<p><strong>ನವದೆಹಲಿ</strong>: ಶೈಕ್ಷಣಿಕವಾಗಿ ಸಾಧಿಸಲಾಗದ್ದನ್ನು ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಮೈದಾನದಲ್ಲಿ ಸಾಧಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಟಿ20 ವಿಶ್ವಕಪ್ ಗೆದ್ದುಕೊಂಡ ಸಂಭ್ರಮದಲ್ಲಿ ತೇಲಾಡುತ್ತಿರುವ ಸೂರ್ಯ, ನಾಯಕನಾಗಿ ಈ ಮಾದರಿಯಲ್ಲಿ ಶೇ 80ರಷ್ಟು ವಿಜಯದ ದಾಖಲೆ ಸಾಧಿಸಿದ್ದಾರೆ.</p>.<p>ಶೈಕ್ಷಣಿಕವಾಗಿ ಸಾಧಿಸಲಾಗದ್ದನ್ನು ಆಟದಲ್ಲಿ ಸಾಧಿಸಿದ್ದರಿಂದ ಮುಂಬೈಕರ್ ಸಂತಸದಲ್ಲಿದ್ದಾರೆ. ‘ಶಾಲಾ ಕಾಲೇಜು ಅಧ್ಯಯನ ಮಾಡುತ್ತಿದ್ದ ಸಮಯದಲ್ಲಿ ಶೇ 80 ಅಂಕ ಗಳಿಸಲಾಗುತ್ತಿರಲಿಲ್ಲ. ಇಂದು ಕ್ರಿಕೆಟ್ನಲ್ಲಿ ಸಾಧಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.</p>.<p>2024ರಲ್ಲಿ ಅವರು ಭಾರತ ಟಿ20 ತಂಡದ ನಾಯಕರಾಗಿ ನೇಮಕಗೊಂಡ ನಂತರ ಅವರು 52 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಭಾರತ 42 ಪಂದ್ಯಗಳನ್ನು ಗೆದ್ದುಕೊಂಡಿದೆ. ‘ಅಂದಿನ ದಿನಗಳಲ್ಲಿ (ಶಾಲೆ ಅಥವಾ ಕಾಲೇಜು) ನಾನು ಎಂದೂ ಶೇ 50–60ಕ್ಕಿಂತ ಮೇಲೆ ಹೋಗಲಿಲ್ಲ. ನಿಜ, ಈಗಿನ ಸಾಧನೆಯಿಂದ ಅತೀವ ಸಂಸತವಾಗಿದೆ’ ಎಂದಿದ್ದಾರೆ.</p>.<p>ಸೂರ್ಯ ಅವರ ತಂದೆ ಅಶೋಕ್ ಕುಮಾರ್ ಯಾದವ್ ಅವರು ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದಾರೆ.</p>.<p>‘ಶೈಕ್ಷಣಿಕವಾಗಿ ನಾನು ಉತ್ತಮ ಸಾಧನೆ ಮಾಡಲು ನನ್ನ ಕುಟುಂಬ ಎಲ್ಲಾ ಪ್ರಯತ್ನ ಮಾಡಿತು. ಆದರೆ ನನಗೆ ಓದಿನಲ್ಲಿ ಹೆಚ್ಚು ಆಸಕ್ತಿಯಿಲ್ಲ ಎಂಬುದುಬಸ್ವಲ್ಪ ಕಾಲದಲ್ಲೇ ಅವರಿಗೆ ಮನವರಿಕೆಯಾಯಿತು. ಈ ಹುಡುಗ ನಮ್ಮ ಕೈಗೆ (ನಿಯಂತ್ರಣಕ್ಕೆ) ಸಿಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು’ ಎಂದು ಅವರು ನೆನಪಿಸಿಕೊಂಡರು. ಆದರೆ ಕ್ರಿಕೆಟ್ನಲ್ಲಿ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಕುಟುಂಬ ಬೆನ್ನಿಗೆ ನಿಂತಿತು.</p>.<p>‘ಕ್ರೀಡೆಯಲ್ಲಿ ಅವರ ಬೆಂಬಲ ನನಗೆ ಸದಾ ಇತ್ತು. ನಾನು ಖುಷಿಯಿಂದ ತೊಡಗಲು ನೆರವಾದರು. ಹೋಗು, ಆಡು. ಅಲ್ಲಿ ಏನೂ ಆಗದಿದ್ದರೆ ಮುಂದಿನದರ ಬಗ್ಗೆ ನಾವು ನೋಡಿಕೊಳ್ಳುತ್ತೇವೆ’ ಎಂದು ಅಭಯ ನೀಡಿದ್ದನ್ನು ಅವರು ಸ್ಮರಿಸಿಕೊಂಡರು. ಆದರೆ ಚೆಂಬೂರಿನ ಹಸನ್ಮುಖಿ ಯುವಕ ಪರ್ಯಾಯಕ್ಕೆ ಆಸ್ಪದ ನೀಡಲಿಲ್ಲ.</p>.<h2>ಪತ್ನಿಯನ್ನು ಪ್ರಶಂಸಿಸಿದ ಸೂರ್ಯ</h2><p>ಪತ್ನಿ ದೇವಿಶಾ ಶೆಟ್ಟಿ ಜೊತೆಗಿನ ಸಂಭಾಷಣೆಯೊಂದನ್ನು ನೆನಪಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಅದು ತಮ್ಮ ಕ್ರಿಕೆಟ್ ಜೀವನದ ಏಳಿಗೆಗೆ ಹೇಗೆ ಪ್ರೇರಣೆಯಾಯಿತು ಎಂಬುದನ್ನೂ ಮೆಲುಕು ಹಾಕಿದ್ದಾರೆ.</p><p>‘2016ರಲ್ಲಿ ನನ್ನ ಮದುವೆಯಾಗಿತ್ತು. ನಾನು ಆಗ ಕೋಲ್ಕತ್ತ ನೈಟ್ರೈಡರ್ಸ್ಗೆ ಆಡುತ್ತಿದ್ದೆ. ಎಲ್ಲವೂ ಚೆನ್ನಾಗಿಯೇ ಸಾಗಿತ್ತು. ಬಳಿಕ ಮುಂಬೈ ಇಂಡಿಯನ್ಸ್ಗೆ ಸೇರ್ಪಡೆಯಾದೆ’ ಎಂದಿದ್ದಾರೆ.</p><p>‘ಅದು 2018ರ ಸುಮಾರು. ದೇವಿಶಾ ನನಗೆ ಕೇಳಿದಳು– ನಿಮ್ಮ ಜೊತೆ ವಯೋವರ್ಗ ಟೂರ್ನಿಗಳಲ್ಲಿ ಆಡಿದವರಲ್ಲಿ ಹೆಚ್ಚಿನವರು ಈಗ ಭಾರತ ತಂಡದಲ್ಲಿದ್ದಾರೆ. ನಿಮ್ಮ ಮನಸ್ಸಲ್ಲಿ ಏನಿದೆ?’. ಆ ಪ್ರಶ್ನೆಗೆ ‘ನನಗೂ ಭಾರತ ತಂಡಕ್ಕೆ ಆಡಬೇಕೆಂಬ ಆಸೆಯಿದೆ’ ಎಂದಿದ್ದೆ. ಅದಕ್ಕೆ ಯಾವ ರೀತಿಯ ಪ್ಲಾನ್ ಮಾಡಿದ್ದೀರಿ ಎಂದು ಕೇಳಿದ್ದಳು’ ಎಂದು ಅವರು ಅಂದಿನ ಸಂಭಾಷಣೆ ನೆನಪಿಸಿದ್ದಾರೆ. ‘ನನ್ನ ಗುರಿಯತ್ತ ಹೆಜ್ಜೆ ಮುಂದಿಡಲು ಅದು ಪ್ರೇರಣೆಯಾಯಿತು’ ಎಂದಿದ್ದಾರೆ.</p><p>‘ನಾನು ನಂತರ ಕಠಿಣ ಪರಿಶ್ರಮ ಹಾಕಿದೆ. ಐಪಿಎಲ್ನಲ್ಲಿ ಸತತ ಮೂರು ವರ್ಷ ಸಾಕಷ್ಟು ರನ್ ಗಳಿಸಿದೆ. ದೇಶಿ ಕ್ರಿಕೆಟ್ನಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಪರಿಣಾಮ 2021ರಲ್ಲಿ ಭಾರತ ತಂಡಕ್ಕೆ ಆಯ್ಕೆಯಾದೆ ಎಂದು ನೆನಪಿಸಿದ್ದಾರೆ. ‘ದೇವಿಶಾ ನನ್ನ ಸಾಧನೆಯ ಹಿಂದಿನ ಶಕ್ತಿ. ಆಕೆಯಿಂದ ಸಾಕಷ್ಟು ಜೀವನಪಾಠ ಕಲಿತೆ’ ಎಂದು ಪ್ರಶಂಸಿಸಿದ್ದಾರೆ. ದೇವಿಶಾ ಅವರ ಪೋಷಕರು ಕರ್ನಾಟಕ ಮೂಲದವರು.</p>.<p><strong>‘ಮಿಚೆಲ್ ಕ್ಷಮೆ ಕೇಳಿದ್ದೆ’</strong></p><p><strong>ನವದೆಹಲಿ:</strong> ಫೈನಲ್ ಪಂದ್ಯದ ವೇಳೆ ನ್ಯೂಜಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರತ್ತ ಅರ್ಷದೀಪ್ ಸಿಂಗ್ ಚೆಂಡನ್ನು ಜೋರಾಗಿ ಎಸೆದಿದ್ದಕ್ಕೆ ಅವರ ಬಳಿ ಕ್ಷಮೆ ಕೇಳಿದ್ದೆ ಎಂದು ಸೂರ್ಯ ತಿಳಿಸಿದ್ದಾರೆ. ಒಳ್ಳೆಯ ನಾಯಕತ್ವಕ್ಕೆ ಮಾದರಿಯಾಗುವ ಉದ್ದೇಶದಿಂದ ಹಾಗೆ ಮಾಡಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಶೈಕ್ಷಣಿಕವಾಗಿ ಸಾಧಿಸಲಾಗದ್ದನ್ನು ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಮೈದಾನದಲ್ಲಿ ಸಾಧಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಟಿ20 ವಿಶ್ವಕಪ್ ಗೆದ್ದುಕೊಂಡ ಸಂಭ್ರಮದಲ್ಲಿ ತೇಲಾಡುತ್ತಿರುವ ಸೂರ್ಯ, ನಾಯಕನಾಗಿ ಈ ಮಾದರಿಯಲ್ಲಿ ಶೇ 80ರಷ್ಟು ವಿಜಯದ ದಾಖಲೆ ಸಾಧಿಸಿದ್ದಾರೆ.</p>.<p>ಶೈಕ್ಷಣಿಕವಾಗಿ ಸಾಧಿಸಲಾಗದ್ದನ್ನು ಆಟದಲ್ಲಿ ಸಾಧಿಸಿದ್ದರಿಂದ ಮುಂಬೈಕರ್ ಸಂತಸದಲ್ಲಿದ್ದಾರೆ. ‘ಶಾಲಾ ಕಾಲೇಜು ಅಧ್ಯಯನ ಮಾಡುತ್ತಿದ್ದ ಸಮಯದಲ್ಲಿ ಶೇ 80 ಅಂಕ ಗಳಿಸಲಾಗುತ್ತಿರಲಿಲ್ಲ. ಇಂದು ಕ್ರಿಕೆಟ್ನಲ್ಲಿ ಸಾಧಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.</p>.