<p><strong>ಹರಿಹರ:</strong> ಮೇ 17ರಂದು ನಂಜನಗೂಡಿನಲ್ಲಿ ಕ್ರೀಡಾ ಅಕಾಡೆಮಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಪಂಜಾ ಕುಸ್ತಿ ಸ್ಪರ್ಧೆಯಲ್ಲಿ ಹರಿಹರದ ಬ್ರದರ್ಸ್ ಜಿಮ್ನ ಕ್ರೀಡಾಪಟುಗಳು 7 ಪದಕ ಹಾಗೂ 2 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.</p>.<p>70 ಕೆ.ಜಿ. ವಿಭಾಗದಲ್ಲಿ ಮೊಹಮ್ಮದ್ ಉಮರ್ ಫಾರೂಖ್, 80 ಕೆ.ಜಿ. ವಿಭಾಗದಲ್ಲಿ ಮೊಹಮ್ಮದ್ ಸಲಾವುದ್ದೀನ್, ಮಹಿಳೆಯರ 60 ಕೆ.ಜಿ. ವಿಭಾಗದಲ್ಲಿ ಎನ್.ರಂಜಿತಾ ಮತ್ತು 45 ಕೆ.ಜಿ.ವಿಭಾಗದಲ್ಲಿ ಚೆಲುವಿ ಜಿ. ಸ್ವರ್ಣ ಪದಕ; 85 ಕೆ.ಜಿ. ವಿಭಾಗದಲ್ಲಿ ಮೊಹಮ್ಮದ್ ನವಾಜ್, 70 ಕೆ.ಜಿ. ವಿಭಾಗದಲ್ಲಿ ಸೂರಜ್ ಸಿಂಗ್ ಬೆಳ್ಳಿ ಪದಕ, 55 ಕೆ.ಜಿ. ವಿಭಾಗದಲ್ಲಿ ಅಹಮದ್ ರಜಾ ಕಂಚಿನ ಪದಕ ಗಳಿಸಿದ್ದಾರೆ.</p>.<p>ವಿಶಿಷ್ಟ ಸಾಧನೆಗಾಗಿ ಮೊಹಮ್ಮದ್ ಸಲಾವುದ್ದೀನ್ ಅವರಿಗೆ ವಜ್ರ ಬಾಹು, ಮಹಿಳಾ ವಿಭಾಗದಲ್ಲಿ ಚೆಲುವಿ ಜಿ. ಅವರಿಗೆ ಶಕ್ತಿ ದೀಪ್ತಿ 2026 ಪ್ರಶಸ್ತಿ ನೀಡಲಾಗಿದೆ. ಸಾಧಕ ಕ್ರೀಡಾಪಟುಗಳಿಗೆ ಶಾಸಕ ಬಿ.ಪಿ.ಹರೀಶ್, ಅಂಜುಮನ್ ಎ ಇಸ್ಲಾಮಿಯಾ ಸಮಿತಿ ಅಧ್ಯಕ್ಷ ಅರ್.ಸಿ. ಜಾವೀದ್, ಜಿಮ್ನ ಸಂಚಾಲಕ ಅಕ್ರಂ ಬಾಷ, ತರಬೇತುದಾರ ಮೊಹಮ್ಮದ್ ರಫೀಕ್ ಹಾಗೂ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260521-43-1512383187</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಿಹರ:</strong> ಮೇ 17ರಂದು ನಂಜನಗೂಡಿನಲ್ಲಿ ಕ್ರೀಡಾ ಅಕಾಡೆಮಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಪಂಜಾ ಕುಸ್ತಿ ಸ್ಪರ್ಧೆಯಲ್ಲಿ ಹರಿಹರದ ಬ್ರದರ್ಸ್ ಜಿಮ್ನ ಕ್ರೀಡಾಪಟುಗಳು 7 ಪದಕ ಹಾಗೂ 2 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.</p>.<p>70 ಕೆ.ಜಿ. ವಿಭಾಗದಲ್ಲಿ ಮೊಹಮ್ಮದ್ ಉಮರ್ ಫಾರೂಖ್, 80 ಕೆ.ಜಿ. ವಿಭಾಗದಲ್ಲಿ ಮೊಹಮ್ಮದ್ ಸಲಾವುದ್ದೀನ್, ಮಹಿಳೆಯರ 60 ಕೆ.ಜಿ. ವಿಭಾಗದಲ್ಲಿ ಎನ್.ರಂಜಿತಾ ಮತ್ತು 45 ಕೆ.ಜಿ.ವಿಭಾಗದಲ್ಲಿ ಚೆಲುವಿ ಜಿ. ಸ್ವರ್ಣ ಪದಕ; 85 ಕೆ.ಜಿ. ವಿಭಾಗದಲ್ಲಿ ಮೊಹಮ್ಮದ್ ನವಾಜ್, 70 ಕೆ.ಜಿ. ವಿಭಾಗದಲ್ಲಿ ಸೂರಜ್ ಸಿಂಗ್ ಬೆಳ್ಳಿ ಪದಕ, 55 ಕೆ.ಜಿ. ವಿಭಾಗದಲ್ಲಿ ಅಹಮದ್ ರಜಾ ಕಂಚಿನ ಪದಕ ಗಳಿಸಿದ್ದಾರೆ.</p>.<p>ವಿಶಿಷ್ಟ ಸಾಧನೆಗಾಗಿ ಮೊಹಮ್ಮದ್ ಸಲಾವುದ್ದೀನ್ ಅವರಿಗೆ ವಜ್ರ ಬಾಹು, ಮಹಿಳಾ ವಿಭಾಗದಲ್ಲಿ ಚೆಲುವಿ ಜಿ. ಅವರಿಗೆ ಶಕ್ತಿ ದೀಪ್ತಿ 2026 ಪ್ರಶಸ್ತಿ ನೀಡಲಾಗಿದೆ. ಸಾಧಕ ಕ್ರೀಡಾಪಟುಗಳಿಗೆ ಶಾಸಕ ಬಿ.ಪಿ.ಹರೀಶ್, ಅಂಜುಮನ್ ಎ ಇಸ್ಲಾಮಿಯಾ ಸಮಿತಿ ಅಧ್ಯಕ್ಷ ಅರ್.ಸಿ. ಜಾವೀದ್, ಜಿಮ್ನ ಸಂಚಾಲಕ ಅಕ್ರಂ ಬಾಷ, ತರಬೇತುದಾರ ಮೊಹಮ್ಮದ್ ರಫೀಕ್ ಹಾಗೂ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260521-43-1512383187</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>