<p><strong>ನವದೆಹಲಿ</strong>: ‘ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಅವಕಾಶ ಸಿಗಲಿಲ್ಲ ಎಂಬ ಬೇಸರಕ್ಕಿಂತ ನನ್ನ ತಂದೆಯನ್ನು ಕಳೆದುಕೊಂಡಿದ್ದು ದೊಡ್ಡ ನೋವು ತಂದಿದೆ. ಆದರೆ ನನ್ನ ತಂದೆಯ ಕೊನೆಯ ದಿನಗಳಲ್ಲಿ ಅವರೊಂದಿಗೆ ಇದ್ದು ಸೇವೆ ಮಾಡಿದ್ದು ಸಮಾಧಾನ ತಂದಿದೆ ’ ಎಂದು ವಿಕೆಟ್ಕೀಪರ್–ಬ್ಯಾಟರ್ ಜಿತೇಶ್ ಶರ್ಮಾ ಹೇಳಿದ್ದಾರೆ. </p>.<p>ಜಿತೇಶ್ ಅವರು ಕ್ರಿಕೆಟಿಗರಾಗಿ ರೂಪುಗೊಳ್ಳುವಲ್ಲಿ ತಂದೆ ಮೋಹನ್ ಶರ್ಮಾ ಅವರ ಪರಿಶ್ರಮ ಬಹಳ ಇತ್ತು. ಆದರೆ ಅಲ್ಪಕಾಲದ ಅನಾರೋಗ್ಯದಿಂದಾಗಿ ಫೆಬ್ರುವರಿ 1ರಂದು ಅವರು ನಿಧನರಾದರು. ಈ ಕುರಿತು ಪಿಟಿಐ ಸಂದರ್ಶನದಲ್ಲಿ ಮಾತನಾಡಿದ್ದಾರೆ.</p>.<p>‘ನಾನು ಕೂಡ ಮನುಷ್ಯನೇ ಅಲ್ಲವೇ? ಭಾರತ ತಂಡದಲ್ಲಿ ಸ್ಥಾನ ಸಿಕ್ಕಿಲ್ಲವೆಂದು ಗೊತ್ತಾದಾಗ ಸಹಜವಾಗಿಯೇ ಬೇಸರವಾಗಿತ್ತು. ಆದರೆ ಇದರಿಂದಾಗಿ ನನ್ನ ತಂದೆಯ ಜೀವನದ ಕೊನೆಯ ದಿನಗಳಲ್ಲಿ ಅವರೊಂದಿಗೆ ಕಾಲ ಕಳೆಯುವ ಅವಕಾಶ ಸಿಕ್ಕಿತು. ಅವರೊಂದಿಗೆ ಸುಮಾರು ಏಳು ದಿನಗಳ ಕಾಲ ಪೂರ್ಣಪ್ರಮಾಣದಲ್ಲಿ ಸಮಯ ಕಳೆದೆ. ನನಗೆ ಆಯ್ಕೆಯಾಗದ ಕುರಿತು ಯಾವುದೇ ಬೇಸರವಿಲ್ಲ. ಯಾರ ಬಗ್ಗೆಯೂ ದೂರು ಇಲ್ಲ. ಕೋಪವೂ ಇಲ್ಲ. ಅಪ್ಪನೊಂದಿಗೆ ಇರಲು ಅವಕಾಶ ಕೊಟ್ಟಿದ್ದಕ್ಕಾಗಿ ದೇವರಿಗೆ ಋಣಿಯಾಗಿರುವೆ’ ಎಂದರು. </p>.<p>‘ತಂದೆಯ ಆರೈಕೆ ಮಾಡಲು ಸಮಯ ಸಿಕ್ಕಿತು. ವಿಶ್ವಕಪ್ ಪಂದ್ಯಗಳನ್ನು ಮನೆಯಲ್ಲಿಯೇ ಕುಳಿತು ಟಿ.ವಿಯಲ್ಲಿ ವೀಕ್ಷಿಸಿದೆ. ನಿಜಕ್ಕೂ ಆನಂದಿಸಿದೆ. ಏಕೆಂದರೆ; ಆಡುವಾಗ ಇರುವ ಒತ್ತಡಕ್ಕೂ ಅರಾಮಾಗಿ ಕುಳಿತು ನೋಡುವುದಕ್ಕೂ ಬಹಳ ವ್ಯತ್ಯಾಸವಿದೆ’ ಎಂದರು. </p>.