ಬೆಂಗಳೂರು: ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಯಾದಗಿರಿ ಜಿಲ್ಲೆಯ ಶಹಾಪುರದ ಅನಿಲ್ ಬಳಗಾರ (35) ಎಂಬಾತನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿ ನಗರದ 54ನೇ ಸಿಸಿಎಚ್ ನ್ಯಾಯಾಲಯ ಆದೇಶ ಹೊರಡಿಸಿದೆ.
2017ರ ಏಪ್ರಿಲ್ 20ರಂದು ನಡೆದಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಂ.ಲತಾ ಕುಮಾರಿ, ಈ ಆದೇಶ ಹೊರಡಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್(ಪಿ.ಪಿ)
ಚಿನ್ನವೆಂಕಟರವಣಪ್ಪ ವಾದಿಸಿದ್ದರು.
ಪ್ರಕರಣದ ವಿವರ: ಬೆಂಗಳೂರಿನ ಗಿರಿನಗರ ಸಮೀಪದ ವೀರಭದ್ರನಗರದಲ್ಲಿ ಪೋಷಕರ ಜತೆಯಲ್ಲಿ ಬಾಲಕಿ ವಾಸವಿದ್ದಳು. ಪಕ್ಕದ ಮನೆಯಲ್ಲೇ ಅಪರಾಧಿ ಅನಿಲ್, ತನ್ನ ಪತ್ನಿ ಜತೆಯಲ್ಲಿ ನೆಲೆಸಿದ್ದ ಎಂದು ಪಿ.ಪಿ. ತಿಳಿಸಿದರು.