ಬೆಂಗಳೂರು: ಕ್ರೀಡಾಸ್ಫೂರ್ತಿ ಮರೆತು ವರ್ತಿಸಿದ ಕಂಟ್ರೋಲರೇಟ್ ಆಫ್ ಇನ್ಸ್ಪೆಕ್ಷನ್ ಇಲೆಕ್ಟ್ರಾನಿಕ್ಸ್ (ಸಿಐಎಲ್) ತಂಡದ ಮೂವರು ಆಟಗಾರರನ್ನು ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಅಮಾನತುಗೊಳಿಸಿದೆ. ವೆಂಕಟೇಶ್, ಚಾಂದ್ ಪಾಶ ಮತ್ತು ಪ್ರದೀಪ್ ಅವರು ಮೂರು ಪಂದ್ಯಗಳಲ್ಲಿ ಆಡುವಂತಿಲ್ಲ ಎಂದು ಸಂಸ್ಥೆ ಸೂಚಿಸಿದೆ.