ಬೆಂಗಳೂರು: ದುರಾಸೆ ಎನ್ನುವುದು ಮಾನವನ ಅಂತರಾಳದಿಂದ ವ್ಯಕ್ತವಾಗುವ ಗುಣ. ಶಿಕ್ಷಣ, ಮಾರ್ಗದರ್ಶನ ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಈ ದುರಾಸೆಯ ಮುಂದೆ ಮಂಕಾಗುತ್ತವೆ. ಆದ್ದರಿಂದಲೇ ಆಟಗಾರರು ಮ್ಯಾಚ್ ಫಿಕ್ಸಿಂಗ್ನಂತಹ ಜಾಲ ಗಳಿಗೆ ಬೀಳುತ್ತಾರೆ ಎಂದು ಹಿರಿಯ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಹೇಳಿದರು.