<p><strong>ನವದೆಹಲಿ:</strong> ಭಾರತದ ಟಿ–20 ನಾಯಕನಾಗಿ ಸೂರ್ಯಕುಮಾರ್ ಯಾದವ್ ಅವರ ಭವಿಷ್ಯವನ್ನು ಪ್ರಮುಖವಾಗಿ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ನಿರ್ಧರಿಸಲಿದ್ದಾರೆ ಬಿಸಿಸಿಐನ ಮೂಲವೊಂದು ತಿಳಿಸಿದೆ.</p>.Video: ಅಯ್ಯರ್ ಹಿಡಿದ ಕ್ಯಾಚ್ ನೋಡಿ ನಿಬ್ಬೆರಗಾದ ರೋಹಿತ್, ಸೂರ್ಯಕುಮಾರ್.<p>ಆದರೆ ಆಯ್ಕೆ ಸಮಿತಿಯು ಅವರ ಜಾಗಕ್ಕೆ ಬೇರೆಯವರನ್ನು ನೇಮಿಸಲು ಉತ್ಸುಕವಾಗಿದೆ ಎಂದು ಗೊತ್ತಾಗಿದೆ. ಗಂಭೀರ್ ಹಾಗೂ ಸೂರ್ಯಕುಮಾರ್ ನಡುವೆ ಉತ್ತಮ ಬಾಂಧವ್ಯವಿದ್ದು, ಸೂರ್ಯಕುಮಾರ್ ಅವರ ಭವಿಷ್ಯ ಗಂಭೀರ್ ಅವರ ಕೈಯಲ್ಲಿದೆ ಎಂದು ಮೂಲಗಳು ಹೇಳಿವೆ.</p><p>ತಂಡದಿಂದಲೂ ಸೂರ್ಯಕುಮಾರ್ ಅವರನ್ನು ಕೈಬಿಡಬೇಕು ಎಂದು ಐದೂ ಜನ ಆಯ್ಕೆಗಾರರು ಬಯಸಿದ್ದಾರೆ ಎಂದು ತಿಳಿದು ಬಂದಿದೆ. ಭಾರತದ ಕ್ರಿಕೆಟ್ ಭವಿಷ್ಯದ ದೃಷ್ಟಿಯಿಂದ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.</p><p>ಸೂರ್ಯಕುಮಾರ್ ಈ ವರ್ಷದ ಐಪಿಎಲ್ನಲ್ಲಿ 12 ಇನ್ನಿಂಗ್ಸ್ಗಳಿಂದ 148ರ ಸ್ಟ್ರೈಕ್ ರೇಟ್ನಲ್ಲಿ ಕೇವಲ 210 ರನ್ ಗಳಷ್ಟೇ ಗಳಿಸಿದ್ದಾರೆ. </p><p>‘ಯಾರಾದರೂ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಗಳಿಸಲು ಸಾಧ್ಯವಾಗದಿದ್ದರೆ, ಅವರು ನಾಯಕರಾಗಲು ಹೇಗೆ ಸಾಧ್ಯ? ಆದ್ದರಿಂದ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಕಷ್ಟ, ಆದರೆ ಈ ವಿಷಯದಲ್ಲಿ ಅಜಿತ್ ಅಗರ್ಕರ್ ಮತ್ತು ಗೌತಮ್ ಗಂಭೀರ್ ಸಮಾನ ಅಭಿಪ್ರಾಯ ಹೊಂದಬೇಕಾಗುತ್ತದೆ’ ಎಂದು ತಿಳಿಸಿವೆ.</p> .T20 World Cup| ನಮ್ಮ ಸೋಲಿಗೆ ಆ ವಿಭಾಗದ ವೈಫಲ್ಯವೇ ಕಾರಣ: ನಾಯಕ ಸೂರ್ಯಕುಮಾರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಭಾರತದ ಟಿ–20 ನಾಯಕನಾಗಿ ಸೂರ್ಯಕುಮಾರ್ ಯಾದವ್ ಅವರ ಭವಿಷ್ಯವನ್ನು ಪ್ರಮುಖವಾಗಿ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ನಿರ್ಧರಿಸಲಿದ್ದಾರೆ ಬಿಸಿಸಿಐನ ಮೂಲವೊಂದು ತಿಳಿಸಿದೆ.</p>.Video: ಅಯ್ಯರ್ ಹಿಡಿದ ಕ್ಯಾಚ್ ನೋಡಿ ನಿಬ್ಬೆರಗಾದ ರೋಹಿತ್, ಸೂರ್ಯಕುಮಾರ್.<p>ಆದರೆ ಆಯ್ಕೆ ಸಮಿತಿಯು ಅವರ ಜಾಗಕ್ಕೆ ಬೇರೆಯವರನ್ನು ನೇಮಿಸಲು ಉತ್ಸುಕವಾಗಿದೆ ಎಂದು ಗೊತ್ತಾಗಿದೆ. ಗಂಭೀರ್ ಹಾಗೂ ಸೂರ್ಯಕುಮಾರ್ ನಡುವೆ ಉತ್ತಮ ಬಾಂಧವ್ಯವಿದ್ದು, ಸೂರ್ಯಕುಮಾರ್ ಅವರ ಭವಿಷ್ಯ ಗಂಭೀರ್ ಅವರ ಕೈಯಲ್ಲಿದೆ ಎಂದು ಮೂಲಗಳು ಹೇಳಿವೆ.</p><p>ತಂಡದಿಂದಲೂ ಸೂರ್ಯಕುಮಾರ್ ಅವರನ್ನು ಕೈಬಿಡಬೇಕು ಎಂದು ಐದೂ ಜನ ಆಯ್ಕೆಗಾರರು ಬಯಸಿದ್ದಾರೆ ಎಂದು ತಿಳಿದು ಬಂದಿದೆ. ಭಾರತದ ಕ್ರಿಕೆಟ್ ಭವಿಷ್ಯದ ದೃಷ್ಟಿಯಿಂದ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.</p><p>ಸೂರ್ಯಕುಮಾರ್ ಈ ವರ್ಷದ ಐಪಿಎಲ್ನಲ್ಲಿ 12 ಇನ್ನಿಂಗ್ಸ್ಗಳಿಂದ 148ರ ಸ್ಟ್ರೈಕ್ ರೇಟ್ನಲ್ಲಿ ಕೇವಲ 210 ರನ್ ಗಳಷ್ಟೇ ಗಳಿಸಿದ್ದಾರೆ. </p><p>‘ಯಾರಾದರೂ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಗಳಿಸಲು ಸಾಧ್ಯವಾಗದಿದ್ದರೆ, ಅವರು ನಾಯಕರಾಗಲು ಹೇಗೆ ಸಾಧ್ಯ? ಆದ್ದರಿಂದ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಕಷ್ಟ, ಆದರೆ ಈ ವಿಷಯದಲ್ಲಿ ಅಜಿತ್ ಅಗರ್ಕರ್ ಮತ್ತು ಗೌತಮ್ ಗಂಭೀರ್ ಸಮಾನ ಅಭಿಪ್ರಾಯ ಹೊಂದಬೇಕಾಗುತ್ತದೆ’ ಎಂದು ತಿಳಿಸಿವೆ.</p> .T20 World Cup| ನಮ್ಮ ಸೋಲಿಗೆ ಆ ವಿಭಾಗದ ವೈಫಲ್ಯವೇ ಕಾರಣ: ನಾಯಕ ಸೂರ್ಯಕುಮಾರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>