ಆಕ್ಲೆಂಡ್: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡಿದ್ದ ಕೆಲವು ಭಾರತೀಯ ಅನುಭವಿ ಆಟಗಾರರಿಗೆ ಬಯೋಬಬಲ್ ಶಿಷ್ಟಾಚಾರದ ನಿರ್ಬಂಧಗಳು ಇಷ್ಟವಿರಲಿಲ್ಲ ಎಂದು ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಜೇಮ್ಸ್ ಪಮೆಂಟ್ ಹೇಳಿದ್ದಾರೆ.
ಈಚೆಗೆ ಆಯೋಜಿಸಲಾಗಿದ್ದ ಐಪಿಎಲ್ 14ನೇ ಆವೃತ್ತಿಯನ್ನು ಮುಂದೂಡಲಾಗಿದೆ. ಬಯೋಬಬಲ್ನಲ್ಲಿ ಕೆಲವು ಆಟಗಾರರಿಗೆ ಕೋವಿಡ್ ಸೋಂಕು ತಗುಲಿದ್ದ ಕಾರಣ ಟೂರ್ನಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು.
‘ಭಾರತದ ಕೆಲವು ಆಟಗಾರರಲ್ಲಿ ನಿರ್ಬಂಧಗಳ ಬಗ್ಗೆ ಸಹಮತವಿರಲಿಲ್ಲ. ಆದರೆ ನಮಗೆ ಯಾವುದೇ ತಕರಾರು ಇರಲಿಲ್ಲ. ಈ ವ್ಯವಸ್ಥೆಯಲ್ಲಿ ಸುರಕ್ಷಿತವಾಗಿದ್ದೆವು‘ ಎಂದು ಹೇಳಿದರು.