ಮೈಸೂರು: ಮೈಸೂರು ಜಿಲ್ಲಾ ಫುಟ್ ಬಾಲ್ ಸಂಸ್ಥೆ (ಎಂಡಿಎಫ್ಎ) ಅಧ್ಯಕ್ಷ ಕೆ.ಜಿ.ಸುಬ್ರಮಣ್ಯ ಸ್ವಾಮಿ (62) ಅವರು ಅನಾರೋಗ್ಯದಿಂದ ಸೋಮವಾರ ಇಲ್ಲಿ ನಿಧನರಾದರು.
ಗೋಕುಲಂ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಿತು. ಅವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ‘ಪಪ್ಪಿ’ ಎಂದೇ ಪ್ರಸಿದ್ಧರಾಗಿದ್ದು, 1999ರಿಂದ ಈ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಅವರ ನಿಧನಕ್ಕೆಸಂಸ್ಥೆಯ ಪದಾಧಿಕಾರಿಗಳು ಕಂಬನಿ ಮಿಡಿದಿದ್ದಾರೆ.