ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಎಸೆತ ಹಾಕಿದ್ದು ಭಾರತೀಯ!

ವಿಶ್ವಕಪ್ ಹೆಜ್ಜೆಗುರುತು - 2
Last Updated 15 ಏಪ್ರಿಲ್ 2019, 4:21 IST
ಅಕ್ಷರ ಗಾತ್ರ

ವಿಶ್ವಕಪ್ ಕ್ರಿಕೆಟ್ ಇತಿಹಾಸದ ಮೊದಲ ಎರಡು ಟೂರ್ನಿಗಳಲ್ಲಿ ಭಾರತ ತಂಡವು ಕಪ್ ಗೆದ್ದಿರಲಿಲ್ಲ. ಕಪ್ಪುಕುದುರೆಯಾಗಿಯೇ ಕಣಕ್ಕಿಳಿದಿತ್ತು. ಆದರೆ, ಭಾರತೀಯರು ಹೆಮ್ಮೆಪಡುವಂತಹ ಸುಂದರ ಕ್ಷಣಗಳು ಇತಿಹಾಸದ ಪುಟಗಳಲ್ಲಿವೆ. ಕನ್ನಡಿಗರ ಛಾಪು ಕೂಡ ಇದೆ. ಭಾರತವು ಲೀಗ್ ಹಂತದಲ್ಲಿ ಒಟ್ಟು ಮೂರು ಪಂದ್ಯಗಳನ್ನು ಆಡಿತ್ತು.

* ಲಾರ್ಡ್ಸ್‌ನಲ್ಲಿ ನಡೆದ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ಎದುರು ಭಾರತ ಆಡಿತ್ತು. ಇಂಗ್ಲೆಂಡ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತು. 202 ರನ್‌ಗಳಿಂದ ಗೆದ್ದಿತು.

* ಆಫ್‌ ಸ್ಪಿನ್ನರ್ ಎಸ್‌. ವೆಂಕಟರಾಘವನ್ ಅವರು ಭಾರತ ತಂಡದ ನಾಯಕತ್ವ ವಹಿಸಿದ್ದರು.

*ಮೊದಲ ಎಸೆತ ಹಾಕಿದ ಬೌಲರ್‌ ಭಾರತದ ಮಧ್ಯಮವೇಗಿ ಮದನ್‌ ಲಾಲ್. ಆ ಎಸೆತವನ್ನು ಎದುರಿಸಿದ ಬ್ಯಾಟ್ಸ್‌ಮನ್ ಜೆ.ಎ. ಜೇಮ್ಸನ್‌.

* ಜೆಮ್ಸನ್ ಅವರ ವಿಕೆಟ್‌ ಅನ್ನು ಮೊಹಿಂದರ್ ಅಮರನಾಥ್ ಗಳಿಸಿದರು. ಆ ಮೂಲಕ ಮೊದಲ ವಿಕೆಟ್ ಪಡೆದ ಶ್ರೇಯ ಅವರದ್ದು. ಕ್ಯಾಚ್ ಪಡೆದ ಹೆಗ್ಗಳಿಕೆ ವೆಂಕಟರಾಘವನ್ ಅವರದ್ದಾಗಿದೆ.

*ಆರಂಭಿಕ ಬ್ಯಾಟ್ಸ್‌ಮನ್‌ ಆಗಿದ್ದ ಸುನಿಲ್ ಗಾವಸ್ಕರ್ ಮೊದಲ ಎಸೆತ ಎದುರಿಸಿದ ಭಾರತದ ಬ್ಯಾಟ್ಸ್‌ಮನ್. ಅವರು ಕೊನೆಯ ಎಸೆತದವರೆಗೂ ಕ್ರೀಸ್‌ನಲ್ಲಿದ್ದರು. 174 ಎಸೆತಗಳಲ್ಲಿ ಔಟಾಗದೆ 36 ರನ್‌ ಗಳಿಸಿದ್ದರು.

*ಜಿ.ಆರ್. ವಿಶ್ವನಾಥ್ ಮತ್ತು ಬ್ರಿಜೇಶ್ ಪಟೇಲ್ ಮೊದಲ ಟೂರ್ನಿಯಲ್ಲಿ ಆಡಿದ ಕರ್ನಾಟಕದ ಇಬ್ಬರು ಆಟಗಾರರು

* ಮೊಹಿಂದರ್ ಅಮರನಾಥ್, ಅನ್ಷುಮನ್ ಗಾಯಕವಾಡ್ ಮತ್ತು ಕರ್ಸನ್ ಘಾವ್ರಿ ಅವರು ಈ ಪಂದ್ಯದ ಮೂಲಕ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದ್ದರು.

* ಟೂರ್ನಿಯ ಎರಡನೇ ಪಂದ್ಯದಲ್ಲಿ ಭಾರತ ತಂಡವು ಪೂರ್ವ ಆಫ್ರಿಕಾ ಎದುರು 10 ವಿಕೆಟ್‌ಗಳಿಂದ ಗೆದ್ದಿತ್ತು. ಗಾವಸ್ಕರ್ (ಔಟಾಗದೆ 65 ) ಮತ್ತು ಫರೂಕ್ ಎಂಜಿನಿಯರ್ (ಔಟಾಗದೆ 54) ಅರ್ಧಶತಕ ಗಳಿಸಿದ್ದರು. ಮದನ್ ಲಾಲ್ ಮೂರು ವಿಕೆಟ್ ಗಳಿಸಿದ್ದರು. ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಭಾರತವು ಸೋಲನುಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT