ದಾವಣಗೆರೆ: ಕರ್ನಾಟಕ ತಂಡ ರಣಜಿ ಟೂರ್ನಿಯಲ್ಲಿ ಉತ್ತಮವಾಗಿ ಆಡುತ್ತಿದ್ದು, ಟ್ರೋಫಿ ಗೆಲ್ಲಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ರೋಜರ್ ಬಿನ್ನಿ ವಿಶ್ವಾಸ ವ್ಯಕ್ತಪಡಿಸಿದರು.
ಇಲ್ಲಿನ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಐದಾರು ಆಟಗಾರರು ರಾಷ್ಟ್ರೀಯ ತಂಡದ ಬಾಗಿಲು ಬಡಿ ಯಲು ಸಿದ್ಧರಾಗಿದ್ದಾರೆ. ದೇವದತ್ತ ಪಡಿ ಕ್ಕಲ್ ಉತ್ತಮವಾಗಿ ಆಸುತ್ತಿದ್ದಾರೆ’ ಎಂದರು.
‘ಒಂದೂವರೆ ವರ್ಷದಲ್ಲಿ ಜೆ.ಎಚ್. ಪಟೇಲ್ ಬಡಾವಣೆಯ ಕ್ರಿಕೆಟ್ ಮೈದಾನವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಿ ರಣಜಿ ಮತ್ತು ಕೆಪಿಎಲ್ ಪಂದ್ಯಗಳನ್ನು ಆಯೋಜಿಸುತ್ತೇವೆ. ದಾವಣಗೆರೆಯಲ್ಲಿ ಟರ್ಫ್ ಪಿಚ್ ಸಿದ್ಧ ಪಡಿಸಿದ ನಂತರ ಗದಗ, ಹಾಸನದಲ್ಲಿ ನಿರ್ಮಿಸುವ ಉದ್ದೇಶ ಇದೆ’ ಎಂದು ತಿಳಿಸಿದರು.