ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಏಕದಿನ ತಂಡಕ್ಕೆ ಪೆರೇರ ನಾಯಕ

Last Updated 12 ಮೇ 2021, 14:08 IST
ಅಕ್ಷರ ಗಾತ್ರ

ರಾಯಿಟರ್ಸ್‌: ಕುಶಲ್ ಪೆರೇರ ಅವರನ್ನು ಶ್ರೀಲಂಕಾ ಏಕದಿನ ಕ್ರಿಕೆಟ್ ತಂಡದ ನಾಯಕನ್ನಾಗಿ ಬುಧವಾರ ನೇಮಕ ಮಾಡಲಾಗಿದೆ. ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು ಮಾಜಿ ನಾಯಕರಾದ ದಿಮುತ್ ಕರುಣರತ್ನೆ ಮತ್ತು ಏಂಜೆಲೊ ಮ್ಯಾಥ್ಯೂಸ್ ಅವರನ್ನು ಕೈಬಿಡಲಾಗಿದೆ.

ಎರಡು ವರ್ಷಗಳಲ್ಲಿ ವಿಶ್ವಕಪ್‌ ಟೂರ್ನಿ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕರುಣರತ್ನೆ ಅವರನ್ನು ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಸಲಾಗಿದೆ. ಅವರ ನೇತೃತ್ವದಲ್ಲಿ ಮಾರ್ಚ್‌ ತಿಂಗಳಲ್ಲಿ ನಡೆದ ವೆಸ್ಟ್ ಇಂಡೀಸ್ ಎದುರಿನ ಸರಣಿಯನ್ನು ಶ್ರೀಲಂಕಾ 3–0ಯಿಂದ ಗೆದ್ದುಕೊಂಡಿತ್ತು.

ಪ್ರಮೋದಯ ವಿಕ್ರಮಸಿಂಘೆ ನೇತೃತ್ವದ ಹೊಸ ಆಯ್ಕೆ ಸಮಿತಿ 18 ಆಟಗಾರರನ್ನು ಒಳಗೊಂಡ ತಂಡವನ್ನು ಆರಿಸಿದ್ದು ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಅವರನ್ನು ಕೈಬಿಡುವ ದಿಟ್ಟ ನಿರ್ಧಾರವನ್ನೂ ಕೈಗೊಂಡಿದೆ. ತಂಡವು ಈ ತಿಂಗಳಾಂತ್ಯದಲ್ಲಿ ಬಾಂಗ್ಲಾದೇಶ ಎದುರು ಮೂರು ಪಂದ್ಯಗಳ ಸರಣಿಯನ್ನು ಆಡಲಿದೆ.

ಯುವ ಆಟಗಾರರಿಗೆ ಆಯ್ಕೆ ಸಮಿತಿ ಆದ್ಯತೆ ನೀಡಿದ್ದು ಕುಶಲ್ ಮೆಂಡಿಸ್ ಅವರನ್ನು ಉಪನಾಯಕನಾಗಿ ನೇಮಕ ಮಾಡಿದೆ. ಪೆರೇರ, ಐದು ವರ್ಷಗಳಲ್ಲಿ ಏಕದಿನ ತಂಡದ ಒಂಬತ್ತನೇ ನಾಯಕ ಆಗಿದ್ದಾರೆ.

ಏಕದಿನ ತಂಡ: ಕುಶಲ್ ಪೆರೇರ (ನಾಯಕ), ಕುಶಲ್ ಮೆಂಡಿಸ್, ಧನುಷ್ಕ ಗುಣತಿಲಕ, ಧನಂಜಯ ಡಿ ಸಿಲ್ವಾ, ಪಾಥುಮ್ ನಿಸಂಕ, ದಾಸುನ್ ಶನಕ, ಆಶೆನ್ ಬಂಡಾರ, ವನಿಂದು ಹಸರಂಗ, ಇಸುರು ಉಡಾನ, ಅಖಿಲ ಧನಂಜಯ, ನಿರೋಷನ್ ಡಿಕ್ವೆಲ್ಲ, ದುಷ್ಮಂತ ಚಮೀರ, ರಮೇಶ್ ಮೆಂಡಿಸ್‌, ಅಸಿತ ಫೆರ್ನಾಂಡೊ, ಲಕ್ಷಣ್ ಸಂಡಗನ್, ಚಮಿಕ ಕರುಣರತ್ನೆ, ಬಿನುರ ಫೆರ್ನಾಂಡೊ, ಶಿರಾನ್ ಫೆರ್ನಾಂಡೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT