ಗುಂಪಿನಿಂದ ಒಂದು ತಂಡಕ್ಕೆ ಮಾತ್ರ ಮುಖ್ಯ ಸುತ್ತು ಪ್ರವೇಶಿಸುವ ಅವಕಾಶವಿದೆ. ಕರ್ನಾಟಕ ಈ ವರೆಗೆ ಅಜೇಯವಾಗಿದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆಯುವ ಭರವಸೆಯಲ್ಲಿದೆ. ಕೊನೆಯ ಪಂದ್ಯದಲ್ಲಿ ಶನಿವಾರ ತೆಲಂಗಾಣವನ್ನು ಎದುರಿಸಲಿದೆ. ಅಂದು ಮೊದಲ ಪಂದ್ಯದಲ್ಲಿ ತಮಿಳುನಾಡು ಗೆದ್ದು ಮಧ್ಯಾಹ್ನ ಕರ್ನಾಟಕ ಸೋತರೆ ಗೋಲು ಗಳಿಕೆಯ ಆಧಾರದಲ್ಲಿ ಮುಂದಿನ ಹಂತವನ್ನು ನಿರ್ಣಯಿಸಲಾಗುವುದು.