ದೆಹಲಿಯ ಗಡಿಯಲ್ಲಿರುವ ಪಂಜಾಬ್ನ ಗ್ರಾಮಗಳಲ್ಲಿ ಕೃಷಿ ತ್ಯಾಜ್ಯವನ್ನು ಸುಡಲಾಗುತ್ತಿದೆ. ಅದರ ಹೊಗೆ ಮತ್ತು ದೀಪಾವಳಿಯಂದು ಸಿಡಿಸಿದ ಹೊಗೆಯು ದೆಹಲಿಯ ಮಂಜಿನಲ್ಲಿ ಸೇರಿಕೊಂಡು ‘ಹೊಂಜು’ ಉಲ್ಬಣಿಸಿದೆ. ಆದ್ದರಿಂದ ನವೆಂಬರ್ 3ರಂದು ಇಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾ ನಡುವಣ ಟ್ವೆಂಟಿ–20 ಪಂದ್ಯವನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು ಎಂದು ಕೆಲವು ಪರಿಸರವಾದಿ ಸಂಘಟನೆಗಳು ಸಲಹೆ ನೀಡಿದ್ದವು. ಮಾಜಿ ಕ್ರಿಕೆಟಿಗ ಮತ್ತು ಸಂಸದ ಗೌತಮ್ ಗಂಭೀರ್ ಕೂಡ ಇದೇ ಮಾತು ಹೇಳಿದ್ದರು.