<p><strong>ಢಾಕಾ</strong>: ಬಾಂಗ್ಲಾದೇಶ ಕ್ರಿಕೆಟ್ನ ಘನತೆಯನ್ನು ಪುನಃಸ್ಥಾಪಿಸುವುದಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತಾತ್ಕಾಲಿಕ ಸಮಿತಿ ಮುಖ್ಯಸ್ಥ ತಮಿಮ್ ಇಕ್ಬಾಲ್ ಹೇಳಿದ್ದಾರೆ.</p><p>ರಾಷ್ಟ್ರೀಯ ಕ್ರೀಡಾ ಮಂಡಳಿಯು (ಎನ್ಎಸ್ಸಿ), ಬಿಸಿಬಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ, ಮಾಜಿ ಕ್ರಿಕೆಟಿಗ ತಮೀಮ್ ಇಕ್ಬಾಲ್ ನೇತೃತ್ವದಲ್ಲಿ 11 ಸದಸ್ಯರ ತಾತ್ಕಾಲಿಕ ಸಮಿತಿಯನ್ನು ನೇಮಿಸಿದೆ.</p><p>ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ 2024ರಲ್ಲಿ ಪತನಗೊಂಡ ನಂತರ, ರಾಜಕೀಯ ಹಾಗೂ ಕ್ರಿಕೆಟ್ ಒಂದಕ್ಕೊಂದು ಹೆಣೆದುಕೊಂಡಿವೆ.</p><p>ಬಾಂಗ್ಲಾದೇಶದಲ್ಲಿ ಫೆಬ್ರುವರಿಯಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಬಿಸಿಬಿಗೆ 2025ರಲ್ಲಿ ನಡೆದ ಚುನಾವಣೆಯಲ್ಲಿ ಭಾರಿ ಅಕ್ರಮಗಳು ನಡೆದಿರುವುದು ವರದಿಯಾದ ಹಿನ್ನೆಲೆಯಲ್ಲಿ ಮಂಡಳಿಯನ್ನು ವಿಸರ್ಜಿಸಲಾಗಿದೆ ಎಂದು ಎನ್ಎಸ್ಸಿ ತಿಳಿಸಿದೆ.</p><p>37 ವರ್ಷದ ತಮಿಮ್ ನೇತೃತ್ವದ ತಾತ್ಕಾಲಿಕ ಸಮಿತಿಯಲ್ಲಿ ಅಥರ್ ಅಲಿ ಖಾನ್, ರಶ್ನಾ ಇಮಾಮ್, ಮಿರ್ಜಾ ಯಾಸಿರ್ ಅಬ್ಬಾಸ್, ಸೈಯದ್ ಇಬ್ರಾಹಿಂ ಅಹ್ಮದ್, ಮಿನ್ಹಾಜುಲ್ ಅಬೇದಿನ್ ನನ್ನು, ಇಶ್ರಾಫಿಲ್ ಖುಸ್ರೂ, ತಂಝಿಮ್ ಚೌಧರಿ, ಸಲ್ಮಾನ್ ಇಸ್ಪಾಹಾನಿ ಮತ್ತು ರಫೀಕುಲ್ಹಾ ಇಸ್ಲಾಂ ಇದ್ದಾರೆ.</p><p>ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು15,000ಕ್ಕೂ ಹೆಚ್ಚು ರನ್ ಗಳಿಸಿರುವ ತಮಿಮ್, ಮೂರೂ ಮಾದರಿಯಲ್ಲಿ ಬಾಂಗ್ಲಾ ಪರ ಶತಕ ಸಿಡಿಸಿದ ಏಕೈಕ ಆಟಗಾರ ಎನಿಸಿದ್ದಾರೆ. </p><p>ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಬಾಂಗ್ಲಾದೇಶ ಕ್ರಿಕೆಟ್ ಕಳೆದುಕೊಂಡಿರುವ ಘನತೆಯನ್ನು ಪುನಃಸ್ಥಾಪಿಸುವುದೇ ನಮ್ಮ ಮೊದಲ ಕರ್ತವ್ಯ. ಕಳೆದ 18 ತಿಂಗಳಲ್ಲಿ ಆಗಿರುವ ನಷ್ಟವನ್ನು ಸರಿಪಡಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ' ಎಂದು ಹೇಳಿದ್ದಾರೆ.