<p>ಕೆಜಿಎಫ್: ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ದೈಹಿಕ ಸಾಮರ್ಥ್ಯ ಸದುಪಯೋಗಪಡಿಸಿಕೊಳ್ಳಲು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಹೇಳಿದರು.</p>.<p>ಚಾಂಪಿಯನ್ ರೀಫ್ಸ್ನಲ್ಲಿ ಹೈಗ್ರೌಂಡ್ಸ್ ಫುಟ್ಬಾಲ್ ಕ್ಲಬ್ ಆಯೋಜಿಸಿದ್ದ ಬೇಸಿಗೆ ಫುಟ್ಬಾಲ್ ತರಬೇತಿ ಶಿಬಿರದ ಕಾರ್ಯ ಚಟುವಟಿಕೆಗಳನ್ನು ಶನಿವಾರ ವೀಕ್ಷಿಸಿದ ಅವರು, ಮಕ್ಕಳು ಫುಟ್ಬಾಲ್ನಲ್ಲಿ ಆಸಕ್ತಿ ತೋರಿರುವುದು ಸಂತೋಷಕರವಾಗಿದೆ. ಶಿಬಿರದಲ್ಲಿ ಬಾಲಕಿಯರೂ ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.</p>.<p>ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯರಾದರೆ ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿರುತ್ತಾರೆ. ಕೆಜಿಎಫ್ ನಗರವನ್ನು ಮಾದಕ ವಸ್ತುಮುಕ್ತ ನಗರವನ್ನಾಗಿಸುವ ಸಂಕಲ್ಪ ಪೊಲೀಸ್ ಇಲಾಖೆ ಹೊಂದಿದೆ. ಸಾರ್ವಜನಿಕರು ಕಾನೂನುಬಾಹಿರ ಚಟುವಟಿಕೆಗಳ ಮಾಹಿತಿ ಪೊಲೀಸರಿಗೆ ನೀಡಬೇಕು ಎಂದು ಎಸ್ಪಿ ಕೋರಿದರು.</p>.<p>ಭಾಗೀರಥಿ ಟ್ರಾವಲ್ಸ್ ನಿರ್ದೇಶಕ ನೀಲ್ ಜೋಸೆಫ್ ಮಾತನಾಡಿ, ಕೆಜಿಎಫ್ ನಗರ ಖ್ಯಾತ ಫುಟ್ಬಾಲ್ ಆಟಗಾರರನ್ನು ರಾಜ್ಯ-ರಾಷ್ಟ್ರಕ್ಕೆ ನೀಡಿದೆ. ಶಿಬಿರದಲ್ಲಿ ಸುಮಾರು 200 ಮಕ್ಕಳು ಭಾಗವಹಿಸಿರುವುದು ಕ್ರೀಡಾ ಆಸಕ್ತಿಗೆ ಸಾಕ್ಷಿಯಾಗಿದೆ ಎಂದರು.</p>.<p>ಕೋಚ್ ಗಳಾದ ವಿಮಲ್ ವಿಲ್ಸನ್, ನವಕುಮಾರ್, ಸೆಂದಿಲ್ ಕುಮಾರ್ ಹಾಗೂ ದಾನಿಗಳಾದ ರಾಮಕೃಷ್ಣ, ತಿರುಮುರುಗನ್ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-18-291189929</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಜಿಎಫ್: ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮತ್ತು ದೈಹಿಕ ಸಾಮರ್ಥ್ಯ ಸದುಪಯೋಗಪಡಿಸಿಕೊಳ್ಳಲು ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಹೇಳಿದರು.</p>.<p>ಚಾಂಪಿಯನ್ ರೀಫ್ಸ್ನಲ್ಲಿ ಹೈಗ್ರೌಂಡ್ಸ್ ಫುಟ್ಬಾಲ್ ಕ್ಲಬ್ ಆಯೋಜಿಸಿದ್ದ ಬೇಸಿಗೆ ಫುಟ್ಬಾಲ್ ತರಬೇತಿ ಶಿಬಿರದ ಕಾರ್ಯ ಚಟುವಟಿಕೆಗಳನ್ನು ಶನಿವಾರ ವೀಕ್ಷಿಸಿದ ಅವರು, ಮಕ್ಕಳು ಫುಟ್ಬಾಲ್ನಲ್ಲಿ ಆಸಕ್ತಿ ತೋರಿರುವುದು ಸಂತೋಷಕರವಾಗಿದೆ. ಶಿಬಿರದಲ್ಲಿ ಬಾಲಕಿಯರೂ ಭಾಗವಹಿಸುತ್ತಿರುವುದು ವಿಶೇಷವಾಗಿದೆ ಎಂದು ತಿಳಿಸಿದರು.</p>.<p>ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯರಾದರೆ ಕಾನೂನು ಬಾಹಿರ ಚಟುವಟಿಕೆಗಳಿಂದ ದೂರವಿರುತ್ತಾರೆ. ಕೆಜಿಎಫ್ ನಗರವನ್ನು ಮಾದಕ ವಸ್ತುಮುಕ್ತ ನಗರವನ್ನಾಗಿಸುವ ಸಂಕಲ್ಪ ಪೊಲೀಸ್ ಇಲಾಖೆ ಹೊಂದಿದೆ. ಸಾರ್ವಜನಿಕರು ಕಾನೂನುಬಾಹಿರ ಚಟುವಟಿಕೆಗಳ ಮಾಹಿತಿ ಪೊಲೀಸರಿಗೆ ನೀಡಬೇಕು ಎಂದು ಎಸ್ಪಿ ಕೋರಿದರು.</p>.<p>ಭಾಗೀರಥಿ ಟ್ರಾವಲ್ಸ್ ನಿರ್ದೇಶಕ ನೀಲ್ ಜೋಸೆಫ್ ಮಾತನಾಡಿ, ಕೆಜಿಎಫ್ ನಗರ ಖ್ಯಾತ ಫುಟ್ಬಾಲ್ ಆಟಗಾರರನ್ನು ರಾಜ್ಯ-ರಾಷ್ಟ್ರಕ್ಕೆ ನೀಡಿದೆ. ಶಿಬಿರದಲ್ಲಿ ಸುಮಾರು 200 ಮಕ್ಕಳು ಭಾಗವಹಿಸಿರುವುದು ಕ್ರೀಡಾ ಆಸಕ್ತಿಗೆ ಸಾಕ್ಷಿಯಾಗಿದೆ ಎಂದರು.</p>.<p>ಕೋಚ್ ಗಳಾದ ವಿಮಲ್ ವಿಲ್ಸನ್, ನವಕುಮಾರ್, ಸೆಂದಿಲ್ ಕುಮಾರ್ ಹಾಗೂ ದಾನಿಗಳಾದ ರಾಮಕೃಷ್ಣ, ತಿರುಮುರುಗನ್ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260419-18-291189929</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>