<p>ನವದೆಹಲಿ (ಪಿಟಿಐ): ಒಡಿಶಾ ಓಪನ್ ಚೆಸ್ ಟೂರ್ನಿ ಗೆದ್ದುಕೊಂಡಿರುವುದಕ್ಕೆ ಗ್ರ್ಯಾಂಡ್ಮಾಸ್ಟರ್ ಅಭಿಜಿತ್ ಗುಪ್ತಾ ಅವರಿಗೆ ಸಲ್ಲಬೇಕಾಗಿ ರುವ ಬಹುಮಾನ ಹಣವನ್ನು ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಖಿಲ ಭಾರತ ಚೆಸ್ ಫೆಡರೇಷನ್ ಶನಿವಾರ ಭರವಸೆ ನೀಡಿದೆ.</p>.<p>ಜನವರಿಯಲ್ಲಿ ನಡೆದಿದ್ದ ಈ ಟೂರ್ನಿಯಲ್ಲಿ ಪ್ರಶಸ್ತಿ ಬಹುಮಾನವಾದ ₹5.5 ಲಕ್ಷ ಬಹುಮಾನ ಮೊತ್ತವನ್ನು ಆಯೋಜಕ ಒಡಿಶಾ ಚೆಸ್ ಸಂಸ್ಥೆ ಬಾಕಿ ಉಳಿಸಿಕೊಂಡಿದೆ. ಅದನ್ನು ಕೊಡಿಸಲು ನೆರವಾಗುವಂತೆ ಗುಪ್ತಾ ಅವರು ಕೇಂದ್ರ ಕ್ರೀಡಾ ಸಚಿವಾಲಯದ ನೆರವು ಕೋರಿದ್ದರು.</p>.<p>‘ಅಖಿಲ ಭಾರತ ಚೆಸ್ ಫೆಡರೇಷನ್ಗೆ ನಾಲ್ಕು ತಿಂಗಳಿಂದ ಪದೇ ಪದೇ ಪತ್ರ ಬರೆದಿದ್ದೇನೆ. ಇದುವರೆಗೂ ಬಹುಮಾನ ಮೊತ್ತ ಬಂದಿಲ್ಲ. ಈ ಬಗ್ಗೆ ಗಮನಹರಿಸಿ ಆಟಗಾರರಿಗೆ ಬರಬೇಕಾದ ಹಣಕೊಡಿಸುವುವಂತೆ’ 36 ವರ್ಷ ವಯಸ್ಸಿನ ಆಟಗಾರ ‘ಎಕ್ಸ್’ ಮೂಲಕ ಸಚಿವಾಲಯಕ್ಕೆ ಮನವಿ ಮಾಡಿದ್ದರು.</p>.<p>‘ಸಮಸ್ಯೆ ಬಗೆಹರಿಸಲಾಗುವುದು ಎಂದು ಎಐಸಿಎಫ್ ಅಧ್ಯಕ್ಷ ನಿತಿನ್ ನಾರಂಗ್ ಅವರು ತಮಗೆ ಭರವಸೆ ನೀಡಿದ್ದಾರೆ’ ಎಂದು ಅಭಿಜಿತ್ ನಂತರ ಇನ್ನೊಂದು ಪೋಸ್ಟ್ ಹಾಕಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-51-1138858327</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ಒಡಿಶಾ ಓಪನ್ ಚೆಸ್ ಟೂರ್ನಿ ಗೆದ್ದುಕೊಂಡಿರುವುದಕ್ಕೆ ಗ್ರ್ಯಾಂಡ್ಮಾಸ್ಟರ್ ಅಭಿಜಿತ್ ಗುಪ್ತಾ ಅವರಿಗೆ ಸಲ್ಲಬೇಕಾಗಿ ರುವ ಬಹುಮಾನ ಹಣವನ್ನು ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಖಿಲ ಭಾರತ ಚೆಸ್ ಫೆಡರೇಷನ್ ಶನಿವಾರ ಭರವಸೆ ನೀಡಿದೆ.</p>.<p>ಜನವರಿಯಲ್ಲಿ ನಡೆದಿದ್ದ ಈ ಟೂರ್ನಿಯಲ್ಲಿ ಪ್ರಶಸ್ತಿ ಬಹುಮಾನವಾದ ₹5.5 ಲಕ್ಷ ಬಹುಮಾನ ಮೊತ್ತವನ್ನು ಆಯೋಜಕ ಒಡಿಶಾ ಚೆಸ್ ಸಂಸ್ಥೆ ಬಾಕಿ ಉಳಿಸಿಕೊಂಡಿದೆ. ಅದನ್ನು ಕೊಡಿಸಲು ನೆರವಾಗುವಂತೆ ಗುಪ್ತಾ ಅವರು ಕೇಂದ್ರ ಕ್ರೀಡಾ ಸಚಿವಾಲಯದ ನೆರವು ಕೋರಿದ್ದರು.</p>.<p>‘ಅಖಿಲ ಭಾರತ ಚೆಸ್ ಫೆಡರೇಷನ್ಗೆ ನಾಲ್ಕು ತಿಂಗಳಿಂದ ಪದೇ ಪದೇ ಪತ್ರ ಬರೆದಿದ್ದೇನೆ. ಇದುವರೆಗೂ ಬಹುಮಾನ ಮೊತ್ತ ಬಂದಿಲ್ಲ. ಈ ಬಗ್ಗೆ ಗಮನಹರಿಸಿ ಆಟಗಾರರಿಗೆ ಬರಬೇಕಾದ ಹಣಕೊಡಿಸುವುವಂತೆ’ 36 ವರ್ಷ ವಯಸ್ಸಿನ ಆಟಗಾರ ‘ಎಕ್ಸ್’ ಮೂಲಕ ಸಚಿವಾಲಯಕ್ಕೆ ಮನವಿ ಮಾಡಿದ್ದರು.</p>.<p>‘ಸಮಸ್ಯೆ ಬಗೆಹರಿಸಲಾಗುವುದು ಎಂದು ಎಐಸಿಎಫ್ ಅಧ್ಯಕ್ಷ ನಿತಿನ್ ನಾರಂಗ್ ಅವರು ತಮಗೆ ಭರವಸೆ ನೀಡಿದ್ದಾರೆ’ ಎಂದು ಅಭಿಜಿತ್ ನಂತರ ಇನ್ನೊಂದು ಪೋಸ್ಟ್ ಹಾಕಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260510-51-1138858327</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>