<p>2024ರಲ್ಲಿ ಅವರು ಭಾರತ ಟಿ20 ತಂಡದ ನಾಯಕರಾಗಿ ನೇಮಕಗೊಂಡ ನಂತರ ಅವರು 52 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಭಾರತ 42 ಪಂದ್ಯಗಳನ್ನು ಗೆದ್ದುಕೊಂಡಿದೆ. ‘ಅಂದಿನ ದಿನಗಳಲ್ಲಿ (ಶಾಲೆ ಅಥವಾ ಕಾಲೇಜು) ನಾನು ಎಂದೂ ಶೇ 50–60ಕ್ಕಿಂತ ಮೇಲೆ ಹೋಗಲಿಲ್ಲ. ನಿಜ, ಈಗಿನ ಸಾಧನೆಯಿಂದ ಅತೀವ ಸಂಸತವಾಗಿದೆ’ ಎಂದಿದ್ದಾರೆ.</p>.<p>ಸೂರ್ಯ ಅವರ ತಂದೆ ಅಶೋಕ್ ಕುಮಾರ್ ಯಾದವ್ ಅವರು ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದಾರೆ.</p>.<p>‘ಶೈಕ್ಷಣಿಕವಾಗಿ ನಾನು ಉತ್ತಮ ಸಾಧನೆ ಮಾಡಲು ನನ್ನ ಕುಟುಂಬ ಎಲ್ಲಾ ಪ್ರಯತ್ನ ಮಾಡಿತು. ಆದರೆ ನನಗೆ ಓದಿನಲ್ಲಿ ಹೆಚ್ಚು ಆಸಕ್ತಿಯಿಲ್ಲ ಎಂಬುದುಬಸ್ವಲ್ಪ ಕಾಲದಲ್ಲೇ ಅವರಿಗೆ ಮನವರಿಕೆಯಾಯಿತು. ಈ ಹುಡುಗ ನಮ್ಮ ಕೈಗೆ (ನಿಯಂತ್ರಣಕ್ಕೆ) ಸಿಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದರು’ ಎಂದು ಅವರು ನೆನಪಿಸಿಕೊಂಡರು. ಆದರೆ ಕ್ರಿಕೆಟ್ನಲ್ಲಿ ಮಹತ್ವಾಕಾಂಕ್ಷೆಗಳನ್ನು ಈಡೇರಿಸಲು ಕುಟುಂಬ ಬೆನ್ನಿಗೆ ನಿಂತಿತು.</p>.<p>‘ಕ್ರೀಡೆಯಲ್ಲಿ ಅವರ ಬೆಂಬಲ ನನಗೆ ಸದಾ ಇತ್ತು. ನಾನು ಖುಷಿಯಿಂದ ತೊಡಗಲು ನೆರವಾದರು. ಹೋಗು, ಆಡು. ಅಲ್ಲಿ ಏನೂ ಆಗದಿದ್ದರೆ ಮುಂದಿನದರ ಬಗ್ಗೆ ನಾವು ನೋಡಿಕೊಳ್ಳುತ್ತೇವೆ’ ಎಂದು ಅಭಯ ನೀಡಿದ್ದನ್ನು ಅವರು ಸ್ಮರಿಸಿಕೊಂಡರು. ಆದರೆ ಚೆಂಬೂರಿನ ಹಸನ್ಮುಖಿ ಯುವಕ ಪರ್ಯಾಯಕ್ಕೆ ಆಸ್ಪದ ನೀಡಲಿಲ್ಲ.</p>.<h2>ಪತ್ನಿಯನ್ನು ಪ್ರಶಂಸಿಸಿದ ಸೂರ್ಯ</h2><p>ಪತ್ನಿ ದೇವಿಶಾ ಶೆಟ್ಟಿ ಜೊತೆಗಿನ ಸಂಭಾಷಣೆಯೊಂದನ್ನು ನೆನಪಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಅದು ತಮ್ಮ ಕ್ರಿಕೆಟ್ ಜೀವನದ ಏಳಿಗೆಗೆ ಹೇಗೆ ಪ್ರೇರಣೆಯಾಯಿತು ಎಂಬುದನ್ನೂ ಮೆಲುಕು ಹಾಕಿದ್ದಾರೆ.