ಭಾರತ ಮತ್ತು ಪಾಕ್ ನಡುವಣ ದ್ವಿಪಕ್ಷೀಯ ಸರಣಿ ಒಪ್ಪಂದವನ್ನು ಬಿಸಿಸಿಐ ಉಲ್ಲಂಘನೆ ಮಾಡಿದೆ ಅದಕ್ಕಾಗಿ ತನಗೆ ಪರಿಹಾರ ನೀಡಬೇಕು ಎಂದು ಪಿಸಿಬಿ ಈ ಹಿಂದೆ ಐಸಿಸಿಯ ವ್ಯಾಜ್ಯ ಪರಿಹಾರ ಸಮಿತಿಗೆ ದೂರು ನೀಡಿತ್ತು. ಆದರೆ ನಂತರದ ವಿಚಾರಣೆಗಳಲ್ಲಿ ಭಾರತವು ತನ್ನ ವಾದ ಮಂಡಿಸಿ ಪ್ರಕರಣದಲ್ಲಿ ಗೆಲುವು ಸಾಧಿಸಿತ್ತು. ಕಾನೂನು ಪ್ರಕ್ರಿಯೆಯಲ್ಲಿ ಖರ್ಚಾದ ಹಣವನ್ನೂ ಸೇರಿಸಿ ಪರಿಹಾರ ನೀಡಬೇಕು ಎಂದು ಬಿಸಿಸಿಐ ಆಗ್ರಹಿಸಿತ್ತು.