಿರಲಿಲ್ಲ. ನಾಯಕನಾಗಿ ಹೆಚ್ಚಿನ ಯಶಸ್ಸನ್ನು ಕಂಡಿರಲಿಲ್ಲ. ಅಲ್ಲದೆ ಒಂದೇ ರೀತಿಯ ಹೊಡೆತಕ್ಕೆ ಮುಂದಾಗಿ ಪದೇ ಪದೇ ಔಟ್ ಆಗುತ್ತಿದ್ದರು. ಕೊನೆಗೆ ದೃಢ ನಿಶ್ಚಯ ಮಾಡಿದ ಸಚಿನ್, ಆಫ್ ಸ್ಟಂಪ್ನಿಂದ ಆಚೆಗಿನ ಎಸೆತಗಳಿಗೆ ಉತ್ತರಿಸದಿರಲು ನಿರ್ಧರಿಸಿದರು. ಬಳಿಕ ಆಸ್ಟ್ರೇಲಿಯಾ ವಿರುದ್ಧ ಗಳಿಸಿದ ಆ ಒಂದು ದ್ವಿಶತಕ ಇತಿಹಾಸ ಪುಟವನ್ನು ಸೇರಿತು. </p><p>ಪ್ರತಿಯೊಂದು ದಾಖಲೆಯು ಒಂದಲ್ಲ ಒಂದು ದಿನ ಮುರಿಯಲೇಬೇಕು. ಹಾಗೆಯೇ ಸಚಿನ್ ಏಕದಿನದ ದಾಖಲೆಯನ್ನು ವಿರಾಟ್ ಕೊಹ್ಲಿ ಹಾಗೂ ಟೆಸ್ಟ್ ದಾಖಲೆಯನ್ನು ಜೋ ರೂಟ್ ಮುರಿದರೂ ಅಚ್ಚರಿಯಿಲ್ಲ. ಆದರೆ ಸಚಿನ್ಗೆ ಸರಿಸಾಟಿ ಸಚಿನ್ ಮಾತ್ರ ಆಗಿದ್ದಾರೆ. </p><p>ಬ್ಯಾಟಿಂಗ್ ಮಾತ್ರವಲ್ಲದೆ ಬೌಲಿಂಗ್ ಮಾಂತ್ರಿಕತೆಯಲ್ಲೂ ಸಚಿನ್ ಭೇಷ್ ಎನಿಸಿದ್ದರು. ಓರ್ವ ಬೌಲರ್ ಆಗಲು ಸಚಿನ್ ಎಂಆರ್ಎಫ್ ಫೇಸ್ ಫೌಂಡೇಷನ್ಗೆ ಸೇರಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಅಲ್ಲಿ ಅಕಾಡಮಿ ಮುಖ್ಯಸ್ಥರಾಗಿದ್ದ ಆಸ್ಟ್ರೇಲಿಯಾದ ದಿಗ್ಗಜ ಡೆನಿಸ್ ಲಿಲ್ಲಿ ಬ್ಯಾಟಿಂಗ್ನತ್ತ ಗಮನಹರಿಸಲು ಸಲಹೆ ಮಾಡಿದ್ದರು. ಬ್ಯಾಟಿಂಗ್ನಂತೆ ಸಚಿನ್ ಬೌಲಿಂಗ್ನಲ್ಲೂ ವೈವಿಧ್ಯತೆ ಕಾಪಾಡಿಕೊಂಡಿದ್ದರು. ಆಫ್ ಸ್ಪಿನ್, ಲೆಗ್ ಸ್ಪಿನ್, ಮಧ್ಯಮ ವೇಗ, ಗೂಗ್ಲಿ ಸೇರಿದಂತೆ ವಿವಿಧ ಅಸ್ತ್ರಗಳನ್ನು ಪ್ರಯೋಗಿಸಿ ದಿಗ್ಗಜ ಬ್ಯಾಟರ್ಗಳಿಗೂ ಕಂಟಕರಾಗಿ ಕಾಡಿದ್ದರು. </p><p>ಅವರ ವಿಶ್ವಕಪ್ ಪ್ರಯಾಣವು ಭಾವನಾತ್ಮಕತೆಯನ್ನು ಪ್ರತಿಬಿಂಬಿಸಿತು. 1996ರ ವಿಶ್ವಕಪ್ನಲ್ಲಿ ಕೋಲ್ಕತ್ತದ ಈಡನ್ ಗಾರ್ಡನ್ನಲ್ಲಿ ಎದುರಾದ ಆಘಾತ, 1999ರಲ್ಲಿ ಇಂಗ್ಲೆಂಡ್ನಲ್ಲಿ ತಂದೆಯ ನಿಧನದ ಬಳಿಕವೂ ಶತಕ ಗಳಿಸಲು ಅವರು ತೋರಿದ ಸ್ಥೈರ್ಯ, 2003ರಲ್ಲಿ ವಿಶ್ವಕಪ್ ಸನಿಹದ ಸೋಲು, 2007ರ ವಿಶ್ವಕಪ್ನಲ್ಲಿ ಎದುರಾದ ಹೀನಾಯ ಸೋಲು ಎಂದಿಗೂ ಸಚಿನ್ರನ್ನು ಕುಗ್ಗಿಸಲಿಲ್ಲ. 2011ರಲ್ಲಿ ತವರಿನ ಅಭಿಮಾನಿಗಳ ಮುಂದೆಯೇ ವಿಶ್ವಕಪ್ ಗೆದ್ದು ತಮ್ಮ ಕನಸನ್ನು ನನಸುಗೊಳಿಸಿದರು. </p>. <p>ವಾಂಖೆಡೆಯಲ್ಲಿ ಭಾರತ ಟ್ರೋಫಿ ಎತ್ತಿ ಹಿಡಿದಾಗ ಸಚಿನ್ ಆನಂದ ಭಾಷ್ಪವನ್ನು ಸುರಿಸಿದರು. ಸಹ ಆಟಗಾರರು ಸಚಿನ್ರನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಇಡೀ ಕ್ರೀಡಾಂಗಣಕ್ಕೆ ಸುತ್ತು ಬಂದರು. ಭಾರತೀಯರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಸಚಿನ್ಗೆ ಮಾತ್ರವಲ್ಲದೆ ಶತಕೋಟಿ ಕನಸುಗಳು ನನಸುಕೊಂಡ ಕ್ಷಣವಾಗಿತ್ತು. ಇಡೀ ತಂಡವು ಸಚಿನ್ಗೆ ವಿಶ್ವಕಪ್ ಅನ್ನು ಅರ್ಪಿಸಿತ್ತು. </p><p>ಸಚಿನ್ ಜನಪ್ರಿಯತೆ ಎಷ್ಟಿತ್ತೆಂದರೆ ಅವರ ಬ್ಯಾಟಿಂಗ್ ನೋಡುವುದಕ್ಕಾಗಿ ಇಡೀ ಬೀದಿಗಳು ಖಾಲಿಯಾಗುತ್ತಿದ್ದವು. ಜನರು ಮನೆ, ಅಂಗಡಿಗಳಲ್ಲಿ ಟಿವಿ ಮುಂದೆ ಸೇರುತ್ತಿದ್ದರು. ಇಡೀ ಕಚೇರಿಯೇ ಸ್ಥಬ್ತವಾಗುತ್ತಿತ್ತು. 'ಕ್ರಿಕೆಟ್ ನನ್ನ ಧರ್ಮ. ಸಚಿನ್ ನನ್ನ ದೇವರು' ಎಂಬ ಪೋಸ್ಟರ್ಗಳು ರಾರಾಜಿಸುತ್ತಿದ್ದವು. ಇನ್ನು ಸರಳವಾಗಿ ಹೇಳುವುದಾದರೆ ಸಚಿನ್ ಕ್ರೀಸಿನಲ್ಲಿದ್ದರೆ ಇಡೀ ದೇಶವೇ ಸ್ಥಬ್ತಗೊಳ್ಳುತ್ತಿತ್ತು. </p><p>ಸಚಿನ್ ದೇಶದ ಆಸ್ತಿ ಆಗಿದ್ದರು. ಸಚಿನ್ ಅವರ ವೈಫಲ್ಯವು ನಮ್ಮದೇ ವೈಯಕ್ತಿಕ ನಷ್ಟವೆಂದು ಭಾವಿಸಲಾಗಿತ್ತು. ಅವರ ಗಾಯ ರಾಷ್ಟ್ರೀಯ ಕಾಳಜಿಯ ವಿಷಯವಾಗಿತ್ತು. ಪ್ರತಿಯೊಂದು ಪುನರಾಗಮನ ಹಾಗೂ ಶತಕಗಳು ಇಡೀ ರಾಷ್ಟ್ರದ ಸಂಭ್ರಮಾಚರಣೆಯಾಗಿತ್ತು. </p><p>ಮೈದಾನದಲ್ಲಿ ಸಚಿನ್ ಸಾಧನೆ ಅಮೋಘವೇ ಸರಿ. ಆದರೆ ಮೈದಾನದ ಹೊರಗೂ ಅವರ ವಿನಯವಂತಿಕೆಯ ನಡತೆ ಕ್ರಿಕೆಟ್ನ ನಿಜವಾದ ರಾಯಭಾರಿಯನ್ನಾಗಿ ಮಾಡಿತು. ಭಾರತದಲ್ಲಿ ಅನೇಕ ಶ್ರೇಷ್ಠ ಕ್ರಿಕೆಟಿಗರು ಹುಟ್ಟಬಹುದು. ಆದರೆ ಮತ್ತೆಂದು ಇನ್ನೊಬ್ಬ ಸಚಿನ್ರನ್ನು ಹುಟ್ಟು ಹಾಕಲು ಸಾಧ್ಯವೇ ಇಲ್ಲ. ಏಕೆಂದರೆ ಸಚಿನ್ ಅವರೊಂದಿಗೆ ಅಭಿಮಾನಿಗಳಿಗೆ ಅವಿನಾಭಾವ ಸಂಬಂಧವಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>