ನಗರದ ಹೊರವಲಯದಲ್ಲಿರುವ ಬೆಲ್ಲಾ ವಿಸ್ತಾ ಸ್ಮಶಾನದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಕುಟಂಬದವರು ಮತ್ತು ಸಮೀಪದ ಗೆಳೆಯರಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಕಾಸ ರೊಸಾಡ ಪ್ರಸಿಡೆನ್ಶಿಯಲ್ ಪ್ಯಾಲೇಸ್ನಲ್ಲಿ ಇರಿಸಲಾಗಿದ್ದ ಪಾರ್ಥಿವ ಶರೀರದ ಅಂತಿಮ ಯಾತ್ರೆ ಆರಂಭಗೊಳ್ಳುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ದಿಕ್ಕುತೋಚದಂತಾಗಿ ಕೂಗಾಡಿದರು. ಮುನ್ನುಗ್ಗಲು ಪ್ರಯತ್ನಿಸಿದ ಅವರನ್ನು ಪೊಲೀಸರು ತಡೆದರು. ಆದರೆ ಪರಿಸ್ಥಿತಿ ನಿಯಂತ್ರಣಾತೀತವಾದಾಗ ಅಶ್ರುವಾಯು ಪ್ರಯೋಗಿಸಲಾಯಿತು. ರಬ್ಬರ್ ಗುಂಡುಗಳನ್ನೂ ಅವರತ್ತ ತೂರಿಬಿಡಲಾಯಿತು.