<p>‘ತಂದೆ ನಿಧನರಾದ ಕೆಲವು ದಿನಗಳ ನಂತರ ಅವರ ಇಲ್ಲದಿರುವಿಕೆಯ ಭಾವ ಕಾಡುತ್ತದೆ. ಅವರ ಸ್ಥಾನದಲ್ಲಿ ನಿಂತು ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗುತ್ತದೆ. ಕುಟುಂಬದ ಹಿರಿಯ ಮಗನಾಗಿ ನಾನು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ತಾಯಿ ಮತ್ತು ಸಹೋದರನನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದಾಗಿದೆ. ಅವರ ಎದುರಿಗೆ ನಾನು ದುರ್ಬಲನಾಗಲು ಸಾಧ್ಯವಿಲ್ಲ’ ಎಂದರು. </p>.<p>ಟಿ20 ವಿಶ್ವಕಪ್ ನಡೆಯುವ ಸಂದರ್ಭದಲ್ಲಿಯೇ ಭಾರತ ತಂಡದಲ್ಲಿದ್ದ ಬ್ಯಾಟರ್ ರಿಂಕು ಸಿಂಗ್ ಅವರಿಗೂ ಪಿತೃವಿಯೋಗದ ದುಃಖ ಕಾಡಿತ್ತು.</p>.<p>‘ನಾನು ಅಭ್ಯಾಸ ಮಾಡುವಾಗ ಪೂರ್ಣ ಗಮನ ಕೊಡಲು ಪ್ರಯತ್ನಿಸುತ್ತೇನೆ. ಆದರೂ ತಂದೆಯ ನೆನಪು ಕಾಡುತ್ತದೆ. ಅವರು ನನ್ನ ಹೀರೊ ಆಗಿದ್ದರು. ಅವರಿಲ್ಲದ ದುಃಖ ಮರೆಯಲು ಅಭ್ಯಾಸದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಬಹುಶಃ ರಿಂಕು ಸಿಂಗ್ ಅವರಿಗೂ ಹೀಗೇ ಆಗಿರುತ್ತದೆ. ಅದಕ್ಕೇ ಅವರು ತಂದೆಯ ಅಂತಿಮ ಕಾರ್ಯಮುಗಿಸಿದವರೇ ತಂಡಕ್ಕೆ ಮರಳಿದ್ದರು’ ಎಂದರು. </p>.<p>ಜಿತೇಶ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಅವಕಾಶ ಸಿಗಲಿಲ್ಲ ಎಂಬ ಬೇಸರಕ್ಕಿಂತ ನನ್ನ ತಂದೆಯನ್ನು ಕಳೆದುಕೊಂಡಿದ್ದು ದೊಡ್ಡ ನೋವು ತಂದಿದೆ. ಆದರೆ ನನ್ನ ತಂದೆಯ ಕೊನೆಯ ದಿನಗಳಲ್ಲಿ ಅವರೊಂದಿಗೆ ಇದ್ದು ಸೇವೆ ಮಾಡಿದ್ದು ಸಮಾಧಾನ ತಂದಿದೆ ’ ಎಂದು ವಿಕೆಟ್ಕೀಪರ್–ಬ್ಯಾಟರ್ ಜಿತೇಶ್ ಶರ್ಮಾ ಹೇಳಿದ್ದಾರೆ. </p>.<p>ಜಿತೇಶ್ ಅವರು ಕ್ರಿಕೆಟಿಗರಾಗಿ ರೂಪುಗೊಳ್ಳುವಲ್ಲಿ ತಂದೆ ಮೋಹನ್ ಶರ್ಮಾ ಅವರ ಪರಿಶ್ರಮ ಬಹಳ ಇತ್ತು. ಆದರೆ ಅಲ್ಪಕಾಲದ ಅನಾರೋಗ್ಯದಿಂದಾಗಿ ಫೆಬ್ರುವರಿ 1ರಂದು ಅವರು ನಿಧನರಾದರು. ಈ ಕುರಿತು ಪಿಟಿಐ ಸಂದರ್ಶನದಲ್ಲಿ ಮಾತನಾಡಿದ್ದಾರೆ.</p>.