ಆಸ್ಟ್ರೇಲಿಯಾದಲ್ಲಿ 2020–21ರಲ್ಲಿ ಭಾರತವು ಟೆಸ್ಟ್ ಸರಣಿ ಜಯಿಸಿ ಚಾರಿತ್ರಿಕ ಸಾಧನೆ ಮಾಡಿದ್ದಾಗ ರಹಾನೆ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಏಕೆಂದರೆ ಆ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು ಇನಿಂಗ್ಸ್ನಲ್ಲಿ ಕೇವಲ 36 ರನ್ಗಳನ್ನು ಗಳಿಸಿ ಹೀನಾಯ ಸೋಲನುಭವಿಸಿತ್ತು. ಅದರ ನಂತರ ವಿರಾಟ್ ಕೊಹ್ಲಿ ‘ಪಿತೃತ್ವ ರಜೆ’ಗಾಗಿ ಸ್ವದೇಶಕ್ಕೆ ಮರಳಿದ್ದರು ಉಳಿದ ಪಂದ್ಯಗಳಲ್ಲಿ ರಹಾನೆ ತಂಡವನ್ನು ಮುನ್ನಡೆಸಿದ್ದರು.ತಂಡದಲ್ಲಿ ಹಲವು ಅನುಭವಿ ಆಟಗಾರರು ಗಾಯದ ಸಮಸ್ಯೆ ಅನುಭವಿಸಿದಾಗ, ಬೆಂಚ್ನಲ್ಲಿದ್ದ ಯುವ ಆಟಗಾರರನ್ನು ಆಡಿದ್ದರು. ತಂಡವು ಐತಿಹಾಸಿಕ ಸಾಧನೆ ಮಾಡಿತ್ತು.