<p>ಧಾರವಾಡ: ಕಾಸ್ಮೋಸ್ ಕ್ಲಬ್ ಮತ್ತು ಅಭಿಜಿತ್ ಬೆಂಗೇರಿ ಫೌಂಡೇಷನ್ ವತಿಯಿಂದ ಮೇ 24ರಂದು ಮುಕ್ತ ಚೆಸ್ ಟೂರ್ನಿ ನಡೆಯಲಿದೆ ಎಂದು ಫೌಂಡೇಷನ್ ಅಧ್ಯಕ್ಷ ಅಭಿಜಿತ್ ಬೆಂಗೇರಿ ತಿಳಿಸಿದರು.</p>.<p>ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಸ್ಮೋಸ್ ಕ್ಲಬ್ ಆವರಣದಲ್ಲಿ ಬೆಳಿಗ್ಗೆ 9.30ಕ್ಕೆ ಟೂರ್ನಿ ಉದ್ಘಾಟನೆ ನಡೆಯಲಿದೆ. 9, 12 ಮತ್ತು 15 ವರ್ಷದೊಳಗಿನವರ ವಿಭಾಗ ಮತ್ತು ಮುಕ್ತ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ’ ಎಂದರು.</p>.<p>www.chesscircle.com ವೆಬ್ಸೈಟ್, ಮೊ:7022767354 ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಈವರೆಗೆ 80 ಆಟಗಾರರು ನೋಂದಾಯಿಸಿಕೊಂಡಿದ್ಧಾರೆ. ಗದಗ, ಹಾವೇರಿ, ಬಳ್ಳಾರಿ, ಉತ್ತರ ಕನ್ನಡ, ಬೆಳಗಾವಿ ಸಹಿತ ವಿವಿಧ ಜಿಲ್ಲೆಗಳ ಆಟಗಾರರ ಭಾಗಹಿಸುವರು. 24ರಂದು ಟೂರ್ನಿ ಸ್ಥಳದಲ್ಲೇ ನೋಂದಾಯಿಸಲು ಅವಕಾಶ ಇದೆ. ವಿಜೇತರಿಗೆ ಒಟ್ಫು ₹ 30 ಸಾವಿರ ನಗದು ಬಹುಮಾನ, ಪದಕ ನೀಡಲಾಗುವುದು ಎಂದರು.</p>.<p>ಕಾಸ್ಮೋಸ್ ಕ್ಲಬ್ ಅಧ್ಯಕ್ಷ ನಿತಿನ್ ಟಗರಪುರ, ಉಪಾಧ್ಯಕ್ಷ ಎಚ್.ಎಫ್. ಹೆಬ್ಬಾಳ, ಕಾರ್ಯದರ್ಶಿ ಅಶೋಕ ಹಿರೇಮಠ, ಅಭಿಜಿತ್ ಬೆಂಗೇರಿ ಫೌಂಡೇಷನ್ ಕಾರ್ಯದರ್ಶಿ ವಿಮರ್ಶಾ, ಕೆ.ವಿ. ಶ್ರೀಪಾದ, ಸಂದೀಪ ಸುದ್ದಿಗೋಷ್ಠಿಯಲ್ಲಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260522-24-1585710810</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ಕಾಸ್ಮೋಸ್ ಕ್ಲಬ್ ಮತ್ತು ಅಭಿಜಿತ್ ಬೆಂಗೇರಿ ಫೌಂಡೇಷನ್ ವತಿಯಿಂದ ಮೇ 24ರಂದು ಮುಕ್ತ ಚೆಸ್ ಟೂರ್ನಿ ನಡೆಯಲಿದೆ ಎಂದು ಫೌಂಡೇಷನ್ ಅಧ್ಯಕ್ಷ ಅಭಿಜಿತ್ ಬೆಂಗೇರಿ ತಿಳಿಸಿದರು.</p>.<p>ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಸ್ಮೋಸ್ ಕ್ಲಬ್ ಆವರಣದಲ್ಲಿ ಬೆಳಿಗ್ಗೆ 9.30ಕ್ಕೆ ಟೂರ್ನಿ ಉದ್ಘಾಟನೆ ನಡೆಯಲಿದೆ. 9, 12 ಮತ್ತು 15 ವರ್ಷದೊಳಗಿನವರ ವಿಭಾಗ ಮತ್ತು ಮುಕ್ತ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ’ ಎಂದರು.</p>.<p>www.chesscircle.com ವೆಬ್ಸೈಟ್, ಮೊ:7022767354 ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಈವರೆಗೆ 80 ಆಟಗಾರರು ನೋಂದಾಯಿಸಿಕೊಂಡಿದ್ಧಾರೆ. ಗದಗ, ಹಾವೇರಿ, ಬಳ್ಳಾರಿ, ಉತ್ತರ ಕನ್ನಡ, ಬೆಳಗಾವಿ ಸಹಿತ ವಿವಿಧ ಜಿಲ್ಲೆಗಳ ಆಟಗಾರರ ಭಾಗಹಿಸುವರು. 24ರಂದು ಟೂರ್ನಿ ಸ್ಥಳದಲ್ಲೇ ನೋಂದಾಯಿಸಲು ಅವಕಾಶ ಇದೆ. ವಿಜೇತರಿಗೆ ಒಟ್ಫು ₹ 30 ಸಾವಿರ ನಗದು ಬಹುಮಾನ, ಪದಕ ನೀಡಲಾಗುವುದು ಎಂದರು.</p>.<p>ಕಾಸ್ಮೋಸ್ ಕ್ಲಬ್ ಅಧ್ಯಕ್ಷ ನಿತಿನ್ ಟಗರಪುರ, ಉಪಾಧ್ಯಕ್ಷ ಎಚ್.ಎಫ್. ಹೆಬ್ಬಾಳ, ಕಾರ್ಯದರ್ಶಿ ಅಶೋಕ ಹಿರೇಮಠ, ಅಭಿಜಿತ್ ಬೆಂಗೇರಿ ಫೌಂಡೇಷನ್ ಕಾರ್ಯದರ್ಶಿ ವಿಮರ್ಶಾ, ಕೆ.ವಿ. ಶ್ರೀಪಾದ, ಸಂದೀಪ ಸುದ್ದಿಗೋಷ್ಠಿಯಲ್ಲಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260522-24-1585710810</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>