<p>ಬೆಳ್ತಂಗಡಿ: ಆಳ್ವಾಸ್ ಕಾಲೇಜಿನ ಪುರುಷರ ಮತ್ತು ಮಹಿಳೆಯರ ತಂಡದ ವರು ಮಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾರಮ್ಯ ಮುಂದುವರಿಸಿದ್ದಾರೆ.</p>.<p>ಇಲ್ಲಿನ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ ಎರಡೂ ತಂಡಗಳು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಪುರುಷರ ತಂಡ ಸತತ 22ನೇ ಬಾರಿ ಮತ್ತು ಮಹಿಳೆಯರ ತಂಡ 21ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ ಎಂದು ಸಂಘಟಕರು ತಿಳಿಸಿದ್ದಾರೆ.</p>.<p>ಫೈನಲ್ ಪಂದ್ಯದಲ್ಲಿ ಆಳ್ವಾಸ್ ಪುರುಷರ ತಂಡ ಕಾರ್ಕಳದ ಶ್ರೀ ಭುವ ನೇಂದ್ರ ಕಾಲೇಜು ತಂಡವನ್ನು 35-12, 35-6ರಲ್ಲಿ ಮಣಿಸಿದರೆ ಮಹಿಳೆಯರ ವಿಭಾಗದಲ್ಲಿ ಕಟೀಲು ಎಸ್ಡಿಪಿಟಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಆಳ್ವಾಸ್ 35-9, 35- 8ರಲ್ಲಿ ಮಣಿಸಿತು. ಪುರುಷರ ವಿಭಾಗದ ಮೂರನೇ ಸ್ಥಾನ ಮಂಗಳೂರು ವಿವಿ ಕ್ಯಾಂಪಸ್ ತಂಡ ಗಳಿಸಿದರೆ ಮಹಿಳೆಯರ ವಿಭಾಗದ ಮೂರನೇ ಸ್ಥಾನ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು ತಂಡ ಪಡೆಯಿತು. ಆತಿಥೇಯ ಸೇಕ್ರೆಡ್ ಹಾರ್ಟ್ ಕಾಲೇಜು ಎರಡೂ ವಿಭಾಗಗಳಲ್ಲಿ 4ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿತು.</p>.<p>ಪುರುಷರ ವಿಭಾಗದ ಉತ್ತಮ ಅಟ್ಯಾಕರ್ ಆಗಿ ಆಳ್ವಾಸ್ನ ಆಕಾಶ್, ಉತ್ತಮ ಡಿಫೆಂಡರ್ ಆಗಿ ಶ್ರೀಭುವನೇಂದ್ರ ಕಾಲೇಜಿನ ನಿಶಾಂತ್, ಉತ್ತಮ ಆಲ್ರೌಂಡರ್ ಆಗಿ ಆಳ್ವಾಸ್ನ ನಂದಕುಮಾರ್ ಆಯ್ಕೆಯಾದರು. ಮಹಿಳೆಯರ ವಿಭಾಗದಲ್ಲಿ ಈ ಮೂರು ಬಹುಮಾನಗಳು ಕ್ರಮವಾಗಿ ಆಳ್ವಾಸ್ನ ಗೀತಾ, ಕಟೀಲು ಕಾಲೇಜಿನ ಶಮಿತಾ ಮತ್ತು ಆಳ್ವಾಸ್ನ ತನುಶ್ರೀ ಪಾಲಾಯಿತು.</p>.<p>ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕ ಫಾ. ಸ್ಟ್ಯಾನಿ ಗೋವಿಯಸ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.</p>.<p>ಸೇಕ್ರೆಡ್ ಹಾರ್ಟ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜೋಸೆಫ್ ಎನ್.ಎಂ., ಪ್ರಾಂಶುಪಾಲ ಪ್ರೊ ಅಲೆಕ್ಸ್ ಐವನ್ ಸಿಕ್ವೇರಾ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರಕಾಶ್ ಡಿಸೋಜ, ಪ್ರಮುಖರಾದ ಪ್ರೊ ಮ್ಯಾಕ್ಸಿಮ್ ಕಾರ್ಲ್, ಸೇಸಪ್ಪ ಗೌಡ, ಪ್ರವೀಣ್ ಕುಮಾರ್ ಕೆ, ಆಲ್ಬರ್ಟ್ ಮೊರಾಸ್, ಜೈನುದ್ದಿನ್, ಈಶ್ವರ್ ಗೌಡ, ಪ್ರೊ ನೆಲ್ಸನ್ ಮೋನಿಸ್ ಪಾಲ್ಗೊಂಡಿದ್ದರು. ಶಾಸಕ ಹರೀಶ್ ಪೂಂಜ ಟೂರ್ನಿಗೆ ಚಾಲನೆ ನೀಡಿದ್ದರು. ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ದೈಹಿಕ ಶಿಕ್ಷಣ ನಿರ್ದೇಶಕ ಕರುಣಾಕರ್ ಶೆಟ್ಟಿ, ಪ್ರೊ ರಾಜನ್ ವಿ.ಎನ್, ಫಾ.ಲ್ಯಾರಿ ಪಿಂಟೊ, ಫಾ ದೀಪಕ್ ಡೇಸ, ಸೂರಜ್ ಚಾರ್ಲ್ಸ್, ನೆಲ್ಸನ್ ಲೆಸ್ರಾದೊ, ವಿಲ್ಸನ್ ರೂಪೇಶ್ ಮೊರಾಸ್ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-29-1819703358</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಳ್ತಂಗಡಿ: ಆಳ್ವಾಸ್ ಕಾಲೇಜಿನ ಪುರುಷರ ಮತ್ತು ಮಹಿಳೆಯರ ತಂಡದ ವರು ಮಂಗಳೂರು ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾರಮ್ಯ ಮುಂದುವರಿಸಿದ್ದಾರೆ.