<p>ಮೈಸೂರು: ಬೆಂಗಳೂರಿನ ಆದ್ಯ ಗೌಡ, ಶ್ರೇಯಾ ರಾಜೇಶ್ ಅವರು ಭಾನುವಾರ ಇಲ್ಲಿ ಮುಕ್ತಾಯಗೊಂಡ ಕರ್ನಾಟಕ ರಾಜ್ಯ 13 ವರ್ಷದೊಳಗಿನವರ ಚೆಸ್ ಟೂರ್ನಿಯ ಮುಕ್ತ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.</p>.<p>‘ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ’ಯು ಮೈಸೂರು ಚೆಸ್ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ನಡೆದ 9 ಸುತ್ತುಗಳಲ್ಲಿ ಪಾರಮ್ಯ ಮೆರೆದ ಈ ಇಬ್ಬರೂ ಆಟಗಾರ್ತಿಯರು ಕ್ರಮವಾಗಿ 8 ಮತ್ತು 7.5 ಅಂಕ ಗಳಿಸಿ ಟ್ರೋಫಿಗೆ ಮುತ್ತಿಟ್ಟರು.</p>.<p>ಮುಕ್ತ ವಿಭಾಗದಲ್ಲಿ ಸ್ಪರ್ಧಿಸಿದ್ದ 260 ಆಟಗಾರರನ್ನು ಹಿಂದಿಕ್ಕಿದ ಆದ್ಯ ಗೌಡ, ಸಮೀಪದ ಸ್ಪರ್ಧಿ ಇಶಾನ್ ಬನ್ಸಾಲಿ ಅವರಿಗಿಂತ ಅರ್ಧ ಅಂಕ ಹೆಚ್ಚು ಪಡೆದರು. ಬೆಂಗಳೂರಿನವರೇ ಆದ ಇಶಾನ್ (7.5) ರನ್ನರ್ಅಪ್ ಆದರು.</p>.<p>ಬಾಲಕಿಯರ ವಿಭಾಗದ ಸ್ಪರ್ಧೆಯಲ್ಲಿ ಇಂದೂ ಶೀತಲ್ ಅವರನ್ನು ಟೈಬ್ರೇಕರ್ನಲ್ಲಿ ಸೋಲಿಸಿದ ಬೆಂಗಳೂರು ನಗರದ ಶ್ರೇಯಾ ರಾಜೇಶ್ ಚಾಂಪಿಯನ್ ಆದರು. ಇಬ್ಬರೂ 9 ಸುತ್ತುಗಳಿಂದ ತಲಾ 7.5 ಪಾಯಿಂಟ್ ಗಳಿಸಿದ್ದರು.</p>.<p>ಎರಡೂ ವಿಭಾಗದ ನಾಲ್ವರು ವಿಜೇತರಿಗೆ ₹ 1 ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಯಿತು. ಇವರು ಸೆಪ್ಟೆಂಬರ್ನಲ್ಲಿ ಪುದುಚೇರಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-43-250867351</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ಬೆಂಗಳೂರಿನ ಆದ್ಯ ಗೌಡ, ಶ್ರೇಯಾ ರಾಜೇಶ್ ಅವರು ಭಾನುವಾರ ಇಲ್ಲಿ ಮುಕ್ತಾಯಗೊಂಡ ಕರ್ನಾಟಕ ರಾಜ್ಯ 13 ವರ್ಷದೊಳಗಿನವರ ಚೆಸ್ ಟೂರ್ನಿಯ ಮುಕ್ತ ಹಾಗೂ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆದರು.</p>.<p>‘ಕರ್ನಾಟಕ ರಾಜ್ಯ ಚೆಸ್ ಸಂಸ್ಥೆ’ಯು ಮೈಸೂರು ಚೆಸ್ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ನಡೆದ 9 ಸುತ್ತುಗಳಲ್ಲಿ ಪಾರಮ್ಯ ಮೆರೆದ ಈ ಇಬ್ಬರೂ ಆಟಗಾರ್ತಿಯರು ಕ್ರಮವಾಗಿ 8 ಮತ್ತು 7.5 ಅಂಕ ಗಳಿಸಿ ಟ್ರೋಫಿಗೆ ಮುತ್ತಿಟ್ಟರು.</p>.<p>ಮುಕ್ತ ವಿಭಾಗದಲ್ಲಿ ಸ್ಪರ್ಧಿಸಿದ್ದ 260 ಆಟಗಾರರನ್ನು ಹಿಂದಿಕ್ಕಿದ ಆದ್ಯ ಗೌಡ, ಸಮೀಪದ ಸ್ಪರ್ಧಿ ಇಶಾನ್ ಬನ್ಸಾಲಿ ಅವರಿಗಿಂತ ಅರ್ಧ ಅಂಕ ಹೆಚ್ಚು ಪಡೆದರು. ಬೆಂಗಳೂರಿನವರೇ ಆದ ಇಶಾನ್ (7.5) ರನ್ನರ್ಅಪ್ ಆದರು.</p>.<p>ಬಾಲಕಿಯರ ವಿಭಾಗದ ಸ್ಪರ್ಧೆಯಲ್ಲಿ ಇಂದೂ ಶೀತಲ್ ಅವರನ್ನು ಟೈಬ್ರೇಕರ್ನಲ್ಲಿ ಸೋಲಿಸಿದ ಬೆಂಗಳೂರು ನಗರದ ಶ್ರೇಯಾ ರಾಜೇಶ್ ಚಾಂಪಿಯನ್ ಆದರು. ಇಬ್ಬರೂ 9 ಸುತ್ತುಗಳಿಂದ ತಲಾ 7.5 ಪಾಯಿಂಟ್ ಗಳಿಸಿದ್ದರು.</p>.<p>ಎರಡೂ ವಿಭಾಗದ ನಾಲ್ವರು ವಿಜೇತರಿಗೆ ₹ 1 ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಯಿತು. ಇವರು ಸೆಪ್ಟೆಂಬರ್ನಲ್ಲಿ ಪುದುಚೇರಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260428-43-250867351</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>