<p>‘ನಾನು ಕೂಡ ಮನುಷ್ಯನೇ ಅಲ್ಲವೇ? ಭಾರತ ತಂಡದಲ್ಲಿ ಸ್ಥಾನ ಸಿಕ್ಕಿಲ್ಲವೆಂದು ಗೊತ್ತಾದಾಗ ಸಹಜವಾಗಿಯೇ ಬೇಸರವಾಗಿತ್ತು. ಆದರೆ ಇದರಿಂದಾಗಿ ನನ್ನ ತಂದೆಯ ಜೀವನದ ಕೊನೆಯ ದಿನಗಳಲ್ಲಿ ಅವರೊಂದಿಗೆ ಕಾಲ ಕಳೆಯುವ ಅವಕಾಶ ಸಿಕ್ಕಿತು. ಅವರೊಂದಿಗೆ ಸುಮಾರು ಏಳು ದಿನಗಳ ಕಾಲ ಪೂರ್ಣಪ್ರಮಾಣದಲ್ಲಿ ಸಮಯ ಕಳೆದೆ. ನನಗೆ ಆಯ್ಕೆಯಾಗದ ಕುರಿತು ಯಾವುದೇ ಬೇಸರವಿಲ್ಲ. ಯಾರ ಬಗ್ಗೆಯೂ ದೂರು ಇಲ್ಲ. ಕೋಪವೂ ಇಲ್ಲ. ಅಪ್ಪನೊಂದಿಗೆ ಇರಲು ಅವಕಾಶ ಕೊಟ್ಟಿದ್ದಕ್ಕಾಗಿ ದೇವರಿಗೆ ಋಣಿಯಾಗಿರುವೆ’ ಎಂದರು. </p>.<p>‘ತಂದೆಯ ಆರೈಕೆ ಮಾಡಲು ಸಮಯ ಸಿಕ್ಕಿತು. ವಿಶ್ವಕಪ್ ಪಂದ್ಯಗಳನ್ನು ಮನೆಯಲ್ಲಿಯೇ ಕುಳಿತು ಟಿ.ವಿಯಲ್ಲಿ ವೀಕ್ಷಿಸಿದೆ. ನಿಜಕ್ಕೂ ಆನಂದಿಸಿದೆ. ಏಕೆಂದರೆ; ಆಡುವಾಗ ಇರುವ ಒತ್ತಡಕ್ಕೂ ಅರಾಮಾಗಿ ಕುಳಿತು ನೋಡುವುದಕ್ಕೂ ಬಹಳ ವ್ಯತ್ಯಾಸವಿದೆ’ ಎಂದರು. </p>.<p>‘ತಂದೆ ನಿಧನರಾದ ಕೆಲವು ದಿನಗಳ ನಂತರ ಅವರ ಇಲ್ಲದಿರುವಿಕೆಯ ಭಾವ ಕಾಡುತ್ತದೆ. ಅವರ ಸ್ಥಾನದಲ್ಲಿ ನಿಂತು ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗುತ್ತದೆ. ಕುಟುಂಬದ ಹಿರಿಯ ಮಗನಾಗಿ ನಾನು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ತಾಯಿ ಮತ್ತು ಸಹೋದರನನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದಾಗಿದೆ. ಅವರ ಎದುರಿಗೆ ನಾನು ದುರ್ಬಲನಾಗಲು ಸಾಧ್ಯವಿಲ್ಲ’ ಎಂದರು. </p>.<p>ಟಿ20 ವಿಶ್ವಕಪ್ ನಡೆಯುವ ಸಂದರ್ಭದಲ್ಲಿಯೇ ಭಾರತ ತಂಡದಲ್ಲಿದ್ದ ಬ್ಯಾಟರ್ ರಿಂಕು ಸಿಂಗ್ ಅವರಿಗೂ ಪಿತೃವಿಯೋಗದ ದುಃಖ ಕಾಡಿತ್ತು.</p>.<p>‘ನಾನು ಅಭ್ಯಾಸ ಮಾಡುವಾಗ ಪೂರ್ಣ ಗಮನ ಕೊಡಲು ಪ್ರಯತ್ನಿಸುತ್ತೇನೆ. ಆದರೂ ತಂದೆಯ ನೆನಪು ಕಾಡುತ್ತದೆ. ಅವರು ನನ್ನ ಹೀರೊ ಆಗಿದ್ದರು. ಅವರಿಲ್ಲದ ದುಃಖ ಮರೆಯಲು ಅಭ್ಯಾಸದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಬಹುಶಃ ರಿಂಕು ಸಿಂಗ್ ಅವರಿಗೂ ಹೀಗೇ ಆಗಿರುತ್ತದೆ. ಅದಕ್ಕೇ ಅವರು ತಂದೆಯ ಅಂತಿಮ ಕಾರ್ಯಮುಗಿಸಿದವರೇ ತಂಡಕ್ಕೆ ಮರಳಿದ್ದರು’ ಎಂದರು. </p>.<p>ಜಿತೇಶ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>