ಸರಣಿಯಲ್ಲಿ ಒಂದು ಪಂದ್ಯ ಮಾತ್ರ ಆಡಿರುವ ಉಮೇಶ್ ಯಾದವ್ (6 ವಿಕೆಟ್) ಮತ್ತು ಶಾರ್ದೂಲ್ ಠಾಕೂರ್ (3 ವಿಕೆಟ್ ಮತ್ತು ಎರಡು ಅರ್ಧಶತಕ) ಗಮನ ಸೆಳೆದಿದ್ದಾರೆ. ಆದ್ದರಿಂದ ಅವರಲ್ಲಿ ಯಾರನ್ನೂ ಕೈಬಿಡುವ ಸಾಧ್ಯತೆ ಇಲ್ಲ. ನಾಲ್ಕು ಪಂದ್ಯಗಳಲ್ಲಿ ಆಡಿರುವ ಜಸ್ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಅವರ ಜಾಗಕ್ಕೆ ಶಮಿ ಮರಳಬಹುದು. ಬೂಮ್ರಾ ಮುಂದುವರಿದರೆ ಮೊಹಮ್ಮದ್ ಸಿರಾಜ್ ಗೆ ವಿಶ್ರಾಂತಿ ಸಿಗಬಹುದು ಎನ್ನಲಾಗುತ್ತಿದೆ.