</p><p><strong>ಟಿ20 ವಿಶ್ವಕಪ್ ಆಡಲು ನಿರಾಕರಣೆ<br></strong>ಭಾರತ ಹಾಗೂ ಬಾಂಗ್ಲಾದೇಶ ನಡುವಣ ರಾಜತಾಂತ್ರಿಕ ಸಂಬಂಧ ಹಳಸಿದ ಕಾರಣ, ಬಾಂಗ್ಲಾದ ಪ್ರಮುಖ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರಿಗೆ ಐಪಿಎಲ್ ಆಡುವ ಅವಕಾಶವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರಾಕರಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಬಿ, ಭಾರತದಲ್ಲಿ ವಿಶ್ವಕಪ್ ಆಡಲು ನಿರಾಕರಿಸಿತ್ತು.</p><p>ತನ್ನ ಪಾಲಿನ ಪಂದ್ಯಗಳನ್ನು ಬಾಂಗ್ಲಾದೇಶಕ್ಕೆ ಸ್ಥಳಾಂತರಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿತ್ತು. ಆದರೆ, ಬಾಂಗ್ಲಾ ಮನವಿಯನ್ನು ಐಸಿಸಿ ಮಾನ್ಯ ಮಾಡಿರಲಿಲ್ಲ. ಹೀಗಾಗಿ, ಬಾಂಗ್ಲಾ ಪಡೆ, ವಿಶ್ವಕಪ್ನಿಂದಲೇ ಹೊರಗುಳಿದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಢಾಕಾ</strong>: ಬಾಂಗ್ಲಾದೇಶ ಕ್ರಿಕೆಟ್ನ ಘನತೆಯನ್ನು ಪುನಃಸ್ಥಾಪಿಸುವುದಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ತಾತ್ಕಾಲಿಕ ಸಮಿತಿ ಮುಖ್ಯಸ್ಥ ತಮಿಮ್ ಇಕ್ಬಾಲ್ ಹೇಳಿದ್ದಾರೆ.</p><p>ರಾಷ್ಟ್ರೀಯ ಕ್ರೀಡಾ ಮಂಡಳಿಯು (ಎನ್ಎಸ್ಸಿ), ಬಿಸಿಬಿ ಆಡಳಿತ ಮಂಡಳಿಯನ್ನು ವಿಸರ್ಜಿಸಿ, ಮಾಜಿ ಕ್ರಿಕೆಟಿಗ ತಮೀಮ್ ಇಕ್ಬಾಲ್ ನೇತೃತ್ವದಲ್ಲಿ 11 ಸದಸ್ಯರ ತಾತ್ಕಾಲಿಕ ಸಮಿತಿಯನ್ನು ನೇಮಿಸಿದೆ.</p><p>ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ 2024ರಲ್ಲಿ ಪತನಗೊಂಡ ನಂತರ, ರಾಜಕೀಯ ಹಾಗೂ ಕ್ರಿಕೆಟ್ ಒಂದಕ್ಕೊಂದು ಹೆಣೆದುಕೊಂಡಿವೆ.</p><p>ಬಾಂಗ್ಲಾದೇಶದಲ್ಲಿ ಫೆಬ್ರುವರಿಯಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಬಿಸಿಬಿಗೆ 2025ರಲ್ಲಿ ನಡೆದ ಚುನಾವಣೆಯಲ್ಲಿ ಭಾರಿ ಅಕ್ರಮಗಳು ನಡೆದಿರುವುದು ವರದಿಯಾದ ಹಿನ್ನೆಲೆಯಲ್ಲಿ ಮಂಡಳಿಯನ್ನು ವಿಸರ್ಜಿಸಲಾಗಿದೆ ಎಂದು ಎನ್ಎಸ್ಸಿ ತಿಳಿಸಿದೆ.