ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂಬ್ಳೆ, ದ್ರಾವಿಡ್ ಹೋರಾಟ ಸ್ಮರಿಸಿದ ಸೆಹ್ವಾಗ್

Last Updated 10 ಏಪ್ರಿಲ್ 2019, 18:18 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಕ್ರಿಕೆಟಿಗರು ಈಗ ಆರ್ಥಿಕವಾಗಿ ಸದೃಢರಾಗಲು ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರ ಹೋರಾಟವೇ ಕಾರಣ ಎಂದು ಹಿರಿಯ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

‘ಬಿಸಿಸಿಐನ ವರಮಾನ ಹಂಚಿಕೆಗೆ ಸಂಬಂಧಿಸಿದಂತೆ ಈ ಮೂವರು ಹೋರಾಡದಿದ್ದರೆ ಇಂದು ನಮ್ಮೆಲ್ಲರ ಸ್ಥಿತಿ ಏನಾಗಿರುತ್ತಿತ್ತೋ ಗೊತ್ತಿಲ್ಲ’ ಎಂದುನ್ಯೂ ಕಬಡ್ಡಿ ಫೆಡರೇಷನ್ ಆಯೋಜಿಸುತ್ತಿರುವ ಇಂಡೊ ಇಂಟರ್‌ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ಕುರಿತ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

'ಬಿಸಿಸಿಐ ವರಮಾನದ ಹಂಚಿ ಕೆಯಲ್ಲಿ ಕ್ರಿಕೆಟ್ ಆಟಗಾರರ ಪಾಲು ಹೆಚ್ಚಿರಬೇಕು ಎಂದು ಈ ಮೂವರು ವಾದಿಸಿದ್ದರು. ಬಿಸಿಸಿಐನ ಟಿವಿ ಪ್ರಸಾರದ ಹಕ್ಕುಗಳ ಒಪ್ಪಂದದಲ್ಲಿ ಆಟಗಾರರ ಹಿತಾಸಕ್ತಿಯೂ ಇರಬೇಕೆನ್ನುವ ಕನಸಿನ ಬೀಜ ಬಿತ್ತಿದ್ದು ಸಚಿನ್, ಗಂಗೂಲಿ, ದ್ರಾವಿಡ್ ಮತ್ತು ಕುಂಬ್ಳೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT