<p><strong>ನವದೆಹಲಿ</strong>: ಸೌದಿ ಅರೇಬಿಯಾದಲ್ಲಿ ನಿಗದಿಯಾಗಿರುವ 2027ರ ಎಎಫ್ಸಿ ಏಷ್ಯನ್ ಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಭಾರತ ಪುರುಷರ ತಂಡವು ತನ್ನ ಕೊನೆಯ ಪಂದ್ಯವನ್ನು ಇದೇ ತಿಂಗಳ 31ರಂದು ಹಾಂಗ್ಕಾಂಗ್ ವಿರುದ್ಧ ಕೊಚ್ಚಿಯಲ್ಲಿ ಆಡಲಿದೆ.</p>.<p>ಭಾರತ ಈಗಾಗಲೇ ಎಎಫ್ಸಿ ಏಷ್ಯನ್ ಕಪ್ ರೇಸ್ನಿಂದ ಹೊರಬಿದ್ದಿದೆ. ಅರ್ಹತಾ ಸುತ್ತಿನಲ್ಲಿ ತನ್ನ ಕೊನೆಯ ಪಂದ್ಯವನ್ನು ಗೆಲುವಿನೊಡನೆ ಮುಗಿಸುವ ಗುರಿಯನ್ನು ಭಾರತ ತಂಡ ಹೊಂದಿದೆ.</p>.<p>ಹಾಂಗ್ಕಾಂಗ್ ತಂಡವೂ ಎಎಫ್ಸಿ ಏಷ್ಯನ್ ಕಪ್ ರೇಸ್ನಿಂದ ಹೊರಬಿದ್ದ ಕಾರಣ ಆ ತಂಡಕ್ಕೂ ಈ ಪಂದ್ಯ ಮಹತ್ವದ್ದೇನೂ ಆಗಿಲ್ಲ. ಆದರೆ ಫಿಫಾ ರ್ಯಾಂಕಿಂಗ್ ಪಾಯಿಂಟ್ಸ್ ದೃಷ್ಟಿಯಿಂದ ಭಾರತ, ಹಾಂಗ್ಕಾಂಗ್ ತಂಡಗಳು ಈ ಪಂದ್ಯವನ್ನು ಕಡೆಗಣಿಸುವಂತಿಲ್ಲ.</p>.<p>ಭಾರತ ತಂಡವು ಅರ್ಹತಾ ಸುತ್ತಿನಲ್ಲಿ ತನ್ನ ಪಂದ್ಯಗಳನ್ನು ಬೇರೆ ಬೇರೆ ಕಡೆ ಆಡಿದೆ. ಹೋದ ವರ್ಷದ ಮಾರ್ಚ್ನಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯವು ಶಿಲ್ಲಾಂಗ್ನಲ್ಲಿ ನಡೆದಿತ್ತು. ಅಕ್ಟೋಬರ್ನಲ್ಲಿ ಸಿಂಗಪುರ ವಿರುದ್ಧ ನಡೆದ ಪಂದ್ಯಕ್ಕೆ ಮಡಗಾಂವ್ ಆತಿಥ್ಯ ವಹಿಸಿತ್ತು.</p>.<p>ಕೊಚ್ಚಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣವು 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡದ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ.</p>.<p>2016ರ ಮಾರ್ಚ್ನಲ್ಲಿ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಇಲ್ಲಿ ತುರ್ಕಮೆನಿಸ್ತಾನ ತಂಡದ ವಿರುದ್ಧ ಆಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಸೌದಿ ಅರೇಬಿಯಾದಲ್ಲಿ ನಿಗದಿಯಾಗಿರುವ 2027ರ ಎಎಫ್ಸಿ ಏಷ್ಯನ್ ಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಭಾರತ ಪುರುಷರ ತಂಡವು ತನ್ನ ಕೊನೆಯ ಪಂದ್ಯವನ್ನು ಇದೇ ತಿಂಗಳ 31ರಂದು ಹಾಂಗ್ಕಾಂಗ್ ವಿರುದ್ಧ ಕೊಚ್ಚಿಯಲ್ಲಿ ಆಡಲಿದೆ.</p>.<p>ಭಾರತ ಈಗಾಗಲೇ ಎಎಫ್ಸಿ ಏಷ್ಯನ್ ಕಪ್ ರೇಸ್ನಿಂದ ಹೊರಬಿದ್ದಿದೆ. ಅರ್ಹತಾ ಸುತ್ತಿನಲ್ಲಿ ತನ್ನ ಕೊನೆಯ ಪಂದ್ಯವನ್ನು ಗೆಲುವಿನೊಡನೆ ಮುಗಿಸುವ ಗುರಿಯನ್ನು ಭಾರತ ತಂಡ ಹೊಂದಿದೆ.</p>.<p>ಹಾಂಗ್ಕಾಂಗ್ ತಂಡವೂ ಎಎಫ್ಸಿ ಏಷ್ಯನ್ ಕಪ್ ರೇಸ್ನಿಂದ ಹೊರಬಿದ್ದ ಕಾರಣ ಆ ತಂಡಕ್ಕೂ ಈ ಪಂದ್ಯ ಮಹತ್ವದ್ದೇನೂ ಆಗಿಲ್ಲ. ಆದರೆ ಫಿಫಾ ರ್ಯಾಂಕಿಂಗ್ ಪಾಯಿಂಟ್ಸ್ ದೃಷ್ಟಿಯಿಂದ ಭಾರತ, ಹಾಂಗ್ಕಾಂಗ್ ತಂಡಗಳು ಈ ಪಂದ್ಯವನ್ನು ಕಡೆಗಣಿಸುವಂತಿಲ್ಲ.</p>.<p>ಭಾರತ ತಂಡವು ಅರ್ಹತಾ ಸುತ್ತಿನಲ್ಲಿ ತನ್ನ ಪಂದ್ಯಗಳನ್ನು ಬೇರೆ ಬೇರೆ ಕಡೆ ಆಡಿದೆ. ಹೋದ ವರ್ಷದ ಮಾರ್ಚ್ನಲ್ಲಿ ಬಾಂಗ್ಲಾದೇಶ ವಿರುದ್ಧ ಪಂದ್ಯವು ಶಿಲ್ಲಾಂಗ್ನಲ್ಲಿ ನಡೆದಿತ್ತು. ಅಕ್ಟೋಬರ್ನಲ್ಲಿ ಸಿಂಗಪುರ ವಿರುದ್ಧ ನಡೆದ ಪಂದ್ಯಕ್ಕೆ ಮಡಗಾಂವ್ ಆತಿಥ್ಯ ವಹಿಸಿತ್ತು.</p>.<p>ಕೊಚ್ಚಿಯ ಜವಾಹರಲಾಲ್ ನೆಹರೂ ಕ್ರೀಡಾಂಗಣವು 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡದ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ.</p>.<p>2016ರ ಮಾರ್ಚ್ನಲ್ಲಿ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ ಇಲ್ಲಿ ತುರ್ಕಮೆನಿಸ್ತಾನ ತಂಡದ ವಿರುದ್ಧ ಆಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>