<p><strong>ಬೆಂಗಳೂರು</strong>: ಭಾರತದ ದಿಗ್ವಿಜಯ್ ಪ್ರತಾಪ್ ಸಿಂಗ್ ಅವರು ಗ್ವಾಲಿಯರ್ ಚಂಬಲ್ ಟೆನಿಸ್ ಅಸೋಸಿಯೇಷನ್ ಕೋರ್ಟ್ನಲ್ಲಿ ನಡೆದ ರೌಂಡ್ಗ್ಲಾಸ್ ಐಟಿಎಫ್ ಪುರುಷರ ವಿಶ್ವ ಟೆನಿಸ್ ಟೂರ್ ಎಂ15 ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದರು.</p><p>ಮೊದಲ ಸೆಟ್ ಅನ್ನು 6–2ರಿಂದ ಗೆದ್ದಿದ್ದ ದಿಗ್ವಿಜಯ್, ಎರಡನೇ ಸೆಟ್ನಲ್ಲಿ 4–0 ಮುನ್ನಡೆಯಲ್ಲಿದ್ದಾಗ ಎದುರಾಳಿ ಆಟಗಾರ ಮಾನ್ ಕೇಶರ್ವಾನಿ ಸ್ಪರ್ಧೆಯಿಂದ ಹಿಂದೆ ಸರಿದರು.</p><p>ದಿಗ್ವಿಜಯ್ ಅವರು ಸೆಮಿಫೈನಲ್ನಲ್ಲಿ 4-6, 6-3, 7-6ರಿಂದ ಅಗ್ರ ಶ್ರೇಯಾಂಕದ ಆರ್ಯನ್ ಶಾ ಅವರಿಗೆ ಆಘಾತ ನೀಡಿದ್ದರು. ಕ್ವಾರ್ಟರ್ ಫೈನಲ್ನಲ್ಲಿ 7-6, 6-2 ಸೆಟ್ಗಳಿಂದ ನಾಲ್ಕನೇ ಶ್ರೇಯಾಂಕದ ಕಜಾಕಸ್ತಾನದ ಗ್ರಿಗೊರಿ ಲೊಮಾಕಿನ್ ಅವರನ್ನು ಸೋಲಿಸಿದ್ದರು.</p><p>ಕಳೆದ ತಿಂಗಳು ಭೋಪಾಲ್ನಲ್ಲಿ ನಡೆದ ಎಂ25 ಟೂರ್ನಿ ಯಲ್ಲಿ ಚಾಂಪಿಯನ್ ಆಗಿದ್ದ ಗ್ವಾಲಿಯರ್ನ ದಿಗ್ವಿಜಯ್ ಅವರಿಗೆ ಇದು ಎರಡನೇ ಪ್ರಶಸ್ತಿಯಾಗಿದೆ. ಅವರು ಭುವನೇಶ್ವರದಲ್ಲಿ ನಡೆದ ಎಂ15 ಟೂರ್ನಿಯಲ್ಲಿ ಫೈನಲ್ಗೆ ತಲುಪಿದ್ದರು. ಪ್ರಶಸ್ತಿ ಸುತ್ತಿನಲ್ಲಿ ಎಸ್.ಡಿ. ಪ್ರಜ್ವಲ್ ದೇವ್ ವಿರುದ್ಧ ಸೋತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಭಾರತದ ದಿಗ್ವಿಜಯ್ ಪ್ರತಾಪ್ ಸಿಂಗ್ ಅವರು ಗ್ವಾಲಿಯರ್ ಚಂಬಲ್ ಟೆನಿಸ್ ಅಸೋಸಿಯೇಷನ್ ಕೋರ್ಟ್ನಲ್ಲಿ ನಡೆದ ರೌಂಡ್ಗ್ಲಾಸ್ ಐಟಿಎಫ್ ಪುರುಷರ ವಿಶ್ವ ಟೆನಿಸ್ ಟೂರ್ ಎಂ15 ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದರು.</p><p>ಮೊದಲ ಸೆಟ್ ಅನ್ನು 6–2ರಿಂದ ಗೆದ್ದಿದ್ದ ದಿಗ್ವಿಜಯ್, ಎರಡನೇ ಸೆಟ್ನಲ್ಲಿ 4–0 ಮುನ್ನಡೆಯಲ್ಲಿದ್ದಾಗ ಎದುರಾಳಿ ಆಟಗಾರ ಮಾನ್ ಕೇಶರ್ವಾನಿ ಸ್ಪರ್ಧೆಯಿಂದ ಹಿಂದೆ ಸರಿದರು.</p><p>ದಿಗ್ವಿಜಯ್ ಅವರು ಸೆಮಿಫೈನಲ್ನಲ್ಲಿ 4-6, 6-3, 7-6ರಿಂದ ಅಗ್ರ ಶ್ರೇಯಾಂಕದ ಆರ್ಯನ್ ಶಾ ಅವರಿಗೆ ಆಘಾತ ನೀಡಿದ್ದರು. ಕ್ವಾರ್ಟರ್ ಫೈನಲ್ನಲ್ಲಿ 7-6, 6-2 ಸೆಟ್ಗಳಿಂದ ನಾಲ್ಕನೇ ಶ್ರೇಯಾಂಕದ ಕಜಾಕಸ್ತಾನದ ಗ್ರಿಗೊರಿ ಲೊಮಾಕಿನ್ ಅವರನ್ನು ಸೋಲಿಸಿದ್ದರು.</p><p>ಕಳೆದ ತಿಂಗಳು ಭೋಪಾಲ್ನಲ್ಲಿ ನಡೆದ ಎಂ25 ಟೂರ್ನಿ ಯಲ್ಲಿ ಚಾಂಪಿಯನ್ ಆಗಿದ್ದ ಗ್ವಾಲಿಯರ್ನ ದಿಗ್ವಿಜಯ್ ಅವರಿಗೆ ಇದು ಎರಡನೇ ಪ್ರಶಸ್ತಿಯಾಗಿದೆ. ಅವರು ಭುವನೇಶ್ವರದಲ್ಲಿ ನಡೆದ ಎಂ15 ಟೂರ್ನಿಯಲ್ಲಿ ಫೈನಲ್ಗೆ ತಲುಪಿದ್ದರು. ಪ್ರಶಸ್ತಿ ಸುತ್ತಿನಲ್ಲಿ ಎಸ್.ಡಿ. ಪ್ರಜ್ವಲ್ ದೇವ್ ವಿರುದ್ಧ ಸೋತಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>