<p><strong>ರಾಯಪುರ</strong>: ಕರ್ನಾಟಕದ ರೀತುಶ್ರೀ ಮತ್ತು ನಾಗಿಣಿ ಅವರು ಖೇಲೊ ಇಂಡಿಯಾ ಆದಿವಾಸಿ ಕ್ರೀಡಾಕೂಟದ ಅಥ್ಲೆಟಿಕ್ಸ್ನಲ್ಲಿ ಗುರುವಾರ ತಮ್ಮ ಎರಡನೇ ಚಿನ್ನ ಗೆದ್ದುಕೊಂಡರು. ಆತಿಥೇಯ ಛತ್ತೀಸಗಢ ತಂಡವು ಫೈನಲ್ನಲ್ಲಿ 1–0 ಗೋಲಿನಿಂದ ಜಾರ್ಖಂಡ್ ತಂಡವನ್ನು ಸೋಲಿಸಿ ಮಹಿಳೆಯರ ವಿಭಾಗದ ಫುಟ್ಬಾಲ್ ಚಿನ್ನ ಗೆದ್ದುಕೊಂಡಿತು.</p>.<p>ಛತ್ತೀಸಗಢ ತಂಡದಲ್ಲಿದ್ದ ಏಕೈಕ ಅಂತರರಾಷ್ಟ್ರೀಯ ಆಟಗಾರ್ತಿ ಹಾಗೂ ನಾಯಕಿ ಕಿರಣ್ ಪಿಸ್ದಾ ಗಳಿಸಿದ ಗೋಲು ನಿರ್ಣಾಯಕವಾಯಿತು.</p>.<p>ಜಗದಾಳಪುರದ ಕ್ರೀಡಾ ಪರಿಸರ್ ಸಂಕೀರ್ಣದಲ್ಲಿ ನಡೆಯುತ್ತಿರುವ ಅಥ್ಲೆಟಿಕ್ ಕೂಟದಲ್ಲಿ ಕರ್ನಾಟಕದ ರೀತುಶ್ರೀ 200 ಮೀ. ಓಟವನ್ನು 25.87 ಸೆ.ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು. ಈ ಮೊದಲು ಅವರು 400 ಮೀ. ಓಟದಲ್ಲಿ ವಿಜಯಿಯಾಗಿದ್ದರು. </p>.<p>ಬುಧವಾರ 800 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದ ನಾಗಿಣಿ 1,500 ಮೀ. ಓಟದಲ್ಲೂ ಮೊದಲಿಗರಾದರು. ಅವರು 4ನಿ.43.87 ಸೆ.ಗಳಲ್ಲಿ ಗುರಿತಲುಪಿದರು. ಕರ್ನಾಟಕ ಒಟ್ಟು 23 ಚಿನ್ನ ಗೆದ್ದಂತಾಗಿದೆ. ಜೊತೆಗೆ 8 ಬೆಳ್ಳಿ, 7 ಕಂಚಿನ ಪದಕ ಸೇರಿದಂತೆ ಒಟ್ಟು 38 ಪದಕಗಳನ್ನು ಬಾಚಿ ಪದಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.</p>.<p>ಶುಕ್ರವಾರ ಈ ಹತ್ತು ದಿನಗಳ ಕ್ರೀಡಾಕೂಟಕ್ಕೆ ತೆರೆ ಬೀಳಲಿದೆ.</p>.<p>ಅಥ್ಲೆಟಿಕ್ಸ್ನಲ್ಲಿ ಹೆಚ್ಚಿನ ಪದಕ ಬಾಚಿರುವ ಒಡಿಶಾ ತಂಡ ಎರಡನೇ ಸ್ಥಾನದಲ್ಲಿದ್ದು, 20 ಚಿನ್ನ, 13 ಬೆಳ್ಳಿ, 21 ಕಂಚಿನ ಪದಕ ಗಳಿಸಿ ಕರ್ನಾಟಕಕ್ಕೆ ಪೈಪೋಟಿ ಒಡ್ಡಿದೆ. ಜಾರ್ಖಂಡ್ (14 ಚಿನ್ನ, 7 ಬೆಳ್ಳಿ, 11 ಕಂಚು) ಮೂರನೇ ಹಾಗೂ ಆತಿಥೇಯ ಛತ್ತೀಸಗಢ (3 ಚಿನ್ನ, 9 ಬೆಳ್ಳಿ, 6 ಕಂಚು) ಒಂಬತ್ತನೇ ಸ್ಥಾನದಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಪುರ</strong>: ಕರ್ನಾಟಕದ ರೀತುಶ್ರೀ ಮತ್ತು ನಾಗಿಣಿ ಅವರು ಖೇಲೊ ಇಂಡಿಯಾ ಆದಿವಾಸಿ ಕ್ರೀಡಾಕೂಟದ ಅಥ್ಲೆಟಿಕ್ಸ್ನಲ್ಲಿ ಗುರುವಾರ ತಮ್ಮ ಎರಡನೇ ಚಿನ್ನ ಗೆದ್ದುಕೊಂಡರು. ಆತಿಥೇಯ ಛತ್ತೀಸಗಢ ತಂಡವು ಫೈನಲ್ನಲ್ಲಿ 1–0 ಗೋಲಿನಿಂದ ಜಾರ್ಖಂಡ್ ತಂಡವನ್ನು ಸೋಲಿಸಿ ಮಹಿಳೆಯರ ವಿಭಾಗದ ಫುಟ್ಬಾಲ್ ಚಿನ್ನ ಗೆದ್ದುಕೊಂಡಿತು.</p>.<p>ಛತ್ತೀಸಗಢ ತಂಡದಲ್ಲಿದ್ದ ಏಕೈಕ ಅಂತರರಾಷ್ಟ್ರೀಯ ಆಟಗಾರ್ತಿ ಹಾಗೂ ನಾಯಕಿ ಕಿರಣ್ ಪಿಸ್ದಾ ಗಳಿಸಿದ ಗೋಲು ನಿರ್ಣಾಯಕವಾಯಿತು.</p>.<p>ಜಗದಾಳಪುರದ ಕ್ರೀಡಾ ಪರಿಸರ್ ಸಂಕೀರ್ಣದಲ್ಲಿ ನಡೆಯುತ್ತಿರುವ ಅಥ್ಲೆಟಿಕ್ ಕೂಟದಲ್ಲಿ ಕರ್ನಾಟಕದ ರೀತುಶ್ರೀ 200 ಮೀ. ಓಟವನ್ನು 25.87 ಸೆ.ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು. ಈ ಮೊದಲು ಅವರು 400 ಮೀ. ಓಟದಲ್ಲಿ ವಿಜಯಿಯಾಗಿದ್ದರು. </p>.<p>ಬುಧವಾರ 800 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದ ನಾಗಿಣಿ 1,500 ಮೀ. ಓಟದಲ್ಲೂ ಮೊದಲಿಗರಾದರು. ಅವರು 4ನಿ.43.87 ಸೆ.ಗಳಲ್ಲಿ ಗುರಿತಲುಪಿದರು. ಕರ್ನಾಟಕ ಒಟ್ಟು 23 ಚಿನ್ನ ಗೆದ್ದಂತಾಗಿದೆ. ಜೊತೆಗೆ 8 ಬೆಳ್ಳಿ, 7 ಕಂಚಿನ ಪದಕ ಸೇರಿದಂತೆ ಒಟ್ಟು 38 ಪದಕಗಳನ್ನು ಬಾಚಿ ಪದಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.</p>.<p>ಶುಕ್ರವಾರ ಈ ಹತ್ತು ದಿನಗಳ ಕ್ರೀಡಾಕೂಟಕ್ಕೆ ತೆರೆ ಬೀಳಲಿದೆ.</p>.<p>ಅಥ್ಲೆಟಿಕ್ಸ್ನಲ್ಲಿ ಹೆಚ್ಚಿನ ಪದಕ ಬಾಚಿರುವ ಒಡಿಶಾ ತಂಡ ಎರಡನೇ ಸ್ಥಾನದಲ್ಲಿದ್ದು, 20 ಚಿನ್ನ, 13 ಬೆಳ್ಳಿ, 21 ಕಂಚಿನ ಪದಕ ಗಳಿಸಿ ಕರ್ನಾಟಕಕ್ಕೆ ಪೈಪೋಟಿ ಒಡ್ಡಿದೆ. ಜಾರ್ಖಂಡ್ (14 ಚಿನ್ನ, 7 ಬೆಳ್ಳಿ, 11 ಕಂಚು) ಮೂರನೇ ಹಾಗೂ ಆತಿಥೇಯ ಛತ್ತೀಸಗಢ (3 ಚಿನ್ನ, 9 ಬೆಳ್ಳಿ, 6 ಕಂಚು) ಒಂಬತ್ತನೇ ಸ್ಥಾನದಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>