</p>.<p>ಇಲ್ಲಿನ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ ಎರಡೂ ತಂಡಗಳು ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಪುರುಷರ ತಂಡ ಸತತ 22ನೇ ಬಾರಿ ಮತ್ತು ಮಹಿಳೆಯರ ತಂಡ 21ನೇ ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ ಎಂದು ಸಂಘಟಕರು ತಿಳಿಸಿದ್ದಾರೆ.</p>.<p>ಫೈನಲ್ ಪಂದ್ಯದಲ್ಲಿ ಆಳ್ವಾಸ್ ಪುರುಷರ ತಂಡ ಕಾರ್ಕಳದ ಶ್ರೀ ಭುವ ನೇಂದ್ರ ಕಾಲೇಜು ತಂಡವನ್ನು 35-12, 35-6ರಲ್ಲಿ ಮಣಿಸಿದರೆ ಮಹಿಳೆಯರ ವಿಭಾಗದಲ್ಲಿ ಕಟೀಲು ಎಸ್ಡಿಪಿಟಿ ಪ್ರಥಮ ದರ್ಜೆ ಕಾಲೇಜು ತಂಡವನ್ನು ಆಳ್ವಾಸ್ 35-9, 35- 8ರಲ್ಲಿ ಮಣಿಸಿತು. ಪುರುಷರ ವಿಭಾಗದ ಮೂರನೇ ಸ್ಥಾನ ಮಂಗಳೂರು ವಿವಿ ಕ್ಯಾಂಪಸ್ ತಂಡ ಗಳಿಸಿದರೆ ಮಹಿಳೆಯರ ವಿಭಾಗದ ಮೂರನೇ ಸ್ಥಾನ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು ತಂಡ ಪಡೆಯಿತು. ಆತಿಥೇಯ ಸೇಕ್ರೆಡ್ ಹಾರ್ಟ್ ಕಾಲೇಜು ಎರಡೂ ವಿಭಾಗಗಳಲ್ಲಿ 4ನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿತು.</p>.<p>ಪುರುಷರ ವಿಭಾಗದ ಉತ್ತಮ ಅಟ್ಯಾಕರ್ ಆಗಿ ಆಳ್ವಾಸ್ನ ಆಕಾಶ್, ಉತ್ತಮ ಡಿಫೆಂಡರ್ ಆಗಿ ಶ್ರೀಭುವನೇಂದ್ರ ಕಾಲೇಜಿನ ನಿಶಾಂತ್, ಉತ್ತಮ ಆಲ್ರೌಂಡರ್ ಆಗಿ ಆಳ್ವಾಸ್ನ ನಂದಕುಮಾರ್ ಆಯ್ಕೆಯಾದರು. ಮಹಿಳೆಯರ ವಿಭಾಗದಲ್ಲಿ ಈ ಮೂರು ಬಹುಮಾನಗಳು ಕ್ರಮವಾಗಿ ಆಳ್ವಾಸ್ನ ಗೀತಾ, ಕಟೀಲು ಕಾಲೇಜಿನ ಶಮಿತಾ ಮತ್ತು ಆಳ್ವಾಸ್ನ ತನುಶ್ರೀ ಪಾಲಾಯಿತು.</p>.<p>ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಗಳ ಸಂಚಾಲಕ ಫಾ. ಸ್ಟ್ಯಾನಿ ಗೋವಿಯಸ್ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.</p>.<p>ಸೇಕ್ರೆಡ್ ಹಾರ್ಟ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜೋಸೆಫ್ ಎನ್.ಎಂ., ಪ್ರಾಂಶುಪಾಲ ಪ್ರೊ ಅಲೆಕ್ಸ್ ಐವನ್ ಸಿಕ್ವೇರಾ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರಕಾಶ್ ಡಿಸೋಜ, ಪ್ರಮುಖರಾದ ಪ್ರೊ ಮ್ಯಾಕ್ಸಿಮ್ ಕಾರ್ಲ್, ಸೇಸಪ್ಪ ಗೌಡ, ಪ್ರವೀಣ್ ಕುಮಾರ್ ಕೆ, ಆಲ್ಬರ್ಟ್ ಮೊರಾಸ್, ಜೈನುದ್ದಿನ್, ಈಶ್ವರ್ ಗೌಡ, ಪ್ರೊ ನೆಲ್ಸನ್ ಮೋನಿಸ್ ಪಾಲ್ಗೊಂಡಿದ್ದರು. ಶಾಸಕ ಹರೀಶ್ ಪೂಂಜ ಟೂರ್ನಿಗೆ ಚಾಲನೆ ನೀಡಿದ್ದರು. ಕೆ.ಎಸ್ ಹೆಗ್ಡೆ ವೈದ್ಯಕೀಯ ಅಕಾಡೆಮಿಯ ದೈಹಿಕ ಶಿಕ್ಷಣ ನಿರ್ದೇಶಕ ಕರುಣಾಕರ್ ಶೆಟ್ಟಿ, ಪ್ರೊ ರಾಜನ್ ವಿ.ಎನ್, ಫಾ.ಲ್ಯಾರಿ ಪಿಂಟೊ, ಫಾ ದೀಪಕ್ ಡೇಸ, ಸೂರಜ್ ಚಾರ್ಲ್ಸ್, ನೆಲ್ಸನ್ ಲೆಸ್ರಾದೊ, ವಿಲ್ಸನ್ ರೂಪೇಶ್ ಮೊರಾಸ್ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-29-1819703358</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>