ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ ಬದಲಿಗೆ ರೈನಾ ನಾಯಕತ್ವ

Last Updated 17 ಏಪ್ರಿಲ್ 2019, 18:47 IST
ಅಕ್ಷರ ಗಾತ್ರ

ಚೆನ್ನೈ:ಮಹೇಂದ್ರ ಸಿಂಗ್ ಧೋನಿ ಬದಲಿಗೆ ಎಡಗೈ ಬ್ಯಾಟ್ಸ್‌ಮನ್‌ ಸುರೇಶ್ ರೈನಾ ಬುಧವಾರದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದರು. 2010ರ ನಂತರ ಇದೇ ಮೊದಲ ಬಾರಿ ಧೋನಿ ಇಲ್ಲದೆ ತಂಡ ಕಣಕ್ಕೆ ಇಳಿದಿತ್ತು.

ಬೆನ್ನು ನೋವಿನಿಂದ ಬಳಲುತ್ತಿರುವ ಧೋನಿ ಪಂದ್ಯ ಆರಂಭವಾಗುವುದಕ್ಕೂ ಮೊದಲು ಸಹ ಆಟಗಾರರ ಜೊತೆ ‘ಫುಟ್‌ಬಾಲ್‌’ ಆಡಿದ್ದರು. ನಂತರ ಅವರಿಗೆ ವಿಶ್ರಾಂತಿ ನೀಡಿರುವ ವಿಷಯವನ್ನು ಪ್ರಕಟಿಸಲಾಯಿತು. ಸ್ಯಾಮ್ ಬಿಲಿಂಗ್ಸ್ ಅವರ ಹೆಗಲಿಗೆ ವಿಕೆಟ್ ಕೀಪರ್ ಜವಾಬ್ದಾರಿಯನ್ನು ವಹಿಸಲಾಗಿತ್ತು.

ಕತ್ತು ನೋವಿನಿಂದ ಬಳಲುತ್ತಿರುವ ಹರಭಜನ್ ಸಿಂಗ್ ಕೂಡ ಈ ಪಂದ್ಯದಲ್ಲಿ ಕಣಕ್ಕೆ ಇಳಿಯಲಿಲ್ಲ. ಮಿಷೆಲ್‌ ಸ್ಯಾಂಟನರ್ ಬದಲಿಗೆ ಕರಣ್ ಶರ್ಮಾ ಅವರಿಗೆ ಸ್ಥಾನ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT