ನವದೆಹಲಿ: ‘ಕೋವಿಡ್ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟ್ ಚಟುವಟಿಕೆಗಳ ಪುನರರಾಂಭಕ್ಕೆ ಐಸಿಸಿ ನೀಡಿರುವ ಕೆಲವು ಮಾರ್ಗಸೂಚಿಗಳು ಅಪ್ರಾಯೋಗಿಕವಾಗಿದ್ದು, ಅವುಗಳ ಮರುಪರಿಶೀಲನೆ ನಡೆಯಬೇಕು’ ಎಂದು ಹಿರಿಯ ಕ್ರಿಕೆಟಿಗರಾದ ಆಕಾಶ್ ಚೋಪ್ರಾ, ಇರ್ಫಾನ್ ಪಠಾಣ್ ಮತ್ತು ಮಾಂಟಿ ಪನೇಸರ್ ಅಭಿಪ್ರಾಯಪಟ್ಟಿದ್ದಾರೆ.