<p>ಆಲ್ದೂರು: ಸಮೀಪದ ಗುಡ್ಡದೂರು ಗ್ರಾಮದಲ್ಲಿ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೋಮವಾರ ಮುಕ್ತಾಯವಾಯಿತು.</p>.<p>ಕ್ರೀಡಾಕೂಟದಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದು, ಪ್ರಾದೇಶಿಕ ಪರಿಸರದ ಗುಡ್ಡದೂರು ಸಹರಾ ತಂಡ ಚಾಂಪಿಯನ್ ಆಗಿ ₹25 ಸಾವಿರ ನಗದು ಬಹುಮಾನ ಪಡೆಯಿತು. ದ್ವಿತೀಯ ಸ್ಥಾನ ಪಡೆದ ಯಲಗುಡಿಗೆ ಏಕತಾ ತಂಡ 13 ಸಾವಿರ ನಗದು ಗಳಿಸಿತು. ಬನ್ನೂರು ತಂಡ ತೃತೀಯ ಸ್ಥಾನ ಪಡೆದು ₹7 ಸಾವಿರ ನಗದು, ನಾಲ್ಕನೇ ಸ್ಥಾನ ಪಡೆದ ರೆಡ್ ಸ್ಟಾರ್ ದೇವರಹಳ್ಳಿ ₹4 ಸಾವಿರ ನಗದು ಬಹುಮಾನ ಪಡೆಯಿತು.</p>.<p>ಸಮಾರೋಪ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಕಠಾರದಹಳ್ಳಿ ಶಿವಕುಮಾರ್, ನವರಾಜು ಎಚ್, ರಕ್ಷಿತ್ ಗೌಡ ಭಾಗವಹಿಸಿದ್ದರು.</p>.<p>ಸರಣಿ ಸರ್ವೋತ್ತಮ ಪ್ರಶಸ್ತಿಯನ್ನು ಸಹರಾ ತಂಡದ ವಿಶ್ವ ಪಡೆದು ಕೊಂಡರು. ಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಸಹರಾ ತಂಡದ ಕಾರ್ತಿಕ್ ಭಾಜನರಾದರು. ಕ್ರೀಡಾಕೂಟದ ಆಯೋಜಕರಾದ ರಾಮು, ವಿಶ್ವ, ರವಿ ವಿ.ಕೆ, ಕಾರ್ತಿಕ್, ಶಿವ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-126-369054945</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಲ್ದೂರು: ಸಮೀಪದ ಗುಡ್ಡದೂರು ಗ್ರಾಮದಲ್ಲಿ ಆಯೋಜಿಸಿದ್ದ ಟೆನಿಸ್ ಬಾಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಸೋಮವಾರ ಮುಕ್ತಾಯವಾಯಿತು.</p>.<p>ಕ್ರೀಡಾಕೂಟದಲ್ಲಿ ಒಟ್ಟು 16 ತಂಡಗಳು ಭಾಗವಹಿಸಿದ್ದು, ಪ್ರಾದೇಶಿಕ ಪರಿಸರದ ಗುಡ್ಡದೂರು ಸಹರಾ ತಂಡ ಚಾಂಪಿಯನ್ ಆಗಿ ₹25 ಸಾವಿರ ನಗದು ಬಹುಮಾನ ಪಡೆಯಿತು. ದ್ವಿತೀಯ ಸ್ಥಾನ ಪಡೆದ ಯಲಗುಡಿಗೆ ಏಕತಾ ತಂಡ 13 ಸಾವಿರ ನಗದು ಗಳಿಸಿತು. ಬನ್ನೂರು ತಂಡ ತೃತೀಯ ಸ್ಥಾನ ಪಡೆದು ₹7 ಸಾವಿರ ನಗದು, ನಾಲ್ಕನೇ ಸ್ಥಾನ ಪಡೆದ ರೆಡ್ ಸ್ಟಾರ್ ದೇವರಹಳ್ಳಿ ₹4 ಸಾವಿರ ನಗದು ಬಹುಮಾನ ಪಡೆಯಿತು.</p>.<p>ಸಮಾರೋಪ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಕಠಾರದಹಳ್ಳಿ ಶಿವಕುಮಾರ್, ನವರಾಜು ಎಚ್, ರಕ್ಷಿತ್ ಗೌಡ ಭಾಗವಹಿಸಿದ್ದರು.</p>.<p>ಸರಣಿ ಸರ್ವೋತ್ತಮ ಪ್ರಶಸ್ತಿಯನ್ನು ಸಹರಾ ತಂಡದ ವಿಶ್ವ ಪಡೆದು ಕೊಂಡರು. ಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಸಹರಾ ತಂಡದ ಕಾರ್ತಿಕ್ ಭಾಜನರಾದರು. ಕ್ರೀಡಾಕೂಟದ ಆಯೋಜಕರಾದ ರಾಮು, ವಿಶ್ವ, ರವಿ ವಿ.ಕೆ, ಕಾರ್ತಿಕ್, ಶಿವ ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-126-369054945</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>