<p><strong>ಬೆಂಗಳೂರು</strong>: ಐಪಿಎಲ್ ಟಿಕೆಟ್ಗಾಗಿ ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ಬರೋಬ್ಬರಿ ₹ 1.46 ಲಕ್ಷ ಕಳೆದುಕೊಂಡಿರುವ ಪ್ರಕರಣ ವರದಿಯಾಗಿದೆ.</p><p>ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು (ಭಾನುವಾರ, ಏಪ್ರಿಲ್ 5) ರಾತ್ರಿ ನಡೆಯಲಿದೆ.</p><p>ಪಂದ್ಯದ ಟಿಕೆಟ್ಗಾಗಿ ಪ್ರಯತ್ನಿಸಿದ್ದ ಬಿ. ನಾರಾಯಣಪುರದ ನಿವಾಸಿ, ವಂಚನೆಗೊಳಗಾಗಿರುವ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p><p>ವಂಚಕ ತಾನು ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರ್ ಮೇಲ್ವಿಚಾರಕ ಸುಮಿತ್ ಬಿಸ್ವಾಲ್ ಎಂದು ಇನ್ಸ್ಟಾಗ್ರಾಂ ಮೂಲಕ ಪರಿಚಯಿಸಿಕೊಂಡಿದ್ದ. ಐಪಿಎಲ್ ಟಿಕೆಟ್ಗಳು ಹಾಗೂ ಆಹಾರದ ಕೂಪನ್ಗಳನ್ನೂ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p><p>ಹಾಗೆಯೇ, ಬೇರೆ ಬೇರೆ ಯುಪಿಐ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡುವಂತೆ ಸೂಚಿಸಿದ್ದ. ಅದರಂತೆ, ತಮ್ಮ ತಾಯಿಯ ಖಾತೆಯಿಂದಲೂ ಹಣ ಹಾಕಿದ್ದಾಗಿ ಸಂತ್ರಸ್ತ ತಿಳಿಸಿದ್ದಾರೆ.</p>.ಐಪಿಎಲ್ ಮ್ಯಾಚ್ ಟಿಕೆಟ್ಗಳಿಗಾಗಿ ‘ವಿಐಪಿ‘ ಎಂಎಲ್ಎಗಳ ಹಿಂಬಾಲಕರ ಕ್ಯೂ!.<p>'ನನ್ನ ವಿಶ್ವಾಸವನ್ನು ಗಳಿಸುವ ಸಲುವಾಗಿ ಇಮೇಲ್ ಮೂಲಕ ದೃಢೀಕರಣದಂತಹ ನಕಲಿ ತಂತ್ರವನ್ನೂ ಬಳಸಿದ್ದ ವಂಚಕ, ಕ್ರೀಡಾಂಗಣದ ಗೇಟ್ ನಂ.10ರ ಬಳಿಗೆ ಬರುವಂತೆ ಸುಳ್ಳು ಹೇಳಿದ್ದ' ಎಂದು ಹೇಳಿಕೊಂಡಿದ್ದಾರೆ.</p><p>'ಆರಂಭದಲ್ಲಿ ₹ 3,700 ದರದ ಟಿಕೆಟ್ಗಳನ್ನು ಖರೀದಿಸಲು ಮುಂದಾಗಿದ್ದೆ. ಆದರೆ, ಭದ್ರತಾ ಠೇವಣಿ, ಹೆಚ್ಚುವರಿ ಗುರುತಿನ ಚೀಟಿ, ಆಹಾರದ ಕೂಪನ್ಗಳಿಗಾಗಿ ಹೆಚ್ಚಿನ ಹಣ ಪಾವತಿಸುವಂತೆ ಹೇಳಿದ್ದ. ಅವನ ಮಾತನನ್ನು ನಂಬಿ ಹಲವು ಬಾರಿ ಪಾವತಿ ಮಾಡಿದ್ದೆ' ಎಂದಿದ್ದಾರೆ.</p><p>₹ 1.46 ಲಕ್ಷ ಪಾವತಿಸಿದರೂ, ಟಿಕೆಟ್ಗಳು ಸಿಗಲಿಲ್ಲ. ಈಗ ಹಣವೂ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.</p>.RCB vs CSK: ಜಯದ ಓಟದತ್ತ ಬೆಂಗಳೂರು ನೋಟ!.RCB ಪರ ಐವರು ವಿದೇಶಿಗರು ಕಣಕ್ಕೆ: ಕೊಹ್ಲಿಗೆ ಎದುರಾಯಿತು ಅಚ್ಚರಿಯ ಪ್ರಶ್ನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಐಪಿಎಲ್ ಟಿಕೆಟ್ಗಾಗಿ ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ಬರೋಬ್ಬರಿ ₹ 1.46 ಲಕ್ಷ ಕಳೆದುಕೊಂಡಿರುವ ಪ್ರಕರಣ ವರದಿಯಾಗಿದೆ.</p><p>ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು (ಭಾನುವಾರ, ಏಪ್ರಿಲ್ 5) ರಾತ್ರಿ ನಡೆಯಲಿದೆ.</p><p>ಪಂದ್ಯದ ಟಿಕೆಟ್ಗಾಗಿ ಪ್ರಯತ್ನಿಸಿದ್ದ ಬಿ. ನಾರಾಯಣಪುರದ ನಿವಾಸಿ, ವಂಚನೆಗೊಳಗಾಗಿರುವ ಬಗ್ಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p><p>ವಂಚಕ ತಾನು ಚಿನ್ನಸ್ವಾಮಿ ಕ್ರೀಡಾಂಗಣದ ಟಿಕೆಟ್ ಕೌಂಟರ್ ಮೇಲ್ವಿಚಾರಕ ಸುಮಿತ್ ಬಿಸ್ವಾಲ್ ಎಂದು ಇನ್ಸ್ಟಾಗ್ರಾಂ ಮೂಲಕ ಪರಿಚಯಿಸಿಕೊಂಡಿದ್ದ. ಐಪಿಎಲ್ ಟಿಕೆಟ್ಗಳು ಹಾಗೂ ಆಹಾರದ ಕೂಪನ್ಗಳನ್ನೂ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.</p><p>ಹಾಗೆಯೇ, ಬೇರೆ ಬೇರೆ ಯುಪಿಐ ಖಾತೆಗಳ ಮೂಲಕ ಹಣ ವರ್ಗಾವಣೆ ಮಾಡುವಂತೆ ಸೂಚಿಸಿದ್ದ. ಅದರಂತೆ, ತಮ್ಮ ತಾಯಿಯ ಖಾತೆಯಿಂದಲೂ ಹಣ ಹಾಕಿದ್ದಾಗಿ ಸಂತ್ರಸ್ತ ತಿಳಿಸಿದ್ದಾರೆ.</p>.ಐಪಿಎಲ್ ಮ್ಯಾಚ್ ಟಿಕೆಟ್ಗಳಿಗಾಗಿ ‘ವಿಐಪಿ‘ ಎಂಎಲ್ಎಗಳ ಹಿಂಬಾಲಕರ ಕ್ಯೂ!.<p>'ನನ್ನ ವಿಶ್ವಾಸವನ್ನು ಗಳಿಸುವ ಸಲುವಾಗಿ ಇಮೇಲ್ ಮೂಲಕ ದೃಢೀಕರಣದಂತಹ ನಕಲಿ ತಂತ್ರವನ್ನೂ ಬಳಸಿದ್ದ ವಂಚಕ, ಕ್ರೀಡಾಂಗಣದ ಗೇಟ್ ನಂ.10ರ ಬಳಿಗೆ ಬರುವಂತೆ ಸುಳ್ಳು ಹೇಳಿದ್ದ' ಎಂದು ಹೇಳಿಕೊಂಡಿದ್ದಾರೆ.</p><p>'ಆರಂಭದಲ್ಲಿ ₹ 3,700 ದರದ ಟಿಕೆಟ್ಗಳನ್ನು ಖರೀದಿಸಲು ಮುಂದಾಗಿದ್ದೆ. ಆದರೆ, ಭದ್ರತಾ ಠೇವಣಿ, ಹೆಚ್ಚುವರಿ ಗುರುತಿನ ಚೀಟಿ, ಆಹಾರದ ಕೂಪನ್ಗಳಿಗಾಗಿ ಹೆಚ್ಚಿನ ಹಣ ಪಾವತಿಸುವಂತೆ ಹೇಳಿದ್ದ. ಅವನ ಮಾತನನ್ನು ನಂಬಿ ಹಲವು ಬಾರಿ ಪಾವತಿ ಮಾಡಿದ್ದೆ' ಎಂದಿದ್ದಾರೆ.</p><p>₹ 1.46 ಲಕ್ಷ ಪಾವತಿಸಿದರೂ, ಟಿಕೆಟ್ಗಳು ಸಿಗಲಿಲ್ಲ. ಈಗ ಹಣವೂ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.</p>.RCB vs CSK: ಜಯದ ಓಟದತ್ತ ಬೆಂಗಳೂರು ನೋಟ!.RCB ಪರ ಐವರು ವಿದೇಶಿಗರು ಕಣಕ್ಕೆ: ಕೊಹ್ಲಿಗೆ ಎದುರಾಯಿತು ಅಚ್ಚರಿಯ ಪ್ರಶ್ನೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>