ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಈಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸಿತ್ತು. ಸೇನೆಯ ಪ್ಯಾರಾಶೂಟ್ ರೆಜಿಮೆಂಟ್ನ ಲೆಫ್ಟಿನೆಂಟ್ ಕರ್ನಲ್ ಆಗಿರುವ ಎಂ.ಎಸ್.ಧೋನಿ ಬಲಿದಾನ ಚಿಹ್ನೆಯನ್ನು ತಮ್ಮ ಗ್ಲೌಸ್ಗಳ ಮೇಲೆ ಧರಿಸಿದ್ದರು. ಇದಕ್ಕೆ ಐಸಿಸಿ ಆಕ್ಷೇಪಿಸಿ, ‘ಧೋನಿ ಆ ಬ್ಯಾಡ್ಜ್ ತೆಗೆಯುವುದು ಒಳಿತು’ ಎಂದು ಬಿಸಿಸಿಐಗೆ ಸೂಚಿಸಿತ್ತು.