<p><strong>ಮಂಗಳೂರು:</strong> ಮಳೆಮೋಡಗಳು ದಟ್ಟೈಸುತ್ತ ಮುಂಗಾರು ಮಳೆಯ ಸೂಚನೆ ನೀಡುತ್ತಿದ್ದಂತೆ ನಗರದ ತಣ್ಣೀರುಬಾವಿ ಇಕೊ ಬೀಚ್ ಕಡಲತೀರದಲ್ಲಿ ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್ಷಿಪ್ಗೆ ವೇದಿಕೆ ಸಿದ್ಧವಾಗಿದೆ. </p>.<p>ಭಾರತ ಸರ್ಫಿಂಗ್ ಫೆಡರೇಷನ್, ಮಂತ್ರ ಸರ್ಫ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿರುವ ಎನ್ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ನ 7ನೇ ಆವೃತ್ತಿ ಶುಕ್ರವಾರ (ಮೇ 29) ಆರಂಭವಾಗಲಿದ್ದು 31ರ ವರೆಗೆ ಭಾರತದ ಅಗ್ರಮಾನ್ಯ ಸರ್ಫರ್ಗಳ ಜೊತೆ ಈಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವವರು ಕಡಲ ಅಲೆಗಳ ಮೇಲೆ ಪದಕಗಳಿಗಾಗಿ ಸೆಣಸಲಿದ್ದಾರೆ. </p>.<p>ಶಾರ್ಟ್ಬೋರ್ಡ್ ಸರ್ಫಿಂಗ್ ಈ ಬಾರಿ ಏಷ್ಯನ್ ಗೇಮ್ಸ್ನಲ್ಲಿ ಪದಾರ್ಪಣೆ ಮಾಡಲಿದೆ. ಹೀಗಾಗಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶದ ಗುರಿಯೂ ತಣ್ಣೀರುಬಾವಿಯಲ್ಲಿ ಪೈಪೋಟಿಗೆ ಕಾರಣವಾಗಲಿದೆ. ಏಪ್ರಿಲ್ನಲ್ಲಿ ನಡೆದ ಲಿಟಲ್ ಅಂಡಮಾನ್ ಪ್ರೊದಲ್ಲಿ ಮಿಂಚಲು ವಿಫಲರಾಗಿರುವವರು ಮಂಗಳೂರಿನಲ್ಲಿ ತಮ್ಮ ಸಾಮರ್ಥ್ಯ ನಿಕಷಕ್ಕೆ ಒಡ್ಡಲಿದ್ದಾರೆ. </p>.<h2><strong>ಹೊಸ ವಿಭಾಗ ಸೇರ್ಪಡೆ</strong></h2><p>ತಣ್ಣೀರುಬಾವಿಯಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದ ಮುಕ್ತ ಹಾಗೂ 18 ವರ್ಷದೊಳಗಿನರ ವಿಭಾಗಗಳಲ್ಲಿ ತುರುಸಿನ ಸ್ಪರ್ಧೆ ನಿರೀಕ್ಷಿಸಲಾಗಿದೆ. ಈ ಬಾರಿ ಆಯೋಜಕರು 14 ವರ್ಷದೊಳಗಿನವರ ವಿಭಾಗವನ್ನು ಸೇರ್ಪಡೆಗೊಳಿಸಿದ್ದಾರೆ. </p>.<p>ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಮುರಡಿ ತಾಂಡಾದಲ್ಲಿ ಕುಟುಂಬದ ಬೇರುಗಳನ್ನು ಹೊಂದಿರುವ, ಕೇರಳದ ರಮೇಶ ಬೂದಿಹಾಳ ಈ ಬಾರಿಯ ಇಂಡಿಯನ್ ಓಪನ್ನ ಪ್ರಮುಖ ಆಕರ್ಷಣೆ. ತಲಾ 2 ಬಾರಿ ಇಂಡಿಯನ್ ಓಪನ್ ಮತ್ತು ಅಂತರರಾಷ್ಟ್ರೀಯ ಸರ್ಫಿಂಗ್ ಫೆಸ್ಟಿವಲ್ನ ಚಾಂಪಿಯನ್ ರಮೇಶ ಕಳೆದ ವರ್ಷ ಮಹಾಬಲಿಪುರಂನಲ್ಲಿ ನಡೆದ ಏಷ್ಯನ್ ಸರ್ಫಿಂಗ್ ಚಾಂಪಿಯನ್ಷಿಪ್ನಲ್ಲಿ ಕಂಚು ಗೆದ್ದು ದೇಶಕ್ಕೆ ಮೊದಲ ಪದಕದ ಕಾಣಿಕೆ ನೀಡಿದ್ದರು. </p>.