</p><p>‘2016ರಲ್ಲಿ ನನ್ನ ಮದುವೆಯಾಗಿತ್ತು. ನಾನು ಆಗ ಕೋಲ್ಕತ್ತ ನೈಟ್ರೈಡರ್ಸ್ಗೆ ಆಡುತ್ತಿದ್ದೆ. ಎಲ್ಲವೂ ಚೆನ್ನಾಗಿಯೇ ಸಾಗಿತ್ತು. ಬಳಿಕ ಮುಂಬೈ ಇಂಡಿಯನ್ಸ್ಗೆ ಸೇರ್ಪಡೆಯಾದೆ’ ಎಂದಿದ್ದಾರೆ.</p><p>‘ಅದು 2018ರ ಸುಮಾರು. ದೇವಿಶಾ ನನಗೆ ಕೇಳಿದಳು– ನಿಮ್ಮ ಜೊತೆ ವಯೋವರ್ಗ ಟೂರ್ನಿಗಳಲ್ಲಿ ಆಡಿದವರಲ್ಲಿ ಹೆಚ್ಚಿನವರು ಈಗ ಭಾರತ ತಂಡದಲ್ಲಿದ್ದಾರೆ. ನಿಮ್ಮ ಮನಸ್ಸಲ್ಲಿ ಏನಿದೆ?’. ಆ ಪ್ರಶ್ನೆಗೆ ‘ನನಗೂ ಭಾರತ ತಂಡಕ್ಕೆ ಆಡಬೇಕೆಂಬ ಆಸೆಯಿದೆ’ ಎಂದಿದ್ದೆ. ಅದಕ್ಕೆ ಯಾವ ರೀತಿಯ ಪ್ಲಾನ್ ಮಾಡಿದ್ದೀರಿ ಎಂದು ಕೇಳಿದ್ದಳು’ ಎಂದು ಅವರು ಅಂದಿನ ಸಂಭಾಷಣೆ ನೆನಪಿಸಿದ್ದಾರೆ. ‘ನನ್ನ ಗುರಿಯತ್ತ ಹೆಜ್ಜೆ ಮುಂದಿಡಲು ಅದು ಪ್ರೇರಣೆಯಾಯಿತು’ ಎಂದಿದ್ದಾರೆ.</p><p>‘ನಾನು ನಂತರ ಕಠಿಣ ಪರಿಶ್ರಮ ಹಾಕಿದೆ. ಐಪಿಎಲ್ನಲ್ಲಿ ಸತತ ಮೂರು ವರ್ಷ ಸಾಕಷ್ಟು ರನ್ ಗಳಿಸಿದೆ. ದೇಶಿ ಕ್ರಿಕೆಟ್ನಲ್ಲೂ ಉತ್ತಮ ಪ್ರದರ್ಶನ ನೀಡಿದೆ. ಪರಿಣಾಮ 2021ರಲ್ಲಿ ಭಾರತ ತಂಡಕ್ಕೆ ಆಯ್ಕೆಯಾದೆ ಎಂದು ನೆನಪಿಸಿದ್ದಾರೆ. ‘ದೇವಿಶಾ ನನ್ನ ಸಾಧನೆಯ ಹಿಂದಿನ ಶಕ್ತಿ. ಆಕೆಯಿಂದ ಸಾಕಷ್ಟು ಜೀವನಪಾಠ ಕಲಿತೆ’ ಎಂದು ಪ್ರಶಂಸಿಸಿದ್ದಾರೆ. ದೇವಿಶಾ ಅವರ ಪೋಷಕರು ಕರ್ನಾಟಕ ಮೂಲದವರು.</p>.<p><strong>‘ಮಿಚೆಲ್ ಕ್ಷಮೆ ಕೇಳಿದ್ದೆ’</strong></p><p><strong>ನವದೆಹಲಿ:</strong> ಫೈನಲ್ ಪಂದ್ಯದ ವೇಳೆ ನ್ಯೂಜಿಲೆಂಡ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಅವರತ್ತ ಅರ್ಷದೀಪ್ ಸಿಂಗ್ ಚೆಂಡನ್ನು ಜೋರಾಗಿ ಎಸೆದಿದ್ದಕ್ಕೆ ಅವರ ಬಳಿ ಕ್ಷಮೆ ಕೇಳಿದ್ದೆ ಎಂದು ಸೂರ್ಯ ತಿಳಿಸಿದ್ದಾರೆ. ಒಳ್ಳೆಯ ನಾಯಕತ್ವಕ್ಕೆ ಮಾದರಿಯಾಗುವ ಉದ್ದೇಶದಿಂದ ಹಾಗೆ ಮಾಡಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>