</p><p>37 ವರ್ಷದ ತಮಿಮ್ ನೇತೃತ್ವದ ತಾತ್ಕಾಲಿಕ ಸಮಿತಿಯಲ್ಲಿ ಅಥರ್ ಅಲಿ ಖಾನ್, ರಶ್ನಾ ಇಮಾಮ್, ಮಿರ್ಜಾ ಯಾಸಿರ್ ಅಬ್ಬಾಸ್, ಸೈಯದ್ ಇಬ್ರಾಹಿಂ ಅಹ್ಮದ್, ಮಿನ್ಹಾಜುಲ್ ಅಬೇದಿನ್ ನನ್ನು, ಇಶ್ರಾಫಿಲ್ ಖುಸ್ರೂ, ತಂಝಿಮ್ ಚೌಧರಿ, ಸಲ್ಮಾನ್ ಇಸ್ಪಾಹಾನಿ ಮತ್ತು ರಫೀಕುಲ್ಹಾ ಇಸ್ಲಾಂ ಇದ್ದಾರೆ.</p><p>ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು15,000ಕ್ಕೂ ಹೆಚ್ಚು ರನ್ ಗಳಿಸಿರುವ ತಮಿಮ್, ಮೂರೂ ಮಾದರಿಯಲ್ಲಿ ಬಾಂಗ್ಲಾ ಪರ ಶತಕ ಸಿಡಿಸಿದ ಏಕೈಕ ಆಟಗಾರ ಎನಿಸಿದ್ದಾರೆ. </p><p>ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಬಾಂಗ್ಲಾದೇಶ ಕ್ರಿಕೆಟ್ ಕಳೆದುಕೊಂಡಿರುವ ಘನತೆಯನ್ನು ಪುನಃಸ್ಥಾಪಿಸುವುದೇ ನಮ್ಮ ಮೊದಲ ಕರ್ತವ್ಯ. ಕಳೆದ 18 ತಿಂಗಳಲ್ಲಿ ಆಗಿರುವ ನಷ್ಟವನ್ನು ಸರಿಪಡಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ' ಎಂದು ಹೇಳಿದ್ದಾರೆ.</p><p><strong>ಟಿ20 ವಿಶ್ವಕಪ್ ಆಡಲು ನಿರಾಕರಣೆ<br></strong>ಭಾರತ ಹಾಗೂ ಬಾಂಗ್ಲಾದೇಶ ನಡುವಣ ರಾಜತಾಂತ್ರಿಕ ಸಂಬಂಧ ಹಳಸಿದ ಕಾರಣ, ಬಾಂಗ್ಲಾದ ಪ್ರಮುಖ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರಿಗೆ ಐಪಿಎಲ್ ಆಡುವ ಅವಕಾಶವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರಾಕರಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಸಿಬಿ, ಭಾರತದಲ್ಲಿ ವಿಶ್ವಕಪ್ ಆಡಲು ನಿರಾಕರಿಸಿತ್ತು.</p><p>ತನ್ನ ಪಾಲಿನ ಪಂದ್ಯಗಳನ್ನು ಬಾಂಗ್ಲಾದೇಶಕ್ಕೆ ಸ್ಥಳಾಂತರಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿತ್ತು. ಆದರೆ, ಬಾಂಗ್ಲಾ ಮನವಿಯನ್ನು ಐಸಿಸಿ ಮಾನ್ಯ ಮಾಡಿರಲಿಲ್ಲ. ಹೀಗಾಗಿ, ಬಾಂಗ್ಲಾ ಪಡೆ, ವಿಶ್ವಕಪ್ನಿಂದಲೇ ಹೊರಗುಳಿದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>