<p>ಲಿಟಲ್ ಅಂಡಮಾನ್ ಪ್ರೊದಲ್ಲಿ ಪುರುಷರ ವಿಭಾಗದ ಪ್ರಶಸ್ತಿ ಗೆದ್ದಿರುವ ತಮಿಳುನಾಡಿನ ಸವಿರಾಜ್ ಬಾಬು ಮತ್ತು ಏಷ್ಯನ್ ಸರ್ಫಿಂಗ್ ಚಾಂಪಿಯನ್ಷಿಪ್ನ 18 ವರ್ಷದೊಳಗಿನವರ ವಿಭಾಗದಲ್ಲಿ ಸೆಮಿಫೈನಲ್ಗೆ ಲಗ್ಗೆ ಇಟ್ಟ ಯುವ ಸರ್ಫರ್ ಕಿಶೋರ್ ಕುಮಾರ್, ಕಠಿಣ ಪರಿಸ್ಥಿತಿಯಲ್ಲೂ ತಾಂತ್ರಿಕ ಕೌಶಲ ಮೆರೆಯುವ ಶ್ರೀಕಾಂತ್ ಡಿ ಕೂಡ ಗಮನ ಸೆಳೆಯಲಿದ್ದಾರೆ. </p>.<p>ಮಹಿಳೆಯರ ವಿಭಾಗದಲ್ಲಿ ತಮಿಳುನಾಡಿನ ಕಮಲಿ, ಗೋವಾದ ಸುಗರ್ ಶಾಂತಿ ಬನಾರಸೆ ಪ್ರಮುಖ ಸ್ಪರ್ಧಿಗಳು. ಇವರಿಬ್ಬರಿಗೂ ಕರ್ನಾಟಕದ ಕಡಲ ತೀರ ಹೊಸತೇನಲ್ಲ. ಇಲ್ಲಿ ನಡೆದ ಹಲವಾರು ಚಾಂಪಿಯನ್ಷಿಪ್ಗಳಲ್ಲಿ ಪಾಲ್ಗೊಂಡು ಅಲೆಗಳ ಅಬ್ಬರವನ್ನು ಅರಿತುಕೊಂಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ಮಳೆಮೋಡಗಳು ದಟ್ಟೈಸುತ್ತ ಮುಂಗಾರು ಮಳೆಯ ಸೂಚನೆ ನೀಡುತ್ತಿದ್ದಂತೆ ನಗರದ ತಣ್ಣೀರುಬಾವಿ ಇಕೊ ಬೀಚ್ ಕಡಲತೀರದಲ್ಲಿ ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್ಷಿಪ್ಗೆ ವೇದಿಕೆ ಸಿದ್ಧವಾಗಿದೆ. </p>.<p>ಭಾರತ ಸರ್ಫಿಂಗ್ ಫೆಡರೇಷನ್, ಮಂತ್ರ ಸರ್ಫ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿರುವ ಎನ್ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ನ 7ನೇ ಆವೃತ್ತಿ ಶುಕ್ರವಾರ (ಮೇ 29) ಆರಂಭವಾಗಲಿದ್ದು 31ರ ವರೆಗೆ ಭಾರತದ ಅಗ್ರಮಾನ್ಯ ಸರ್ಫರ್ಗಳ ಜೊತೆ ಈಚೆಗೆ ಪ್ರವರ್ಧಮಾನಕ್ಕೆ ಬರುತ್ತಿರುವವರು ಕಡಲ ಅಲೆಗಳ ಮೇಲೆ ಪದಕಗಳಿಗಾಗಿ ಸೆಣಸಲಿದ್ದಾರೆ. </p>.<p>ಶಾರ್ಟ್ಬೋರ್ಡ್ ಸರ್ಫಿಂಗ್ ಈ ಬಾರಿ ಏಷ್ಯನ್ ಗೇಮ್ಸ್ನಲ್ಲಿ ಪದಾರ್ಪಣೆ ಮಾಡಲಿದೆ. ಹೀಗಾಗಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶದ ಗುರಿಯೂ ತಣ್ಣೀರುಬಾವಿಯಲ್ಲಿ ಪೈಪೋಟಿಗೆ ಕಾರಣವಾಗಲಿದೆ. ಏಪ್ರಿಲ್ನಲ್ಲಿ ನಡೆದ ಲಿಟಲ್ ಅಂಡಮಾನ್ ಪ್ರೊದಲ್ಲಿ ಮಿಂಚಲು ವಿಫಲರಾಗಿರುವವರು ಮಂಗಳೂರಿನಲ್ಲಿ ತಮ್ಮ ಸಾಮರ್ಥ್ಯ ನಿಕಷಕ್ಕೆ ಒಡ್ಡಲಿದ್ದಾರೆ. </p>.<h2><strong>ಹೊಸ ವಿಭಾಗ ಸೇರ್ಪಡೆ</strong></h2><p>ತಣ್ಣೀರುಬಾವಿಯಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದ ಮುಕ್ತ ಹಾಗೂ 18 ವರ್ಷದೊಳಗಿನರ ವಿಭಾಗಗಳಲ್ಲಿ ತುರುಸಿನ ಸ್ಪರ್ಧೆ ನಿರೀಕ್ಷಿಸಲಾಗಿದೆ. ಈ ಬಾರಿ ಆಯೋಜಕರು 14 ವರ್ಷದೊಳಗಿನವರ ವಿಭಾಗವನ್ನು ಸೇರ್ಪಡೆಗೊಳಿಸಿದ್ದಾರೆ. </p>.<p>ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ಮುರಡಿ ತಾಂಡಾದಲ್ಲಿ ಕುಟುಂಬದ ಬೇರುಗಳನ್ನು ಹೊಂದಿರುವ, ಕೇರಳದ ರಮೇಶ ಬೂದಿಹಾಳ ಈ ಬಾರಿಯ ಇಂಡಿಯನ್ ಓಪನ್ನ ಪ್ರಮುಖ ಆಕರ್ಷಣೆ. ತಲಾ 2 ಬಾರಿ ಇಂಡಿಯನ್ ಓಪನ್ ಮತ್ತು ಅಂತರರಾಷ್ಟ್ರೀಯ ಸರ್ಫಿಂಗ್ ಫೆಸ್ಟಿವಲ್ನ ಚಾಂಪಿಯನ್ ರಮೇಶ ಕಳೆದ ವರ್ಷ ಮಹಾಬಲಿಪುರಂನಲ್ಲಿ ನಡೆದ ಏಷ್ಯನ್ ಸರ್ಫಿಂಗ್ ಚಾಂಪಿಯನ್ಷಿಪ್ನಲ್ಲಿ ಕಂಚು ಗೆದ್ದು ದೇಶಕ್ಕೆ ಮೊದಲ ಪದಕದ ಕಾಣಿಕೆ ನೀಡಿದ್ದರು. </p>.<p>ಲಿಟಲ್ ಅಂಡಮಾನ್ ಪ್ರೊದಲ್ಲಿ ಪುರುಷರ ವಿಭಾಗದ ಪ್ರಶಸ್ತಿ ಗೆದ್ದಿರುವ ತಮಿಳುನಾಡಿನ ಸವಿರಾಜ್ ಬಾಬು ಮತ್ತು ಏಷ್ಯನ್ ಸರ್ಫಿಂಗ್ ಚಾಂಪಿಯನ್ಷಿಪ್ನ 18 ವರ್ಷದೊಳಗಿನವರ ವಿಭಾಗದಲ್ಲಿ ಸೆಮಿಫೈನಲ್ಗೆ ಲಗ್ಗೆ ಇಟ್ಟ ಯುವ ಸರ್ಫರ್ ಕಿಶೋರ್ ಕುಮಾರ್, ಕಠಿಣ ಪರಿಸ್ಥಿತಿಯಲ್ಲೂ ತಾಂತ್ರಿಕ ಕೌಶಲ ಮೆರೆಯುವ ಶ್ರೀಕಾಂತ್ ಡಿ ಕೂಡ ಗಮನ ಸೆಳೆಯಲಿದ್ದಾರೆ. </p>.<p>ಮಹಿಳೆಯರ ವಿಭಾಗದಲ್ಲಿ ತಮಿಳುನಾಡಿನ ಕಮಲಿ, ಗೋವಾದ ಸುಗರ್ ಶಾಂತಿ ಬನಾರಸೆ ಪ್ರಮುಖ ಸ್ಪರ್ಧಿಗಳು. ಇವರಿಬ್ಬರಿಗೂ ಕರ್ನಾಟಕದ ಕಡಲ ತೀರ ಹೊಸತೇನಲ್ಲ. ಇಲ್ಲಿ ನಡೆದ ಹಲವಾರು ಚಾಂಪಿಯನ್ಷಿಪ್ಗಳಲ್ಲಿ ಪಾಲ್ಗೊಂಡು ಅಲೆಗಳ ಅಬ್ಬರವನ್ನು ಅರಿತುಕೊಂಡಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>