ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹ ಆಟಗಾರರಿಗಾಗಿ ಪಾನಿಪುರಿ ಮಾಡಿದ ಧೋನಿ: ರುಚಿ ಹೆಚ್ಚಾಯಿತು ಎಂದ ಅಭಿಮಾನಿಗಳು

Last Updated 6 ಫೆಬ್ರುವರಿ 2020, 9:29 IST
ಅಕ್ಷರ ಗಾತ್ರ

2019ರ ಏಕದಿನ ವಿಶ್ವಕಪ್‌ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಎಂ.ಎಸ್‌. ಧೋನಿ ಈಗ ಏನು ಮಾಡಿದರೂ ಸುದ್ದಿಯೇ.ತಮ್ಮ ನಿವೃತ್ತಿ ಕುರಿತು ಕ್ರಿಕೆಟ್‌ ಜಗತ್ತಿನಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದ್ದರೂ ಅದ್ಯಾವುದಕ್ಕು ತಲೆಕೆಡಿಸಿಕೊಳ್ಳದ ಧೋನಿ ತಮ್ಮ ಪಾಡಿಗೆ ರಜೆಯನ್ನು ಎಂಜಾಯ್‌ ಮಾಡುತ್ತಿದ್ದಾರೆ.ಇದೀಗ ಅವರು ಪಾನಿಪುರಿ ತಯಾರಿಸುತ್ತಿರುವ ವಿಡಿಯೊವೊಂದು ವೈರಲ್‌ ಆಗಿದೆ.

45 ಸೆಕೆಂಡ್‌ ಇರುವ ಈ ವಿಡಿಯೊದಲ್ಲಿ,ಸಹ ಆಟಗಾರರಾದ ಆರ್‌.ಪಿ. ಸಿಂಗ್ ಹಾಗೂ ಪಿಯೂಷ್‌ ಚಾವ್ಲಾ ಅವರಿಗಾಗಿ ಪಾನಿಪುರಿ ತಯಾರಿಸುತ್ತಿರುವುದು ಸೆರೆಯಾಗಿದೆ. ಆದಾಗ್ಯೂ ಈ ವಿಡಿಯೊ ಎಲ್ಲಿಯದು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ವಿಡಿಯೊವನ್ನುತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವಎಂಎಸ್‌ಧೋನಿ ಫ್ಯಾನ್ಸ್‌ ಕ್ಲಬ್‌ಮಾಲ್ಡೀವ್ಸ್‌ನಲ್ಲಿ ಧೋನಿ ಪಾನಿಪುರಿ ಮಾಡಿರುವುದಾಗಿ ಬರೆದುಕೊಂಡಿದೆ.

‘ನೇರವಾಗಿ ಮಾಲ್ಡೀವ್ಸ್‌ನಿಂದ. ನಮ್ಮ ರಾಕ್‌ಸ್ಟಾರ್‌ ಪಾನಿಪುರಿ ಮಾಡುತ್ತಿದ್ದಾರೆ. ನಮ್ಮ ನೆಚ್ಚಿನ ತಿನಿಸು ಈಗ ಮತ್ತಷ್ಟು ರುಚಿಕರವಾಗಿದೆ’ ಎಂದು ಉಲ್ಲೇಖಿಸಿದೆ. ಈಮೊದಲು ಧೋನಿ ಬೀಚ್‌ನಲ್ಲಿ ವಾಲಿಬಾಲ್‌ ಆಡುತ್ತಿರುವ ದೃಶ್ಯವೊಂದುವೈರಲ್‌ ಆಗಿತ್ತು.

ಇದೇ ವರ್ಷ ಮಾರ್ಚ್‌ 29ರಿಂದ ಆರಂಭವಾಗಲಿರುವ ಐಪಿಎಲ್‌ನಲ್ಲಿ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ,ಇತ್ತೀಚೆಗೆ ಪ್ರಕಟವಾದಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಧೋನಿ ಹೆಸರನ್ನುಬಿಸಿಸಿಐ ಕೈಬಿಟ್ಟಿತ್ತು. ಹೀಗಾಗಿ ಅವರ ಕ್ರಿಕೆಟ್‌ ಬದುಕಿನ ಕುರಿತು ಸಾಕಷ್ಟು ಗೊಂದಲ ಮೂಡಿವೆ.

ಭಾರತ ತಂಡ ಧೋನಿ ನಾಯಕತ್ವದಲ್ಲಿ2007ರ ಟಿ20 ವಿಶ್ವಕಪ್‌, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT