ಗದಗ, ನರಗುಂದ, ಗಜೇಂದ್ರಗಡ, ಲಕ್ಷ್ಮೇಶ್ವರ ಹಾಗೂ ಮುಂಡರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಪ್ರತಿ ದಿನ ಸರಾಸರಿ 300ರಿಂದ 400 ಕ್ವಿಂಟಲ್ನಷ್ಟು ಕಡಲೆ ಆವಕವಾಗುತ್ತಿದೆ. ಮಾರುಕಟ್ಟೆಯಲ್ಲಿ ದರ ತೀವ್ರವಾಗಿ ಕುಸಿದು ಕ್ವಿಂಟಲ್ಗೆ ಸರಾಸರಿ ₹ 3,300ರಿಂದ ₹ 3,600 ದರ ಇದ್ದಿದ್ದರಿಂದ, ಸರ್ಕಾರದ ವತಿಯಿಂದ ಖರೀದಿ ಕೇಂದ್ರ ಪ್ರಾರಂಭಿಸುವಂತೆ ರೈತರು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅನುಮತಿ ನೀಡುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಮನವಿ ಮಾಡಿತ್ತು.